Wednesday, May 27, 2026
Home Blog

ಕುಡಿಯುವ ನೀರಿಗಾಗಿ ಭಕ್ತರಹಳ್ಳಿ ಗ್ರಾಪಂ ಗೆ ಬೀಗ

0

ಸಮರ್ಪಕ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ನೂರಾರು ಮಹಿಳೆಯರು ಖಾಲಿ ಕೊಡದೊಂದಿಗೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಬೀಗ ಜಡಿದ ಘಟನೆ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಮುಖಂಡ ವೆಂಕಟೇಶ್ ರಾಜು ನೇತೃತ್ವದಲ್ಲಿ ಹಲವಾರು ಮಹಿಳೆಯರು ಖಾಲಿ ಕೊಡಗಳ ಸಮೇತ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತು ಹೋರಾಟಕ್ಕೆ ಮುಂದಾದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು ಹಲವಾರು ತಿಂಗಳುಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ನೋಡೆಲ್ ಅಧಿಕಾರಿಗಳು ಸೇರಿದಂತೆ ಪಿಡಿಒ ಹಾಗೂ ಇತರರು ಕೇವಲ ಹಾರಿಕೆ ಉತ್ತರ ನೀಡುತ್ತಾರೆ ನಮಗೆ ಬೇಕಾದ ಕುಡಿಯುವ ನೀರನ್ನು ನೀಡುವ ಬದಲು ಉದಾಸೀನತೆ ಎಷ್ಟು ಸರಿ ಎಂದು ಪ್ರಶ್ನಿಸಿದರು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿಲ್ಲ ಬೇರೆ ಭಾಗದಿಂದ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿವೆ ಎಂದು ವಾರಕ್ಕೆ ಒಮ್ಮೆ ಒಂದು ಎರಡು ಬಿಂದಿಗೆ ನೀರು ಕೊಟ್ಟು ಸುಮ್ಮನಾಗುತ್ತಾರೆ .

ಜನಪ್ರತಿನಿಧಿಗಳಿಗೆ ಅಧಿಕಾರ ಇಲ್ಲ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆ ಸರಿ ಇಲ್ಲ ಎಂದರು .

ಈ ಸಂದರ್ಭದಲ್ಲಿ ಚಂದ್ರಮ್ಮ, ಸಂಗೀತಮ್ಮ,ಪ್ರೇಮ,ಪದ್ಮ ,ವಸಂತ,ನಾಗರಾಜು,ಅನ್ನಪೂರ್ಣಮ್ಮ ಸೇರಿದಂತೆ ಹಲವಾರು ಮಹಿಳೆಯರು ಇದ್ದರು .

ಫೋಟೋ ಇದೆ : 18 ಕೆಜಿಎಲ್ 3 : – ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನಾ ನಿರತ ಮಹಿಳೆಯರು

ಡಿವೈಡರ್ ಗೆ ಕಾರು ಡಿಕ್ಕಿ ಸ್ಥಳದಲ್ಲಿ ತಾಯಿ ಮಗಳು ಸಾವು

0

ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಉರ್ಕೇಹಳ್ಳಿ ಬಳಿ ಶ್ರವಣಬೆಳಗೊಳಕ್ಕೆ ಹೋಗುವ ಮಾರ್ಗಮಧ್ಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ತಾಯಿ ಜಯಮಾಲ(59) ಹಾಗೂ ಮಗಳು ರಾಜಲಕ್ಷ್ಮೀ(40) ಸ್ಥಳದಲ್ಲಿ ಮೃತಪಟ್ಟಿದ್ದು , ಮಗ ಪ್ರೀತಮ್ ಹಾಗೂ ಚಾಲಕ ತಮ್ಮ ಮಹಾವೀರ ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ .ತುಮಕೂರಿನಿಂದ ಶ್ರವಣಬೆಳಗೊಳಕ್ಕೆ ಶಾಲೆಗೆ ಸೇರಿಸಲು ಮೊಮ್ಮಗ ಪ್ರೀತಮ್ ನನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕಾರು ಚಾಲಕನ ನಿಯತ್ರಣ ತಪ್ಪಿ ಈ ಘಟನೆ ನಡೆದಿದೆ

ರಸ್ತೆಯಲ್ಲಿ ಅಪಘಾತದ ರಭಸಕ್ಕೆ ದೇಹ ಮತ್ತು ಕಾರಿನ ಬಿಡಿಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಇಬ್ಬರು ಹಿಂಬದಿ ಸವಾರರಾಗಿದ್ದು ಕರು ಸಂಪೂರ್ಣ ಜಖಂಗೊಂಡಿದೆ , ಶವಗಳನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿಕೊಂಡು ಸಿಪಿಐ ಮಾಧ್ಯನಾಯಕ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ .

ಗ್ರಾಮಸ್ಥರ ಕಿತ್ತಾಟ ದೇವರಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಹಬ್ಬ

0

ತಾಲೂಕಿನ ಅಮೃತೂರು ಹೋಬಳಿಯ ಕೊರಠಿ ತಿರುಮಲ ಪಾಳ್ಯದಲ್ಲಿ ನಡೆಯಬೇಕಾಗಿದ್ದ ಗ್ರಾಮ ದೇವತೆ ಹಬ್ಬದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಮನಸ್ತಾಪದಿಂದ ಪೊಲೀಸರ ಬಂದೂಬಸ್ತ್ ನಲ್ಲಿ ಹಬ್ಬ ಮಾಡಿದ ಘಟನೆ ನಡೆದಿದೆ.

ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ಜಾತ್ರೆ ರಥೋತ್ಸವ ನಡೆಯುವ ಸಿದ್ಧತೆ ನಡೆದಿತ್ತು

ಈ ಸಂಬಂಧ ಗ್ರಾಮದ ಮುಖಂಡರೆಲ್ಲಾ ಸೇರಿ ಹಬ್ಬದ ಸಂಬಂಧ ಸಭೆ ನಡೆಸಿದ್ದರು .ಸೋಮವಾರ ನಡೆದ ಸಭೆಯಲ್ಲಿ ಗ್ರಾಮದ ಹಲವಾರು ಮುಖಂಡರು ಸೇರಿದ್ದರು ಕೂಡ ಹಬ್ಬ ನಡೆಯುವ ದಿನಾಂಕ ಗೊತ್ತು ಪಡಿಸುವಲ್ಲಿ ಗೊಂದಲಕ್ಕೆ ಉಂಟಾಗಿ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.ಮುಂದುವರಿದ ಸಭೆ ಬುಧವಾರ ಪ್ರಾರಂಭವಾಗಿ ಮುಖಂಡರು ದಿನಾಂಕವನ್ನು ನಿಗದಿ ಪಡಿಸುವಲ್ಲಿ ಹಾಗೂ ಹಲವಾರು ಬೇಡವಾದ ನಿಬಂಧನೆಗಳ ಹಾಕಿದ ಹಿನ್ನೆಲೆಯಲ್ಲಿ ಸಭೆ ಮೊಟಕುಗೊಂಡಿತು.ಹಬ್ಬದ ದಿನಾಂಕ ನಿಗದಿ ಆಗದೆ ಬೇಸರಗೊಂಡ ಗ್ರಾಮದ ಮುಖಂಡರಾದ ಶಿವಣ್ಣಪ್ಪ ಟಿ ವೆಂಕಟೇಶ್ ಪದ್ಮನಾಭ ಪುಟ್ಟಸ್ವಾಮಿ ಸತೀಶ್ ನಿಂಗೇಗೌಡ ವೆಂಕಟೇಶ್ ಸೇರಿದಂತೆ ಹಲವಾರು ಮಂದಿ ತಹಸೀಲ್ದಾರ್ ಗೆ ಹಬ್ಬ ಮಾಡುವ ಸಂಬಂಧ ಅರ್ಜಿ ನೀಡಿ ಹಬ್ಬದ ತಯಾರಿಕೆ ಮುಂದಾಗಿದ್ದರು.ಈ ಘಟನೆಯಿಂದ ಮತ್ತೊಂದು ಬಣದ ಕಾಂಗ್ರೇಸ್ಹ ಮುಖಂಡರಾದ ಹನುಮಂತೇಗೌಡ ದಿವಾಕರ್ ಗೌಡ ಲಿಂಗೇಗೌಡ ರಾಮಾಂಜನೇಯ ಎಂಬುವರು ತಾಸಿಲ್ದಾರ್ ಗೆ ಒತ್ತಡ ತಂದು ಹಬ್ಬವನ್ನು ಮಾಡದಂತೆ ಜಾತ್ರೆ ಮಾಡದಂತೆ ಅನ್ನದಾನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡದಂತೆ ಪೊಲೀಸರ ಮುಖಾಂತರ ತಡೆ ನೀಡಿದರು.ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ದೇವಾಲಯಕ್ಕೆ ಹಾಕಲಾಗಿದ್ದ ಶಾಮಿಯಾನ, ಅಡುಗೆ ಊಟದ ವ್ಯವಸ್ಥೆ, ಎಲ್ಲವನ್ನು ಅಲ್ಲಿಂದ ತೆರವುಗೊಳಿಸಿ ಕೇವಲ ಪೂಜೆ ಮಾಡುವಂತೆ ಹಬ್ಬ ಮಾಡದಂತೆ ತಾಕಿತು ಮಾಡಿ ದೇವಾಲಯಕ್ಕೆ ಪೊಲೀಸ್ ಕಾವಲು ಹಾಕಿದರು.ಆದ್ದರಿಂದ ಸಾಮಾನ್ಯವಾಗಿ ದೇವರ ವಿಗ್ರಹಕ್ಕೆ ಅಭಿಷೇಕ ಪೂಜೆ ಪುಷ್ಪಾರ್ಚನೆ ಪ್ರಸಾದ ವಿನಿಯೋಗ ನಡೆಯಿತುಗ್ರಾಮದ ಹಲವರು ವಾಸಿಗಳು ಹಾಗೂ ಬೆಂಗಳೂರು ಮಂಡ್ಯ ರಾಮನಗರ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರುಗಳು ತಮ್ಮ ನೆಚ್ಚಿನ ದೇವರಿಗೆ ಪೂಜೆ ಮಾಡಿಸಿ ಈ ರೀತಿ ವ್ಯವಸ್ಥೆ ತಂದ ಮುಖಂಡರಿಗೆ ಹಿಡಿ ಶಾಪ ಹಾಕುತ್ತಿದ್ದರು.ಸ್ಥಳಕ್ಕೆ ಕಂದಾಯ ನಿರೀಕ್ಷಕರಾದ ರವಿ ಡಿವೈಎಸ್ಪಿ ಓಂ ಪ್ರಕಾಶ್ ಸಿಪಿಐ ನವೀನ್ ಸ್ಥಳದಲ್ಲಿ ಟಿಕ್ಕಾಣಿ ಹೂಡಿ ಬಂದೂ ಬಸ್ತ್ ವ್ಯವಸ್ಥೆ

ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಪದ್ಮನಾಭ ದೇವರ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ನಾವು ಹಲವಾರು ಮನೆಯವರು ದೇವರ ಪೂಜೆ ಆರತಿ ಹಬ್ಬ ಮಾಡಲು ತಯಾರಿದ್ದೇವೆ ಆದರೆ ಕೆಲವು ಕಾಂಗ್ರೆಸ್ ಬೆಂಬಲಿತ ವ್ಯಕ್ತಿಗಳು ತಮ್ಮ ಅಧಿಕಾರ ಬಳಸಿಕೊಂಡು ಈ ರೀತಿ ಅಧಿಕಾರಿಗಳ ಮೇಲೆ ಒತ್ತಡ ತಂದು ಹಬ್ಬ ನಿಲ್ಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಇಂಥವರಿಗೆ ದೇವರು ಸರಿಯಾದ ಶಿಕ್ಷೆ ಕೊಡುತ್ತಾನೆ ಎಂದು ಹಿಡೀ ಶಾಪ ಹಾಕಿದರು

ಮದುವೆ ದಿನವೇ ಮಸಣ ಸೇರಿದ ಕುಟುಂಬ

0

ತಾಲೂಕಿನ ಕೊತ್ತಗೆರೆ ಹೋಬಳಿಯ ಚಿಗನಿ ಪಾಳ್ಯದ ಬಳಿ ಕುಣಿಗಲ್ ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮಂಡ್ಯ ಮೂಲದ ನಾಲ್ಕು ವ್ಯಕ್ತಿಗಳು ಕಾರು ಮತ್ತು ಲಾರಿ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ .

ಮೃತಪಟ್ಟವರು ಮಂಡ್ಯ ಮೂಲದ ಸ್ವರ್ಣನಗರ ನಿವಾಸಿ ಗಳೆಂದು ತಿಳಿದು ಬಂದಿದೆ

ಮೃತ ದಂಪತಿಗಳು ಕುಮಾರ ನರಸಿಂಹಮೂರ್ತಿ(65) ಹಾಗೂ ಆತನ ಪತ್ನಿ ಗಾಯತ್ರಿ(61) , ತಂಗಿ ಕೆಆರ್ ಗಾಯಿತ್ರಿ (60) ಡ್ಯ್ರೆವರ್ ರಘುಕುಮಾರ್ (55)

ಮೃತಪಟ್ಟವರು ,.ಮೃತ ದಂಪತಿಗಳು ತಮ್ಮ 25 ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ತುಮಕೂರಿನ ಬಳಿ ಇರುವ ದೇವರಾಯನ ದುರ್ಗದ ಯೋಗ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಈ ಘಟನೆ ನಡೆದಿದೆ.ಮಂಡ್ಯ ನಗರದಲ್ಲಿ ನಡೆಯಬೇಕಾಗಿದ್ದ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧ ವಾಪಸ್ ಹೋಗುವಾಗ ಎದುರಿಗೆ ಬಂದ ಗೊಬ್ಬರ ತುಂಬಿದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹಾಗೂ ಪ್ರಯಾಣಿಕರ ದೇಹದ ಬಿಡಿ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಿದ್ದವುಅಪಘಾತ ನಡೆದ ನಂತರ ಕಾರಿನಲ್ಲಿದ್ದ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹಾಗೂ ಸಾರ್ವಜನಿಕರು ಗಂಟೆಗಟ್ಟಲೆ ಹರಸಾಹಸ ಪಡಬೇಕಾಯಿತು

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಸುಮಾರು ಮೂರು ಕಿಲೋಮೀಟರ್ ವರೆಗೂ ಎಡ ಮತ್ತು ಬಲ ಭಾಗದಲ್ಲಿ ಕಿರಿದಾದ ರಸ್ತೆ ಆದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗಿತ್ತು .ಪೊಲೀಸರು ಸಂಚಾರಿ ಸುಗಮಗೊಳಿಸುವಲ್ಲಿ ಗಂಟೆಗಟ್ಟಲೇ ಸಾಹಸ ಪಟ್ಟು ನಂತರ ರಸ್ತೆ ಸುಲಭ ಸಂಚಾರಕ್ಕೆ ಅನುವು ಮಾಡಿದ್ದರು .

ದಿನನಿತ್ಯ ಸಾವು :-

ಕಳೆದ ಹಲವಾರು ದಿನಗಳಿಂದ ತುಮಕೂರು ಮದ್ದೂರು ಕೆ ಶಿಪ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ ವಾರಾಂತ್ಯದಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಿದೆ ಕಳೆದ ಮೂರು ದಿನಗಳಲ್ಲಿ ಕೊತ್ತಗೆರೆ ಬಳಿ ನಡೆದಂತಹ ಅಪಘಾತದಲ್ಲಿ ಎರಡು , ಗವಿಮಠದ ಬಳಿ ಒಂದು ಸೇರಿದಂತೆ ಈ ಘಟನೆಯಲ್ಲಿ ನಾಲ್ಕು ಮಂದಿ ಸೇರಿ ಒಟ್ಟಾರೆ ಏಳು ಮಂದಿ ಮೃತಪಟ್ಟಿದ್ದಾರೆ

ರಸ್ತೆ ಅಗಲೀಕರಣಕ್ಕೆ ಒತ್ತಾಯ :-

ಕೇಶೀಪ್ರ ರಸ್ತೆ ಅಭಿವೃದ್ಧಿಪಡಿಸುವ ನೆಪದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಭೂಮಿಯನ್ನು ವಶಕ್ಕೆ ಪಡೆದು ಸರ್ಕಾರ ಪರಿಹಾರ ನೀಡಿದೆ ಆದರೆ ಕೆಲವೆಡೆ ಆ ಭೂಮಿಯನ್ನು ಕೂಡ ರಸ್ತೆಗೆ ಬಳಸಿಕೊಳ್ಳದೆ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿಪಡಿಸಿದರೆ ಅಪಘಾತಗಳನ್ನು ತಡೆಯಲು ಸಂಪೂರ್ಣ ಸಾಧ್ಯವಾಗುತ್ತದೆ ಏಕಪದ ರಸ್ತೆಯಿಂದ ದ್ವಿಪದಾರಸ್ತೆಗೆ ಮೇಲ್ದರ್ಜೆಗೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ವಿಚ್ಛೇದನ ಪಡೆಯದೆ ಎರಡನೇ ಮದುವೆಗೆ ಯತ್ನಿಸಿದ ವರನಿಗೆ ಶಾಕ್ ನೀಡಿದ ಪತ್ನಿ

0

ತಾಲೂಕಿನ ಎಡೆಯೂರು ಶ್ರೀಕ್ಷೇತ್ರದ ಆವರಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯನ್ನು ವರನ ಮೊದಲ ಪತ್ನಿ ಸೇರಿದಂತೆ ಪೊಲೀಸರು ತಡೆದು ಆರೋಪಿ ವರನನ್ನು ಅಮೃತೂರು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ .

ಬೆಂಗಳೂರಿನ ಆರ್ ಆರ್ ನಗರ ಮೂಲದ ಹರಿಪ್ರಸಾದ್ ತನ್ನ ಮೊದಲ ಹೆಂಡತಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪುಣ್ಯ ಎಂಬಾಕೆಯನ್ನು ಎರಡನೇ ಮದುವೆ ಮಾಡಿಕೊಳ್ಳುವಾಗ ಎಡೆಯೂರಿನ ಕಲ್ಯಾಣ ಮಂಟಪದಲ್ಲಿ ಪೊಲೀಸರ ಜೊತೆ ಮದುವೆ ಮಂಟಪಕ್ಕೆ ಎಂಟ್ರಿಕೊಟ್ಟ ಲೇಪಾಕ್ಷಿ ಸಿನಿಮಾ ಮಾದರಿಯಲ್ಲಿ ಮದುವೆ ತಡೆದಿದ್ದಾರೆ.ಮದುಮಗ ಹರಿಪ್ರಸಾದ್ ತನ್ನ ಬಾಲ್ಯ ಸ್ನೇಹಿತೆ ಲೇಪಾಕ್ಷಿಯನ್ನು ಮದುವೆಯಾಗಿದ್ದ ಸಂದರ್ಭದಲ್ಲಿ ಆಕೆ ಅಪ್ರಾಪ್ತೆ ಎಂದು ತಿಳಿದ ನಂತರ ಮದುವೆಯನ್ನು ಗುಟ್ಟಾಗಿ ಇಟ್ಟು ನಂತರ ಪುನಹ ಆಕೆಗೆ 18 ವರ್ಷ ತುಂಬಿದ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಿ 10 ವರ್ಷ ಸಂಸಾರ ನಡೆಸಲಾಗಿತ್ತು .

ದಿನ ಕಳೆದಂತೆ ಲೇಪಾಕ್ಷಿಗೆ ತನ್ನ ಅತ್ತೆ ನಾದಿನಿ ಸೇರಿದಂತೆ ಗಂಡ ಹೆಚ್ಚು ತೊಂದರೆ ನೀಡುತ್ತಿದ್ದರು ಹಾಗೂ ಆಕೆಯ ಸಂಬಳವನ್ನು ಕಸಿದುಕೊಂಡು ಮಾನಸಿಕ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆಕೆ ದೂರಿದ್ದು ಆತನ ಕೆಲ ಅಕ್ರಮ ಸಂಬಂಧಗಳ ವಿಚಾರವಾಗಿ ಕೌಟುಂಬಿಕ ಕಲಹ ನಡೆಯುತ್ತಿತ್ತು ಎಂದು ಲೇಪಾಕ್ಷಿ ತಿಳಿಸಿದ್ದಾರೆ .ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮನನೊಂದ ಲೇಪಾಕ್ಷಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು

ಈ ಸಂಬಂಧ ಮಧ್ಯಸ್ಥಿಕೆ ನ್ಯಾಯದಲ್ಲಿ ಪುನಹ ಲೇಪಾಕ್ಷಿ ಜೊತೆಗೆ ಬಂದು ಬಾಳುವುದಾಗಿ ವಾಟ್ಸಾಪ್ತಿ ಮುಖಾಂತರ ತಿಳಿಸಿದ ಹರಿಪ್ರಸಾದ್ ಇತ್ತ ಮತ್ತೊಂದು ಮದುವೆಯಾಗಲು ಮೊದಲ ಪತ್ನಿಗೆ ತಿಳಿಯದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಪುಣ್ಯಶ್ರೀ ಎಂಬುವರ ಜೊತೆ ಮದುವೆ ನಿಗದಿ ಮಾಡಿಕೊಂಡು ಯಡಿಯೂರಿನ ಕಲ್ಯಾಣಮಂಟಪದಲ್ಲಿ ಈ ದಿನ ಹಸೆಮಣೆ ಏರಿದ್ದ ವಿಚಾರ ತಿಳಿಯುತ್ತಿದ್ದಂತ ಮೊದಲ ಪತ್ನಿ ವಕೀಲರು ಹಾಗೂ ಪೊಲೀಸರ ಜೊತೆಗೂಡಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಂಡನ ಮದುವೆಯನ್ನು ತಡೆದಿದ್ದಾರೆ .

ಎರಡು ಹೆಣ್ಣುಗಳಿಗೆ ಅನ್ಯಾಯಮೊದಲ ಪತ್ನಿ ಲೇಪಾಕ್ಷಿಗೆ ತಿಳಿಯದಂತೆ ಮತ್ತೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸಿದ ಹರಿಪ್ರಸಾದ್ ತನ್ನ ಜಾತಿಯನ್ನು ಮುಚ್ಚಿಟ್ಟು ತಾನು ಕೂಡ ಒಕ್ಕಲಿಗ ಎಂದು ಸುಳ್ಳು ಹೇಳಿ ಆಕೆಯ ತಾಯಿ ಮತ್ತು ಯುವತಿಗೆ ಮನವೊಲಿಸಿ ಮೋಸ ಮಾಡಿದ್ದಾನೆ ಎಂದು ಆಕೆ ಸಂಬಂಧಿಗಳು ದೂರಿದ್ದಾರೆ.

ದಾಖಲಾಗದ ಎರಡು ಪ್ರಕರಣಹರಿಪ್ರಸಾದ್ ವಿಚ್ಛೇದನೆ ಪಡೆಯದೆ ಮತ್ತೊಂದು ಮದುವೆಗೆ ಸಿದ್ಧತೆ ಬಗ್ಗೆ ಅಮೃತೂರ್ ಪೊಲೀಸ್ ಠಾಣೆಗೆ ಮೊದಲ ಪತ್ನಿ ದೂರು ನೀಡಿದ್ದು ಅದೇ ರೀತಿ ಹಣಕಾಸು ಒಡವೆ ಹಾಗೂ ಸುಳ್ಳು ಹೇಳಿ ಮದುವೆಗೆ ಒಪ್ಪಿಸಿದ್ದಾನೆ ಎಂದು ಪುಣ್ಯಶ್ರೀ ದೂರು ನೀಡಿದ್ದು ಎರಡು ಪ್ರಕರಣಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸುತ್ತೇವೆ ಎಂದು ಪೊಲೀಸರು ಕೈಚಲಿದ್ದಾರೆ.

ಕೆ ಹೊಸಹಳ್ಳಿಯಲ್ಲಿ ಪಟ್ಟಲದಮ್ಮನ ಅದ್ದೂರಿ ಜಾತ್ರೆ

0

ಒಂದು ಆಲದ ಮರದ ಕೆಳಗಡೆ ಇದ್ದ ಮೂರು ಕಲ್ಲುಗಳು ಪೂಜಿಸಿದ ಭಕ್ತರಿಗೆ ಸಕಲವನ್ನು ನೀಡುವ ಭಗವಂತನ ರೂಪದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಕ್ತರು ಈ ದಿನ ಈ ರೀತಿ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಎಂದು ಬೆಟ್ಟಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ

ಕೊತ್ಕೆರೆ ಹೋಬಳಿಯ ಕೆ ಹೊಸಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಿರುವ ವಿಶೇಷವಾದ ರಥ ಲೋಕಾರ್ಪಣೆ ಮಾಡಿ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಸಮಾಜದಲ್ಲಿ ಪ್ರತಿದಿನ ನಾನು ನನ್ನದು ಎಂಬ ಸ್ವಾರ್ಥ ವಿಚಾರಗಳಿಗೆ ಬದುಕುವ ಈ ಸಂದರ್ಭದಲ್ಲಿ ಹಲವಾರು ಭಕ್ತರು ದೈವ ಧರ್ಮ ಹೀಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಭರತ ಭೂಮಿಯ ಶಕ್ತಿ ಇನ್ನೂ ಜೀವಂತವಾಗಿದೆ ಎಂದರು,

ಹರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಒಂದು ಕಲ್ಲನ್ನು ಪೂಜಿಸಿದ ಫಲವಾಗಿ ಹಲವರು ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಅವರ ಬೇಡಿಕೆಗಳನ್ನ ಈಡೇರಿಸಿಕೊಂಡಿದ್ದಾರೆ ಇಂತಹ ಘಟನೆಗಳು ಒಂದು ಕಲ್ಲಿನಿಂದ ನಡೆದಿದ್ದ ಕಾರಣಕ್ಕೆ ಇದು ಇಂದು ಪುಣ್ಯಕ್ಷೇತ್ರವಾಗಿ ಬದಲಾಗಿದೆ ಎಂದರು,

ಬಿಜೆಪಿ ಮುಖಂಡ ರಾಜೇಶ್ ಗೌಡ ಮಾತನಾಡಿ ಇಂತಹ ಧರ್ಮಕಾರ್ಯ ಮಾಡುತ್ತಿರುವ ಕುಟುಂಬಗಳಿಗೆ ಭಗವಂತ ಸಕಲ ಒಳಿತುಗಳನ್ನು ಕಾಪಾಡಲಿ ಎಂದು ಆಶಿಸುತ್ತಾ ಇಂತಹ ಉತ್ತಮರಿಂದ ಸಮಾಜಕ್ಕೆ ಒಳಿತಾಗುತ್ತಿದೆ ಎಂದರು,

ಜೆಡಿಎಸ್ ಮುಖಂಡ ಡಾ. ರವಿ ಬಾಬು ಮಾತನಾಡಿ ಇಂತಹ ದೇವರ ಕಾರ್ಯಕ್ರಮಗಳಿಗೆ ಸಾವಿರಾರು ಜನ ಬಂದು ಭಾಗವಹಿಸಿ ತಮ್ಮ ಭಕ್ತಿಯ ಸಮರ್ಪಣೆ ಮಾಡಿದ್ದಾರೆ ಪ್ರತಿ ಗ್ರಾಮದಲ್ಲಿ ಈ ರೀತಿಯ ಆಚರಣೆಗಳಿಂದ ಸಹ ಬಾಳ್ವೆ ಹಾಗೂ ಪ್ರತಿಯೊಬ್ಬರ ಕಷ್ಟ ಸುಖಗಳು ಮುಕ್ತಿ ಕಾಣಲಿವೆ ಎಂದರು.

ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿದ್ದ ಬೃಹ ಕಾಕರದ ರಥದಲ್ಲಿ ಹತ್ತಿಯ ಹಲಗೆಯ ಮೇಲೆ ಕೂರಿಸಿದ್ದ ಪಟ್ಟಲದಮ್ಮ ದೇವಿಯ ರಥವನ್ನು ಹಲವರು ಜಯ ಘೋಷಗಳೊಂದಿಗೆ ಭಕ್ತಿಯ ಬರಕಾಷ್ಟತೆಗೆ ತಲುಪಿದ್ದರು.

ಸಾಂಪ್ರತಾ ವೈಕವಾಗಿ ಹಲವರು ಮಹಿಳೆಯರು ವಿಶೇಷ ಆರತಿಗಳನ್ನ ನೆರವೇರಿಸಲಾಯಿತು ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕುಡಿಯುವ ನೀರು ಸೇರಿದಂತೆ ಸಕಲವನ್ನು ದೇವಾಲಯದ ವತಿಯಿಂದ ಮಾಡಲಾಗಿತ್ತು ಈ ಸಂದರ್ಭದಲ್ಲಿ
ತುರುವೇಕೆರೆ ಮಾಜಿ ಶಾಸಕರಾದ ಮಸಾಲೆ ಜಯರಾಮ ಧ್ವಜಾರೋಹಣ ನಡೆಸಿದರು. ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವದೂತ ಸ್ವಾಮೀಜಿ,
ಓಂಕಾರ ಆಶ್ರಮದ ಶ್ರೀ ಮಧುಸೂದನಂದ ಪುರಿ ಸ್ವಾಮೀಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ ಏನ್ ಜಗದೀಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಂಗಣ್ಣ ಗೌಡ, ಹಾಗೂ ಮಹಾದಾನಿಗಳಾದ ಬಿ ದೇವರಾಜು, ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು ಭಕ್ತಾದಿಗಳು ಇದ್ದರು

ದೇವರ ಮುಂದೆ ಎಣ್ಣೆ ಕುಡಿದರೆ ದೂರ ಆಗುತ್ತೆ ಕಷ್ಟ ತುಮಕೂರು ಜಿಲ್ಲೆಯ ಎಣ್ಣೆ ಜಾತ್ರೆ

0

ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹೇಮಗಿರಿತಪ್ಪಲಿನಲ್ಲಿ ಇರುವ ಓಡೇಬೈರುವ ಸನ್ನಿಧಿಯಲ್ಲಿ ಸಾಂಪ್ರದಾಯಕವಾಗಿ ಬಾಯಿ ಕವಳ ಅಥವಾ ಭಂಗಿ ಸೇವೆ ನಡೆಯಿತು ಮಂಡ್ಯ ತುಮಕೂರು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ಕುಳಿತು ಮಧ್ಯ ಸೇವನೆ ಮಾಡಿ ತಮ್ಮ ಇಷ್ಟಾರ್ಥವನ್ನು ಈಡೇರಿಸು ಭಗವಂತ ಎಂದು ಬೇಡಿಕೊಂಡರು, ವಡೆಭೈರವನ ಸನ್ನಿಧಿಯಲ್ಲಿ ಮಧ್ಯ ಸೇವನೆ ಮಾಡುವುದು

ವಿಶೇಷ ಕಾರ್ಯಕ್ರಮವಾಗಿದೆ ಈ ನೆಲೆಯಲ್ಲಿ ಬೆಳಿಗ್ಗೆ ದೇವಾಲಯಕ್ಕೆ ವಿಶೇಷವಾದ ಪೂಜೆ ಹಾಗೂ ದೇವರ ವಿಗ್ರಹಕ್ಕೆ ವಿಶೇಷವಾದ ಅಭಿಷೇಕ ಅಲಂಕಾರ ನಡೆದವು, ನಂತರ ದೇವಾಲಯದ ಕೆಳಭಾಗದಲ್ಲಿ ಇಡಲಾಗಿದ್ದ ಬೃಹತ್ ಡ್ರಂಗಳಲ್ಲಿ ಭಕ್ತರು ತಂದಿದ್ದ ವಿಸ್ಕಿ ಬ್ರಾಂದಿ ಜಿನ್ ಸೇರಿದಂತೆ ಹಲವಾರು ವಿವಿಧ ಸಾವಿರಾರು ಮಧ್ಯದ ಬಾಟಲುಗಳನ್ನು ಸುರಿದು ಎಲ್ಲವನ್ನೂ ಕೂಡ ಮಿಶ್ರಗೊಳಿಸಿ ಭಕ್ತರಿಗೆ ಸರತಿ ಸಾಲಿನಲ್ಲಿ ಕೂರಿಸಿ ಬಿರಿಯಾನಿ ಚಿಕನ್ನು ಮಟನ್ ಜೊತೆ ಕಡ್ಲೆಪುರಿ ಹಾಗೂ ಎಣ್ಣೆಯನ್ನು ನೀಡಲಾಯಿತು,

ಅಣ್ಣ ತಮ್ಮ ಅಕ್ಕ ತಂಗಿ ಅಪ್ಪ ಮಗ ಪುರುಷ ಮಹಿಳೆ ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಕೂಡ ಒಟ್ಟಾಗಿ ಸರತಿ ಸಾಲಿನಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಒಡೆಭೈರವನಾ ಕೃಪೆಗೆ ಪಾತ್ರರಾದರು, ಸ್ಥಳೀಯರು ಹೇಳುವಂತೆ ಹಲವಾರು ದಶಕಗಳ ಹಿಂದೆ ಈ ರೀತಿ ಕಾರ್ಯಕ್ರಮವನ್ನು ಆರಂಭಿಸಿದ್ದು ಈಗಲೂ ಕೂಡ ನಡೆಯುತ್ತಾ ಬಂದಿದೆ ಇದಕ್ಕೆ ಬಾಯಿ ಕವಳ ಅಥವಾ ಭಂಗಿ ಸೇವೆ ಎಂದು ಕರೆಯುತ್ತಾರೆ,+

ಹೇಮಗಿರಿ ಬೆಟ್ಟದ ತಪ್ಪಲಿನ ಸುತ್ತಲೂ 7 ಕಿ.ಮೀ ಸಿದ್ದರ ವಾಸ ಸ್ಥಳವಾಗಿದೆ ಇಲ್ಲಿನ ಹಲವಾರು ಗುಡ್ಡ ಪ್ರದೇಶಗಳಲ್ಲಿ ಸಿದ್ದರು ಇಂದಿಗೂ ಕೂಡ ಜೀವಂತವಾಗಿ ವಾಸಿಸುತ್ತಿದ್ದಾರೆ ಎಂಬ ನಂಬಿಕೆಗಳಿವೆ, ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಸತ್ತ ದೇಹಗಳನ್ನು ಸುಟ್ಟರೆ ತಲೆ ಸಿಡಿಯುವುದಿಲ್ಲ ಎಂದು ಇಲ್ಲಿನ ವಾಸಿಗಳು ಹೇಳುತ್ತಾರೆ, ಈ ಭಾಗದ ಹಲವಾರು ಬೆಟ್ಟ ಗುಡ್ಡಗಳಲ್ಲಿ ಸಿದ್ದರು ವಾಸಿಸುತ್ತಿದ್ದು ಸಂಕ್ರಾಂತಿ ನಂತರ ಹೇಮಗಿರಿ ಜಾತ್ರೆ ಮುಗಿದ ಬಳಿಕ ಒಡೆಬೈರುವನಿಗೆ ನಡೆಯುವ ಭಂಗಿ ಸೇವೆಯ ನಂತರ ರಾತ್ರಿ ಎಲ್ಲರೂ ಕೂಡ ಒಟ್ಟಾಗಿ ಸೇರಿತ್ತಿದ್ದರು ಇಲ್ಲಿ ತಮ್ಮದೇ ಆದ ಔತಣ ಮಾಡುತ್ತಾರೆ ಅದಕ್ಕಾಗಿ ರಾತ್ರಿ ವೇಳೆ ಸಾರ್ವಜನಿಕರ ಪ್ರವೇಶ ನಿಷಿದ್ದ ಎಂದು ಸ್ಥಳೀಯರು ಹೇಳುತ್ತಾರೆ, ಇಂತಹ ನಂಬಿಕೆಯಿಂದನೂ ಕೂಡ ಹಲವಾರು ದಶಕಗಳಿಂದ ಓಡೆಬೈರವನಿಗೆ ಮಧ್ಯದ ಆರಾಧನೆಯನ್ನು ಮಾಡುತ್ತಾ ಬಂದಿರುವುದು ಇಂದಿಗೂ ಕೂಡ ಜೀವಂತವಾಗಿದೆ

ನಾಪತ್ತೆಯಾಗಿದ್ದ ವೃದ್ಧ ಕೆರೆಯಲ್ಲಿ ಶವವಾಗಿ

0

ತಾಲೂಕಿನ ಗಿರಿ ಗೌಡನ ಪಾಳ್ಯದ ಉಮೇಶ್ (60) ಹಲವಾರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೇಗೂರು ಕೆರೆಯ ಬಳಿ ಆತನ ಕೆರೆಯ ಬಳಿ ಕೆಲವು ಬಟ್ಟೆ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು ಕೊಳೆತ ವೃತ್ತ ದೇಹವನ್ನು ಕೆರೆಯಿಂದ ತೆಗೆದಿದ್ದಾರೆ

ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೆ ಪೊಲೀಸರು ಜೊತೆಗೂಡಿ ಆರಂಭಿಸಿದ ಕಾರ್ಯಾಚರಣೆ ಮಧ್ಯಾಹ್ನ 3:00 ವರೆಗೆ ಸತತವಾಗಿ ನಡೆಯಿತು ಕೊಳೆತ ದೇಹವನ್ನು ಪೊಲೀಸರು ಪತ್ತೆ ಹಚ್ಚಿ ಸಂಬಂಧಿಕರಿಗೆ ತಲುಪಿಸುವ ಉದ್ದೇಶದಿಂದ ಕುಣಿಗಲ್ ಸಾರ್ವಜನಿಕ ವೈದ್ಯರ ಸಲಹೆ ಮೇರೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಡಿಎನ್ಎ ಪರೀಕ್ಷೆಗಾಗಿ ಕಳುಹಿಸಿದ್ದಾರೆ

ಭಾನುವಾರ ಬೆಟ್ಟ ಹಳ್ಳಿ ಮಠದಲ್ಲಿ ಹಿತೈಷಿಗಳ ಸಮಾವೇಶ

0

ಬೆಟ್ಟಹಳ್ಳಿ ಮಠದಲ್ಲಿ ಜನವರಿ 4ರ ಭಾನುವಾರ ಸಾಧಕರಿಗೆ ಉರಿಲಿಂಗಶ್ರೀ ಮತ್ತು ನೀಲಕಂಠಶ್ರೀ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಬೆಟ್ಟಹಳ್ಳಿ ಮಠವು ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು ಪ್ರತಿವರ್ಷದಂತೆ ಈ ಮಠದಲ್ಲಿ ನಡೆಯುವ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಮಾವೇಶ ಜನವರಿ 4ರ ಭಾನುವಾರ ಏರ್ಪಡಿಸಲಾಗಿದ್ದು

.ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹಳೆಯ ವಿದ್ಯಾರ್ಥಿಗಳು ಹಾಗೂ ಭಕ್ತರು ಆಗಮಿಸಿದ್ದಲ್ಲಿದ್ದಾರೆ ಈ ಬಾರಿ ಉರಿಲಿಂಗ ಪ್ರಶಸ್ತಿಯನ್ನು ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ಎಮ್ ಸುರೇಶ್ ಅವರಿಗೆ ನೀಲಕಂಠ ಪ್ರಶಸ್ತಿಯನ್ನು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಡಿ ಪಿ ದಾಸ ರವರಿಗೆ ಸೇರಿದಂತೆ ಗುರು ರಕ್ಷೆಯನ್ನು ಯಲಿಯೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗಂಗಾಶಾನಯ್ಯ , ಎಸ್ ಎಲ್ ವಿ ವ್ಯವಸ್ಥಾಪಕರಾದ ಕೋಗಟ್ಟ ರಾಜಣ್ಣ ಕುಣಿಗಲ್ ಪುರಸಭಾ ಮಾಜಿ ಅಧ್ಯಕ್ಷರಾದ ರಂಗಸ್ವಾಮಿ ಬೆಂಗಳೂರಿನ ಉದ್ಯಮಿ ಆರ್ ಕುಮಾರ್ ಹಾಗೂ ಮೂಗನಪುರದ ಬಸವರಾಜು ಸೇರಿದಂತೆ ಹಲವಾರು ಸಾಧಕರಿಗೆ ಗುರು ರಕ್ಷೆ ನೀಡಲಿದ್ದೇವೆ

.ಸಂಜೆ 7:00ಗೆ ನಡೆಯುವ ವೇದಿಕೆ ಕಾರ್ಯ ಕ್ರಮಕ್ಕೆ ಹಲವಾರು ಗಣ್ಯರು ರಾಜಕೀಯ ಪ್ರಮುಖ ವ್ಯಕ್ತಿಗಳು ಸೇರಿದಂತೆ ವಿವಿಧ ಭಾಗದಿಂದ ಭಕ್ತರು ಆಗಮಿಸಲಿದ್ದು ಮಠದಲ್ಲಿ ವಾಹನ ವ್ಯವಸ್ಥೆ ಕುಡಿಯುವ ನೀರು ಪ್ರಸಾದ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನ ಮಠ ನಿರ್ವಹಿಸಲಿದೆ

ಕಾಡು ಗೊಲ್ಲರ ಯುವತಿ ಅಪಹರಣಕ್ಕೆ ಯತ್ನ ಯೂಟೂಬರ್ ಸೇರಿದಂತೆ ಹಲವರ ರ ಬಂಧನ!

0
ಕಾಡು ಗೊಲ್ಲರ ಹುಡುಗಿ ಮುಟ್ಟಿ
The wild goose girl touched


ಮಾಗಡಿ ಪಕ್ಕದಲ್ಲಿ ದೂರದಲ್ಲಿರುವ ತಟವಾಳು ಗೊಲ್ಲರಹಟ್ಟಿ ಗ್ರಾಮ ಅಪ್ರಾಪ್ತ ಯುವತಿಯನ್ನು ಅಪಹರಣ ಕಾರಿನಲ್ಲಿ ಅಪಹರಣ ಮಾಡಿದರೂ ಎನ್ನು ಆರೋಪ ಇದೆ

ರವಿ ಕೆಂಪ ಸೇರಿದಂತೆ ಇತರರನ್ನು ಗ್ರಾಮಸ್ಥರೆ ಹಿಡಿದು ಮಾಗಡಿಯ ಠಾಣೆಗೆ ಒಪ್ಪಸಿ ದೂರು ನೀಡಿದ್ದಾರೆ

ಘಟನೆ ಹಿನ್ನೆಲೆ :-
ಹೊಸ ವರ್ಷ ಆಚರಿಸಲೆಂದು ವೆಂಕಟೇಶ್ ಅವರು ತಮ್ಮ ತೋಟದಲ್ಲಿ ಯೂಟೂಬರ್ ಮತ್ತು INSTAGRAM ರೀಲ್ಸ್ ಮೇಕರ್ ಗಳನ್ನು ಕರೆದು, ಮಧ್ಯ ಹಾಗೂ ಬಾಡೂಟ ಏರ್ಪಡಿಸಲಾಗಿತ್ತು ಇನ್ನಲಾಗಿದೆ

ಕಂಠ ಪೂರ್ತಿ ಮದ್ಯ ಹಾಗೂ ಬಾಡೂಟ ಸೇವನೆ ಮಾಡಿದ್ದ ಯೂಟೂಬರ್ ರವಿ ತೋಟದಿಂದ ತಡರಾತ್ರಿ ಗೊಲ್ಲರಹಟ್ಟಿ ಗ್ರಾಮದ ಒಳಗೆ ಪ್ರವೇಶಿಸಿ ಕುಡಿದ ಮತ್ತಿನಲ್ಲಿ ಅಪ್ರಾಪ್ತ ಯುವತಿಯನ್ನು ಸಲುಗೆಯಿಂದ ಮಾತನಾಡಿ ಪುಸಲಾಯಿಸಿ ಯುವತಿ ಬಾಯಿ ಮುಚ್ಚಿ ತನ್ನ ಕಾರಿನ ಒಳಕ್ಕೆ ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಅಪಹರಿಸಿದ್ದು ಕುಡಿದ ಅಮಲಿನಲ್ಲಿದ್ದ ಆರೋಪಿ ದಾರಿ ತಿಳಿಯದೆ ಗ್ರಾಮದ ಸುತ್ತಮುಲ ಪ್ರದೇಶದಲ್ಲಿಯೇ ಸುತ್ತಾಡಿ ಕೊನೆಗೆ ಮೂತ್ರ ವಿಸರ್ಜನೆಗೆ ಕಾರಿನಿಂದಿಳಿದಾಗ ಯುವತಿ ತನ್ನ ಮನೆಯ ಮೊಬೈಲ್ ಅಲ್ಲೇ ಇದ್ದ ಫೋನಿಂದ ಕರೆಮಾಡಿ ತನ್ನನ್ನು ರಕ್ಷಣೆ ಮಾಡುವಂತೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ

ಗ್ರಾಮಸ್ಥರು,ಗ್ರಾಮದ ಸುತ್ತಾಮುತ್ತಾ ಪ್ರದೇಶಗಳಿಗೆ ತಮ್ಮ ವಾಹನಗಳಲ್ಲಿ ತೆರಳಿದ್ದ ಸಮಯದಲ್ಲಿ,ಹುಲಿಯೂರುದುರ್ಗ, ಮಾಗಡಿ ಮುಖ್ಯರಸ್ತೆಯಲ್ಲಿ ಅನುಮಾನಗೊಂಡು ರವಿಯ ಕಾರನ್ನು

ಅಡ್ಡಗಟ್ಟಿದ ಗ್ರಾಮಸ್ಥರಿಗೆ ರವಿ ತನ್ನ ಕೃತ್ಯ ಬಯಲಾಗುತ್ತದೆ ಎಂದು ಎಚ್ಚರಗೊಂಡು ಕಾರನ್ನು ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಮಾಗಡಿ ಕಡೆಗೆ ಹೊರಟಿದ್ದು ಯುವತಿಯ ಸಂಬಂದಿಕರು ರವಿಯ ಕಾರನ್ನು ಸಿನಿಮೀಯ ರೀತಿಯಲ್ಲಿ ತಡೆದು ಸೋಮೇಶ್ವರ ಕಾಲೋನಿಯ ಬಳಿ ಅಡಗಟ್ಟಿದ್ದರ ಪರಿಣಾಮ ರವಿ ತನ್ನ ಕಾರಿನಿಂದ ತಪ್ಪಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿ ಗ್ರಾಮಸ್ಥರ ಕೈಗೆ ಯುವತಿಯ ಸಹಿತ ಸಿಕ್ಕಿಬಿದ್ದಿದ್ದಾನೆ,


ನಂತರ ಯುವತಿಯನ್ನು ರಕ್ಷಿಸಿ ಅಪಹರಣ ಮಾಡಲೆತ್ನಿಸಿದ ಯೂಟಬ್ ರವಿಯನ್ನು ಪೋಲೀಸರ ವಶಕ್ಕೆ ಒಪ್ಪಿಸಿದ ಘಟನೆ ಸಂಭವಿಸಿದ್ದು, ಈ ಸಂಬಂದ ಮಾಗಡಿ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ,

ಆರೋಪಿ ರವಿ ಜೋತೆಯಲ್ಲಿ ತಡರಾತ್ರಿ ಎಣ್ಣೆ ಪಾರ್ಟಿಯಲ್ಲಿ ತೋಡಗಿದ್ದ ಮಂಡ್ಯ ಮೂಲದ ಸಕ್ಕರೆ ನಾಡು ಕೆಂಪ ಎಂಬಾತನಿಗೆ ಮಾಗಡಿ ಪೊಲೀಸ್ ಠಾಣೆಯ ಬಳಿ ಬರುತ್ತಿದ್ದ ಹಾಗೆ ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದರು