Tuesday, February 24, 2026

ಧನುರ್ಮಾಸದ ಮಹತ್ವ

25ರ ಧನುರ್ಮಾಸದ ಪ್ರಮುಖ ವಿವರಗಳು ಇಲ್ಲಿವೆ:

  • ಆರಂಭ: ಡಿಸೆಂಬರ್ 16, 2025 (ಮಂಗಳವಾರ).
  • ಅಂತ್ಯ: ಜನವರಿ 14, 2026 (ಬುಧವಾರ) ಮಕರ ಸಂಕ್ರಾಂತಿಯೊಂದಿಗೆ ಮುಕ್ತಾಯವಾಗುತ್ತದೆ. 
  • ಸೂರ್ಯನು ಧನು ರಾಶಿಯನ್ನು ಪ್ರವೇಶಿಸಿದಾಗ ಈ ಮಾಸ ಆರಂಭವಾಗುತ್ತದೆ, ಆದ್ದರಿಂದ ಇದನ್ನು ಧನು ಸಂಕ್ರಮಣ ಎಂದೂ ಕರೆಯುತ್ತಾರೆ.
  • ಇದು ಭಗವಾನ್ ವಿಷ್ಣುವಿನ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ಸಮಯ.
  • ಈ ಮಾಸದಲ್ಲಿ ಬೆಳಗಿನ ಜಾವ (ಬ್ರಾಹ್ಮೀ ಮುಹೂರ್ತದಲ್ಲಿ) ಮಾಡುವ ಪೂಜೆಗೆ ಹೆಚ್ಚಿನ ಫಲವಿದೆ ಎಂದು ನಂಬಲಾಗಿದೆ.
  • ವಿಶೇಷವಾಗಿ ಮುದ್ಗಾನ್ನ (ಹುಗ್ಗಿ) ನೈವೇದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ. 

ನೆನಪಿಡಬೇಕಾದ ಅಂಶಗಳು

  • ಶುಭ ಕಾರ್ಯಗಳ ನಿಷೇಧ: ಧನುರ್ಮಾಸವನ್ನು ‘ಶೂನ್ಯ ಮಾಸ’ ಅಥವಾ ‘ಖಾರ್ಮಾಸ’ ಎಂದು ಕರೆಯಲಾಗುವುದರಿಂದ ಮದುವೆ, ಗೃಹಪ್ರವೇಶ, ಮುಂಡನ ಮತ್ತು ಹೊಸ ಆಸ್ತಿ ಖರೀದಿಗಳಂತಹ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಮಾಡಲಾಗುವುದಿಲ್ಲ.
  • ಪ್ರಮುಖ ದಿನ: ಈ ಬಾರಿಯ ಧನುರ್ಮಾಸದಲ್ಲಿ ವೈಕುಂಠ ಏಕಾದಶಿಯು ಡಿಸೆಂಬರ್ 30, 2025ರಂದು ಬರುತ್ತದೆ. 

ಧನುರ್ಮಾಸದ ಮಹತ್ವ

ಧನುರ್ಮಾಸವು ಪ್ರತೀ ವರ್ಷ ಡಿಸೆಂಬರ್‌ ಮತ್ತು ಜನವರಿಯಲ್ಲಿ ಬರುತ್ತದೆ. ಧರ್ಮಗ್ರಂಥಗಳ ಪ್ರಕಾರ, ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸಿದ ದಿನದಿಂದ ಒಂದು ತಿಂಗಳು ಧನುರ್ಮಾಸವಿರುತ್ತದೆ. ಈ ಸಮಯದಲ್ಲಿ ಮದುವೆ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿರುತ್ತದೆ. ಧನುರ್ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿದ್ದರೂ ಇನ್ನು ಕೆಲವೊಂದು ಕೆಲಸಗಳನ್ನು ಮಾಡುವುದು ಶುಭವಾಗಿರುತ್ತದೆ. ಇದು ನಮ್ಮ ಜೀವನವನ್ನು ಸುಧಾರಣೆಗೆ ತಂದು ಸಕಾರಾತ್ಮಕ ಬದಲಾವಣೆಯನ್ನು ತರುವುದು.   ಮಾಡುವುದರಿಂದ ಜೀವನಕ್ಕೆ ಅಪಾರ ಸಂತೋಷ, ಸಮೃದ್ಧಿ ಮತ್ತು ಶಾಂತಿ ಸಿಗಬಹುದು. ಅದೇ ರೀತಿ ಧನುರ್ಮಾಸದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ಕೂಡ ನಿಷಿದ್ಧವಾಗಿರುತ್ತದೆ

ಧನುರ್ಮಾಸವು ಪವಿತ್ರವಾದ ಮಾಸವಾದ್ದರಿಂದ ಈ ಮಾಸದಲ್ಲಿ ಮಾಡುವಂತಹ ಎಲ್ಲಾ ಧಾರ್ಮಿಕ ಕ್ರಿಯೆಗಳು ನಮ್ಮನ್ನು ದೇವರಿಗೆ ಹತ್ತಿರವಾಗುವಂತೆ ಮಾಡುತ್ತದೆ. ಧನುರ್ಮಾಸದಲ್ಲಿ ನಮ್ಮ ಧಾರ್ಮಿಕ ಗ್ರಂಥಗಳನ್ನು ಪಠಿಸುವುದು ತುಂಬಾನೇ ಒಳ್ಳೆಯದು. ಈ ಸಮಯದಲ್ಲಿ ನಮ್ಮ ಧಾರ್ಮಿಕ ಗ್ರಂಥಗಳಾದ ಭಗವದ್ಗೀತೆಯನ್ನು, ರಾಮಾಯಣವನ್ನು  ಶುಭವೆಂದು ಪರಿಗಣಿಸಲಾಗುತ್ತದೆ. ಈ ಗ್ರಂಥಗಳನ್ನು ಪಠಿಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ಜೀವನದಲ್ಲಿ ಶಾಂತಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.

ಖಾರ್ಮಾಸದ ಸಮಯ ತೊಡಗಿಸಿಕೊಳ್ಳುವುದು ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಈ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸುವುದು ಅಷ್ಟೇ ಪ್ರಯೋಜನಕಾರಿಯಾಗಿದೆ. ಖಾರ್ಮಾಸದಲ್ಲಿ ಉಪವಾಸವನ್ನು ಮಾಡಬೇಕೆಂದರೆ, ಸಂಪೂರ್ಣ ತಿಂಗಳು ನಾವು ಉಪವಾಸದಲ್ಲಿರುವುದಲ್ಲ, ಬದಲಾಗಿ ಖಾರ್ಮಾಸದಲ್ಲಿ ಬರುವಂತಹ ವಿಶೇಷ ದಿನಗಳಲ್ಲಿ ಅಥವಾ ವಿಷ್ಣು ದೇವನಿಗೆ ಸಮರ್ಪಿತವಾದ ದಿನಗಳಲ್ಲಿ ಉಪವಾಸವನ್ನು ಆಚರಿಸಬೇಕು. ಅದರಲ್ಲೂ, ಗುರುವಾರ, ಸೋಮವಾರ ಉಪವಾಸ ಮಾಡಬಹುದು. ಇದು ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧಗೊಳಿಸುತ್ತದೆ.

ಗೋವುಗಳು ಮೂಕ ಪ್ರಾಣಿಯಾದರೂ ನಾವು ಅವುಗಳಿಗೆ ದೇವರ ಸ್ಥಾನವನ್ನು, ತಾಯಿಯ ಸ್ಥಾನವನ್ನು ನೀಡಿದ್ದೇವೆ.  ಅವುಗಳಿಗೆ ಆಹಾರವನ್ನು ನೀಡುವುದು ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಖಾರ್ಮಾಸದಲ್ಲಿ ಗೋವುಗಳಿಗೆ ಆಹಾರವನ್ನು ನೀಡುವುದು ಪುಣ್ಯ ಕಾರ್ಯವಾಗಿದೆ. ಈ ಮಾಸದಲ್ಲಿ ಹಸುಗಳ ಸೇವೆಯನ್ನು ಮಾಡುವ ವ್ಯಕ್ತಿಯು ತನ್ನ ಜೀವನದಲ್ಲಿ ಸಮೃದ್ಧಿಯನ್ನು ಮತ್ತು ಸಂತೋಷವನ್ನು ಪಡೆದುಕೊಳ್ಳುತ್ತಾನೆ.

ಧನುರ್ಮಾಸದಲ್ಲಿ ನಾವು ಧ್ಯಾನವನ್ನು ಮಾಡಬೇಕು ಮತ್ತು ಆಧ್ಯಾತ್ಮಿಕ ಅಭ್ಯಾಸಗಳನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕು. ಧನುರ್ಮಾಸದಲ್ಲಿ ಮಾಡುವಂತಹ ಧ್ಯಾನ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಮಾನಸಿಕ ಶಾಂತಿಯನ್ನು ಪಡೆಯಲು ಮತ್ತು ಸ್ವಯಂ ಸಾಕ್ಷಾತ್ಕಾರವನ್ನು ಸಾಧಿಸಲು ಸಹಾಯ ಮಾಡುವುದು. ಈ ಒಂದು ತಿಂಗಳ ಸಮಯವು ಧ್ಯಾನ, ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸೂಕ್ತವಾದ ಸಮಯವಾಗಿದೆ. ಈ ಸಮಯದಲ್ಲಿ, ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕ ಆಲೋಚನೆಗಳ ಮೇಲೆ ಕೇಂದ್ರೀಕರಿಸಿ

ಧನು ಸಂಕ್ರಾಂತಿಯ ದಿನದಂದು ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾಗಿ, ಈ ದಿನವನ್ನು ಧನು ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಈ ದಿನವು ಪಿತೃಗಳ ಆರಾಧನೆಗೆ ಪ್ರಶಸ್ಥವಾದ ದಿನವಾಗಿದೆ. ಈ ದಿನದಂದು ಪಿತೃಗಳಿಗೆ ತರ್ಪಣವನ್ನು ಅರ್ಪಿಸುವುದು, ಪಿತೃಗಳ ಪ್ರಾರ್ಥನೆಯನ್ನು ಸಲ್ಲಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಈ ದಿನ ಮಾಡುವ ತರ್ಪಣ, ಪಿತೃ ಪೂಜೆಯಿಂದ  ಪಡೆದುಕೊಳ್ಳುತ್ತದೆ. ಧನು ಸಂಕ್ರಾಂತಿಯ ದಿನದಂದು ನಾವು ಈ ವಸ್ತುಗಳನ್ನು ದಾನ ಮಾಡುವುದರಿಂದ ಪಿತೃಗಳು ನಮ್ಮಿಂದ ಸಂತುಷ್ಟರಾಗುತ್ತಾರೆ. ಜೀವನಕ್ಕೆ ಸಂತೋಷ ಮತ್ತು ಶಾಂತಿಯನ್ನು ಕರುಣಿಸುತ್ತಾರೆ.

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles