Thursday, August 27, 2026
Home Blog

ಡೈನಿಂಗ್ ಟೇಬಲ್ ಬಿಟ್ಟು ನೆಲದ ಮೇಲೆ ಕುಳಿತು ಊಟ ಮಾಡಿ ನೋಡಿ; ದೇಹಕ್ಕಿದೆ ಇಷ್ಟೆಲ್ಲಾ ಹೆಲ್ತ್ ಬೆನಿಫಿಟ್ಸ್!

0

ನೆಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತು ಊಟ ಮಾಡುವುದು ಕೇವಲ ಹಳೆಯ ಸಂಪ್ರದಾಯವಲ್ಲ, ಬದಲಿಗೆ ಆರೋಗ್ಯಕ್ಕೆ ಸಹಕಾರಿಯಾದ ಅದ್ಭುತ ಆರೋಗ್ಯಕರ ಅಭ್ಯಾಸವಾಗಿದೆ. ಹಾಗಾಗಿ, ನೆಲದ ಮೇಲೆ ಕುಳಿತು ಊಟ ಮಾಡೋದ್ರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ

Health Tips: ಊಟದ ಸಮಯದಲ್ಲಿ ಡೈನಿಂಗ್ ಟೇಬಲ್ ಮೇಲೆ ಕುಳಿತು ತಿನ್ನುವುದೇ ಈಗಿನ ರೂಢಿ. ಆದರೆ ನಮ್ಮ ಅಜ್ಜ-ಅಜ್ಜಿಯರು ನೆಲದ ಮೇಲೆ ಚಾಪೆ ಹಾಸಿ ಚಕ್ಕಳಮಕ್ಕಳ ಕುಳಿತು ಊಟ ಮಾಡುತ್ತಿದ್ದರು. ಆದ್ರೆ, ಇದನ್ನು ಕೇವಲ ಸಂಪ್ರದಾಯ ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಜೀರ್ಣಕ್ರಿಯೆ ಇಂದ ಹಿಡಿದು ಮನಸ್ಸಿನ ಶಾಂತಿಯವರೆಗೆ ಎಲ್ಲವೂ ಸುಧಾರಿಸುತ್ತದೆ. ಬನ್ನಿ ಆ ಪ್ರಯೋಜನಗಳೇನು ಎಂದು ನೋಡೋಣ.

ಜೀರ್ಣಕ್ರಿಯೆಗೆ ಬೆಸ್ಟ್

ನೆಲದ ಮೇಲೆ ಸುಖಾಸನ ಕುಳಿತು ತಿನ್ನುವಾಗ ನಾವು ಮುಂದೆ ಬಾಗಿ ಆಹಾರವನ್ನು ತೆಗೆದುಕೊಳ್ಳುತ್ತೇವೆ. ಈ ಸ್ಥಿತಿಯನ್ನು ಈಟಿಂಗ್ ಪೊಸ್ಚರ್ ಎಂದು ಕರೆಯುತ್ತಾರೆ. ಹೀಗೆ ಕುಳಿತಾಗ ಹೊಟ್ಟೆಯ ಮೇಲೆ ಸ್ವಲ್ಪ ಒತ್ತಡ ಬೀಳುತ್ತದೆ. ಇದರಿಂದ ಜೀರ್ಣಾಂಗ ರಸಗಳು ಹೆಚ್ಚಾಗಿ ಸಂಚಾಹರಿಸುತ್ತವೆ. ಆಗ ಆಹಾರ ಬೇಗ ಜೀರ್ಣವಾಗುತ್ತದೆ ಮತ್ತು ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.

ತೂಕ ನಿಯಂತ್ರಣ:

ನೆಲದ ಮೇಲೆ ಕುಳಿತು ತಿನ್ನುವಾಗ ಮನಸ್ಸು ಆಹಾರದ ಕಡೆಗೆ ಹೆಚ್ಚು ಗಮನ ನೀಡುತ್ತದೆ. ಟಿವಿ ಅಥವಾ ಮೊಬೈಲ್ ಇಲ್ಲದೆ ನೆಮ್ಮದಿಯಾಗಿ ತಿನ್ನುವುದರಿಂದ ಹೊಟ್ಟೆ ತುಂಬಿದ ಸೂಚನೆ ಮೆದುಳಿಗೆ ಬೇಗ ತಲುಪುತ್ತದೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಡೆಯಬಹುದು. ಅದರಲ್ಲೂ, ನಿಧಾನವಾಗಿ ತಿನ್ನುವುದರಿಂದ ಕ್ಯಾಲೋರಿ ಸೇವನೆ ಕೂಡ ಕಡಿಮೆಯಾಗುತ್ತದೆ.



ಬೆನ್ನು ಮತ್ತು ಕೀಲುಗಳಿಗೆ ಒಳ್ಳೆಯದು

ನೆಲದ ಮೇಲೆ ಕಾಲು ಮಡಚಿ ಕುಳಿತಾಗ ಸೊಂಟ ಬೆನ್ನು ಮತ್ತು ಮೊಣಕಾಲಿನ ಕೀಲುಗಳು ಫ್ಲೆಕ್ಸಿಬಲ್ ಆಗುತ್ತವೆ. ಪ್ರತಿದಿನ 15 ರಿಂದ 20 ನಿಮಿಷ ಈ ರೀತಿ ಕುಳಿತರೆ ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಾಗುತ್ತದೆ. ಬೆನ್ನು ನೋವು ಮತ್ತು ಕೀಲುಗಳ ಬಿಗಿತ ಕಡಿಮೆಯಾಗುತ್ತದೆ. ವಯಸ್ಸಾದಂತೆ ಮೂಳೆಗಳು ಗಟ್ಟಿಯಾಗಲು ಇದು ಸಹಾಯ ಮಾಡುತ್ತದೆ.

ರಕ್ತದ ಹರಿವು ಸುಧಾರಿಸುತ್ತದೆ

ಕುರ್ಚಿಯಲ್ಲಿ ಕಾಲು ನೇತು ಹಾಕಿ ಕುಳಿತಾಗ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಆದರೆ ನೆಲದ ಮೇಲೆ ಕಾಲು ಮಡಚಿ ಕುಳಿತಾಗ ರಕ್ತವು ಹೊಟ್ಟೆ ಮತ್ತು ಕಾಲಿನ ಕಡೆಗೆ ಸರಾಗವಾಗಿ ಹರಿಯುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ಕಾಲುಗಳು ಊದಿಕೊಳ್ಳುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಇದರೊಂದಿಗೆ, ನೆಲದ ಮೇಲೆ ಕುಳಿತು ಕುಟುಂಬದೊಂದಿಗೆ ಒಟ್ಟಿಗೆ ಊಟ ಮಾಡುವುದರಿಂದ ಬಾಂಧವ್ಯ ಹೆಚ್ಚುತ್ತದೆ. ನಿಧಾನವಾಗಿ ತಿನ್ನುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಆಹಾರದ ರುಚಿ ಚೆನ್ನಾಗಿ ಅರ್ಥವಾಗುತ್ತದೆ. ಇದು ಒಂದು ರೀತಿಯ ಮೈಂಡ್ ಫುಲ್ ಈಟಿಂಗ್ ಆಗುತ್ತದೆ.

 

  

Sitting On The Floor To Eat

ಗರಿಗರಿಯಾದಮಂಡಕ್ಕಿದೋಸೆ: ಒಮ್ಮೆಮಾಡಿದರೆಮತ್ತೆಮತ್ತೆಮಾಡ್ತೀರಾ!

0

ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ.

ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ಈ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ. ಕಡಿಮೆ ಸಾಮಗ್ರಿಗಳಲ್ಲೇ ತಯಾರಿಸಬಹುದಾದ ಈ ರುಚಿಕರ ದೋಸೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಬಡಿಸಿದರೆ ಮನೆಯವರೆಲ್ಲರೂ ಇಷ್ಟಪಟ್ಟು ಸವಿಯುತ್ತಾರೆ.

ಬೇಕಾಗುವ ಪದಾರ್ಥಗಳು

  • ಮಂಡಕ್ಕಿ – 2 ಬಟ್ಟಲು
  • ಅಕ್ಕಿ – ½ ಬಟ್ಟಲು
  • ಮೊಸರು – ½ ಬಟ್ಟಲು
  • ಉಪ್ಪು – ರುಚಿಗೆ ತಕ್ಕಷ್ಟು
  • ಸಕ್ಕರೆ – 1 ಚಮಚ
  • ನೀರು – ಅಗತ್ಯವಿರುವಷ್ಟು
  • ಎಣ್ಣೆ – ದೋಸೆ ಬೇಯಿಸಲು

ಹೊಸ ಮಠ ಆರಂಭಿಸಿದ ಬೆಟ್ಟಹಳ್ಳಿ ಶ್ರೀ

0


ವಸಂತ ವಾಣಿ ವಾರ್ತೆ
ಕುಣಿಗಲ್ ತಾಲೂಕಿನ ಚೌಡನಕುಪ್ಪೆಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಠವನ್ನು ಬೆಟ್ಟಹಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪುನಃ ಹೊಸ ಸ್ವಾಮೀಜಿಯನ್ನು ನೇಮಿಸಿ ಆರಂಭಿಸಿದ್ದಾರೆ
ಕುಣಿಗಲ್ ತಾಲೂಕಿನಲ್ಲಿ ಪ್ರಖ್ಯಾತ ಹಾಗೂ ಧಾರ್ಮಿಕ ಆಧ್ಯಾತ್ಮ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಕೆಂಪೇಗೌಡರು ನಿರ್ಮಿಸಿದರು ಎನ್ನಲಾದ

ಶ್ರೀ ಬೆಟ್ಟಹಳ್ಳಿ ಮಠ ತನ್ನ ಭಾಗದಲ್ಲಿ 108 ಶಾಖ ಮಠಗಳನ್ನು ಹಲವಾರು ವರ್ಷಗಳ ಹಿಂದೆ ಒಂದಿತ್ತು ಕೆಲವು ಮಠಗಳು ಸ್ವಾಮೀಜಿಗಳ ಕಾಲದ ನಂತರ ಮುಚ್ಚಿ ಹೋಗಿದ್ದವು,


ಮುಂದೆ ಪೀಠದ ಜವಾಬ್ದಾರಿ ಹೊತ್ತಂತಹ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಅವುಗಳನ್ನು ಜೀರ್ಣೋದ್ಧಾರ ಮಾಡುವ ಪುನರ್ ಪ್ರಾರಂಭಿಸುವ ಕನಸು ಕಂಡಿದ್ದರು ಅದರಂತೆ ಚೌಡನ ಕುಪ್ಪೆಯಲ್ಲಿ ಮಠವನ್ನು ಪ್ರಾರಂಭಿಸಿದ್ದರು ತಮ್ಮ ಮಠದಲ್ಲಿದ್ದಂತಹ ವಟುವನ್ನು ಇಲ್ಲಿಗೆ ಸ್ವಾಮೀಜಿಯಾಗಿ ಚನ್ನವೀರ ಶಿವಾಚಾರ್ಯ ಸ್ವಾಮಿಗಳು ನೇಮಕ ಮಾಡಿ ದ್ದಾರೆ

ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆ

0

2026ರ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆಗಾಗಿ ನೀವು ಹಬ್ಬದ ದಿನಾಂಕಗಳು, ಪೂಜಾ ಸಾಮಗ್ರಿಗಳು ಮತ್ತು ಅಲಂಕಾರದ ಹಂತ-ಹಂತದ ಸಂಪೂರ್ಣ ಮಾಹಿತಿ ಇಲ್ಲಿದೆ. ದಕ್ಷಿಣ ಭಾರತದ ಸಂಪ್ರದಾಯದ ಪ್ರಕಾರ (ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ) ಈ ವರ್ಷ ವರಮಹಾಲಕ್ಷ್ಮಿ ವ್ರತವನ್ನು ಆಗಸ್ಟ್ 21, 2026 ರ ಶುಕ್ರವಾರ ಆಚರಿಸಲಾಗುತ್ತದೆ.

ಹಬ್ಬದ ಪೂಜೆಯನ್ನು ಸುಲಭವಾಗಿ ನೆರವೇರಿಸಲು ಕೆಳಗಿನ ಸಿದ್ಧತಾ ಮಾರ್ಗದರ್ಶಿಯನ್ನು ಅನುಸರಿಸಿ.

ಪೂಜಾ ಮುಹೂರ್ತಗಳು (ಆಗಸ್ಟ್ 21, 2026)

ಪಂಚಾಂಗದ ಪ್ರಕಾರ ಪೂಜೆ ಮಾಡಲು ಅತ್ಯಂತ ಶುಭ ಪ್ರದವಾದ ಸಮಯಗಳು (ಲಗ್ನ ಮುಹೂರ್ತ): [1]

  • ಸಿಂಹ ಲಗ್ನ (ಬೆಳಿಗ್ಗೆ): 06:23 AM ನಿಂದ 07:48 AM ವರೆಗೆ
  • ವೃಶ್ಚಿಕ ಲಗ್ನ (ಮಧ್ಯಾಹ್ನ): 12:06 PM ನಿಂದ 02:20 PM ವರೆಗೆ
  • ಕುಂಭ ಲಗ್ನ (ಸಂಜೆ): 06:16 PM ನಿಂದ 07:52 PM ವರೆಗೆ [1]

ಅಗತ್ಯವಿರುವ ಪೂಜಾ ಸಾಮಗ್ರಿಗಳ ಪಟ್ಟಿ

ಹಬ್ಬಕ್ಕಿಂತ ಒಂದು ವಾರ ಮುಂಚಿತವಾಗಿ ಈ ಕೆಳಗಿನ ವಸ್ತುಗಳನ್ನು ಖರೀದಿಸಿ ಸಿದ್ಧಪಡಿಸಿಕೊಳ್ಳಿ: [1]

  • ಮುಖ್ಯ ವಸ್ತುಗಳು: ಲಕ್ಷ್ಮಿ ದೇವಿಯ ಮುಖವಾಡ (ಅಮ್ಮನವರ ಮುಖ), ಬೆಳ್ಳಿ ಅಥವಾ ತಾಮ್ರದ ಕಳಶದ ಬಿಂದಿಗೆ, ಹೊಸ ರೇಷ್ಮೆ ಸೀರೆ ಅಥವಾ ಬ್ಲೌಸ್ ಪೀಸ್.
  • ಕಳಶದ ಒಳಗೆ ಇಡಲು: ಅಕ್ಕಿ, ನಾಣ್ಯಗಳು, ಅರಿಶಿನ ಕೊಂಬು, ಅಡಿಕೆ, ಒಣ ದ್ರಾಕ್ಷಿ-ಗೋಡಂಬಿ.
  • ಅಲಂಕಾರಕ್ಕೆ: ಮಾವಿನ ಎಲೆಗಳು, ತೆಂಗಿನಕಾಯಿ, ತಾಜಾ ಹೂವುಗಳು (ಕಮಲ, ಮಲ್ಲಿಗೆ, ಚೆಂಡುಹೂವು), ರಂಗೋಲಿ ಪುಡಿ.
  • ದೈನಂದಿನ ಪೂಜಾ ದ್ರವ್ಯಗಳು: ಅರಿಶಿನ, ಕುಂಕುಮ, ಗಂಧದ ಪುಡಿ, ಅಕ್ಷತೆ, ಕರ್ಪೂರ, ಧೂಪದ ಕಡ್ಡಿ, ತುಪ್ಪ/ಎಣ್ಣೆ ಮತ್ತು ಬತ್ತಿ.
  • ವಿಶೇಷ ವಸ್ತು: ಒಂಬತ್ತು ಗಂಟುಗಳಿರುವ ಪವಿತ್ರ ರಕ್ಷಾ ದಾರ (ತೋರಂ).
  • ಮುತ್ತೈದೆಯರಿಗೆ: ಎಲೆ-ಅಡಿಕೆ, ಹಣ್ಣು, ಬಾಗಿನ ನೀಡಲು ಅಗತ್ಯವಿರುವ ಸಾಮಗ್ರಿಗಳು (ತಾಂಬೂಲ). [1, 2, 3, 4, 5, 6, 7]

ಹಂತ-ಹಂತದ ಪೂಜಾ ಸಿದ್ಧತೆ ಮತ್ತು ವಿಧಾನ

1. ಮನೆ ಮತ್ತು ಪೂಜಾ ಸ್ಥಳದ ಸ್ವಚ್ಛತೆ

ಹಬ್ಬದ ಹಿಂದಿನ ದಿನವೇ (ಗುರುವಾರ) ಇಡೀ ಮನೆಯನ್ನು ಸ್ವಚ್ಛಗೊಳಿಸಿ. ಪೂಜೆ ಮಾಡುವ ಜಾಗದಲ್ಲಿ ಸುಂದರವಾದ ಮಂಟಪವನ್ನು ಸಿದ್ಧಪಡಿಸಿ, ಮಾವಿನ ಎಲೆಯ ತೋರಣಗಳನ್ನು ಕಟ್ಟಿ ಮತ್ತು ಬಾಗಿಲ ಮುಂದೆ ದೊಡ್ಡದಾದ ರಂಗೋಲಿಯನ್ನು ಹಾಕಿ. [1, 2, 3]

2. ಕಳಶ ಸ್ಥಾಪನೆ ಮತ್ತು ಅಮ್ಮನವರ ಅಲಂಕಾರ

ಮಂಟಪದಲ್ಲಿ ಮಣೆಯನ್ನಿಟ್ಟು, ಅದರ ಮೇಲೆ ಅಕ್ಕಿಯನ್ನು ಹರಡಿ. ಕಳಶದ ಬಿಂದಿಗೆಗೆ ನೀರು, ನಾಣ್ಯ ಮತ್ತು ಅಕ್ಕಿ ತುಂಬಿಸಿ. ಕಳಶದ ಬಾಯಿಗೆ ಮಾವಿನ ಎಲೆಗಳನ್ನಿಟ್ಟು, ಅದರ ಮೇಲೆ ಅರಿಶಿನ ಸವರಿದ ತೆಂಗಿನಕಾಯಿಯನ್ನು ಇರಿಸಿ. ಇದಕ್ಕೆ ಲಕ್ಷ್ಮಿ ದೇವಿಯ ಮುಖವಾಡವನ್ನು ಜೋಡಿಸಿ, ಸೀರೆ, ಒಡವೆಗಳು ಮತ್ತು ಹೂವಿನ ಹಾರಗಳಿಂದ ದೇವಿಯನ್ನು ಸುಂದರವಾಗಿ ಅಲಂಕರಿಸಿ.

3. ಪೂಜಾ ವಿಧಾನ (ವಿಧಿ ವಿಧಾನ)

  • ಗಣೇಶ ಪೂಜೆ: ಯಾವುದೇ ವಿಘ್ನ ಬಾರದಿರಲು ಮೊದಲು ಗಣೇಶನ ಮೂರ್ತಿ ಅಥವಾ ಅರಿಶಿನ ಗಣಪತಿಯನ್ನು ಮಾಡಿ ಪೂಜಿಸಿ.
  • ದೇವಿಯ ಆಹ್ವಾನ: ಲಕ್ಷ್ಮಿ ದೇವಿಯನ್ನು ಕಳಶದಲ್ಲಿ ನೆಲೆಸುವಂತೆ ಪ್ರಾರ್ಥಿಸಿ (ಆವಾಹನೆ).
  • ಅಷ್ಟೋತ್ತರ ಪಠಣೆ: ಲಕ್ಷ್ಮಿ ಅಷ್ಟೋತ್ತರ, ಕನಕಧಾರಾ ಸ್ತೋತ್ರಗಳನ್ನು ಪಠಿಸುತ್ತಾ ಹೂವು ಮತ್ತು ಕುಂಕುಮದಿಂದ ಅರ್ಚನೆ ಮಾಡಿ.
  • ತೋರಂ ಪೂಜೆ: ಒಂಬತ್ತು ಗಂಟುಗಳ ದಾರಕ್ಕೆ (ತೋರಂ) ಪೂಜೆ ಮಾಡಿ, ಅದನ್ನು ಮನೆಯ ಮುತ್ತೈದೆಯರು ಮತ್ತು ಹೆಣ್ಣುಮಕ್ಕಳು ಬಲಗೈಗೆ ಕಟ್ಟಿಕೊಳ್ಳಿ.
  • ನೈವೇದ್ಯ: ದೇವಿಗೆ ಪ್ರಿಯವಾದ ಪಾಯಸ, ಒಬ್ಬಟ್ಟು (ಹೋಳಿಗೆ), ಪುಳಿಯೋಗರೆ ಅಥವಾ ಕೋಸಂಬರಿಯನ್ನು ನೈವೇದ್ಯವಾಗಿ ಅರ್ಪಿಸಿ.
  • ಮಹಾಮಂಗಳಾರತಿ: ಧೂಪ, ದೀಪ ಮತ್ತು ಕರ್ಪೂರದಿಂದ ದೇವಿಗೆ ಮಂಗಳಾರತಿ ಮಾಡಿ, ವರಮಹಾಲಕ್ಷ್ಮಿ ವ್ರತದ ಕಥೆಯನ್ನು ಓದಿ ಅಥವಾ ಕೇಳಿ. [1, 2, 3, 4, 5, 6]

ನಿ

ನಿಮ್ಮ ಪೂಜೆಯ ಸಿದ್ಧತೆಯನ್ನು ಇನ್ನಷ್ಟು ಸುಲಭಗೊಳಿಸಲು, ನಿಮಗೆ ಕೆಳಗಿನವುಗಳಲ್ಲಿ ಯಾವುದು ಅಗತ್ಯವಿದೆ ಎಂದು ತಿಳಿಸಿ:

  • ವರಮಹಾಲಕ್ಷ್ಮಿ ಹಬ್ಬದ ದಿನ ಮಾಡಲು ಬೇಕಾದ ವಿಶೇಷ ನೈವೇದ್ಯಗಳ (ಅಡುಗೆ) ಪಟ್ಟಿ?
  • ಮನೆಯಲ್ಲೇ ಸರಳವಾಗಿ ಮಾಡಬಹುದಾದ ಲಕ್ಷ್ಮಿ ದೇವಿಯ ಸೀರೆ ಉಡಿಸುವ ಮತ್ತು ಅಲಂಕಾರದ ಐಡಿಯಾಗಳು?
  • ಪೂಜೆಯ ಸಮಯದಲ್ಲಿ ಪಠಿಸಬೇಕಾದ ಮುಖ್ಯ ಶ್ಲೋಕಗಳು ಮತ್ತು ಮಂತ್ರಗಳು?

ಆಷಾಢ ಮುಗಿಸಿ ಬಾರದ ಪತ್ನಿ ಪತಿ ಆತ್ಮಹತ್ಯೆ

0

ಕುಣಿಗಲ್ :-

ಪಟ್ಟಣದ ಮಹಾವೀರ ನಗರದ ವಾಸಿ ಅವಿನಾಶ್ (26) ಮೃತಪಟ್ಟವ ದಾಮಿನಿ ಎಂಬ ಯುವತಿಯನ್ನು ಕಳೆದ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆ ಆಗಿ ಕುಣಿಗಲ್ ಪಟ್ಟಣದಲ್ಲಿ ತನ್ನ ಸ್ವಂತ ಮನೆಯಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದ

ಆಷಾಢ ಮಾಸ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ದಾಮಿನಿ ತನ್ನ ತಂದೆ ಮನೆಗೆ ಹೋಗಿದ್ದರು ಮರಳಿ ಬರುವಂತೆ ಆತ ಪತ್ನಿಗೆ ಕರೆ ಮಾಡಿ ಮಾತನಾಡಿದ ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮುಕಿ ಫೋನ್ ಮುಖಾಂತರ ನಡೆದಿದೆ ಎನ್ನಲಾಗಿದೆ

ಗುರುವಾರ ರಾತ್ರಿ ತನ್ನ ತಮ್ಮನಿಗೆ ವಾಟ್ಸಪ್ ಮುಖಾಂತರ ಅವಳಿಗೆ ಶಿಕ್ಷೆ ಆಗಬೇಕು ಎಂದು ಮತ್ತು ತನ್ನ ಸಾವಿಗೆ ಆಕೆ ಕಾರಣ ಎಂದು ತಿಳಿಸಿದ್ದು ಅಂತಿಮ ಮರಣ ಪತ್ರವನ್ನು ಬರೆದಿದ್ದಾನೆ.

ಬೆಳಿಗ್ಗೆ ಅವಿನಾಶ್ ಇನ್ನು ಎದ್ದಿಲ್ಲ ಎಂದು ಮನೆಯವರು ಬಾಗಿಲು ಒಡೆದು ಒಳ ನೋಡಿದಾಗ ಆತ ನೇಣಿಗೆ ಶರಣಾಗಿರುವ ದೃಶ್ಯ ಕಂಡು ನಂತರ ಸಾರ್ವಜನಿಕರ ಸಹಕಾರದಿಂದ ಪೊಲೀಸರ ಮಾರ್ಗದರ್ಶನದಲ್ಲಿ ಶವವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ .

ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

ಡಿಸಿಎಂ ಹಾಗೂ ತುರುವೇಕೆರೆ ಶಾಸಕರಿಗೆ ಕಾಂಗ್ರೆಸ್ ಅಪಮಾನ -ಜೆಡಿಎಸ್ ಆರೋಪ

0

ಕುಣಿಗಲ್ :-

ಬರ ವೀಕ್ಷಣೆಗೆ ಬಂದ ಡಿಸಿಎಂ ಡಾ. ಜಿ ಪರಮೇಶ್ವರ್ ಮತ್ತು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಗೆ ಸ್ಥಳೀಯ ಕಾಂಗ್ರೆಸ್ಸಿಗರು ಘೇರಾವ್ ಹಾಕುವ ಮುಖಾಂತರ ಅವರನ್ನು ಅಪಮಾನಗೊಳಿಸಿದ್ದಾರೆ ಇದು ಸರಿಯಲ್ಲ ಎಂದು ಜೆಡಿಎಸ್ ನ ಮುಖಂಡ ಬಿಎನ್ ಜಗದೀಶ್ ಆರೋಪಿಸಿದ್ದಾರೆ.

ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬರ ಅದ್ಯಯನಕ್ಕೆ ಬಂದಂತಹ ಸಚಿವರು ಅವರ ಕೆಲಸ ಮಾಡಲು ಬಿಡಲಿಲ್ಲ ಇದು ಕುಣಿಗಲ್ ಶಾಸಕ ಅವರ ಪ್ರಚಾರದ ಸಂಚು ಉಪಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯನ್ನು ತಪ್ಪಿಸಿ ಅವರನ್ನು ಕುಣಿಗಲ್ ಗೆ ಕರೆಸಿ ಅಪಮಾನಿಸಿರುವುದು ಸರಿಯಲ್ಲ.

ಕುಣಿಗಲ್ನಲ್ಲಿ ನೀರಾವರಿ ಸಮಸ್ಯೆ ಬಗೆಹರಿಸಬೇಕು ಎಂಬುದು ಅವರಿಗೆ ಉದ್ದೇಶವಿಲ್ಲ ಮಾಗಡಿ ಭಾಗಕ್ಕೆ ನೀರು ತೆಗೆದುಕೊಂಡು ಹೋಗಬೇಕೆಂಬುದು ಅವರ ಉದ್ದೇಶ ಆಗಿದೆ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗುವ ಕೆಲಸಕ್ಕೆ ನಮ್ಮ ಅಭ್ಯಂತರ ಇಲ್ಲ ಆದರೆ ಕುಣಿಗಲ್ ಪಾಲಿನ ನೀರನ್ನು ನಾವು ನೀಡಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಹಲವಾರು ಜೆಡಿಎಸ್ ಮುಖಂಡರು ಇದ್ದರು

Ksrtc ಬಸ್ ಸಮಸ್ಯೆ ವಿದ್ಯಾರ್ಥಿಗಳ ಪ್ರತಿಭಟನೆ

0

ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತುಮಕೂರು ಭಾಗಕ್ಕೆ ಬಸ್ ಗಳ ಸಮಸ್ಯೆ ಉಂಟಾಗಿದೆ ಇದರಿಂದ ಕಾಲೇಜು ವಿಳಂಬ ಆಗುತ್ತಿದೆ ಎಂದು ನೂರಾರು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟಿಸಿದರು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕುಣಿಗಲ್ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಗೌಡಗೆರೆ ಕ್ಷೇತ್ರಕ್ಕೆ ಅತಿಯಾದ ಬಸ್ ಗಳನ್ನು ಬಿಡಲಾಗಿದೆ ಮೈಸೂರಿನಿಂದ ತುಮಕೂರಿಗೆ ಹೋಗುವ ಬಸ್ ಗಳು ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ಹಾಗೂ ಅದರಲ್ಲಿ ಕೂರಲು ನಿಲ್ಲಲು ಜಾಗ ಇಲ್ಲದ ಕಾರಣದಿಂದ ಸರಿಯಾದ ಸಮಯಕ್ಕೆ ಕಾಲೇಜು ತಲುಪಲು ಆಗುತ್ತಿಲ್ಲ ಇದರಿಂದ ನಮ್ಮ ಶಿಕ್ಷಣ ಹಾಳಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು

ಪ್ರತಿದಿನ ಬಸ್ ನಲ್ಲಿ ಮಹಿಳೆಯರು ಹೆಚ್ಚಾಗಿ ಪ್ರಯಾಣಿಸುತ್ತಿದ್ದು ವಿದ್ಯಾರ್ಥಿಗಳಿಗೆ ಸೀಟ್ ಸಿಗುವುದಿಲ್ಲ ಸ್ಥಳಾವಕಾಶವು ಕೂಡ ಇರುವುದಿಲ್ಲ ನಿತ್ಯದ ಸಮಸ್ಯೆ ಕೇಳುತ್ತಿಲ್ಲ ಹಲವಾರು ಬಾರಿ ಈ ಸಂಬಂಧ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಅವರು ಗೌಡಗೆರೆ ಅಥವಾ ಇತರ ಕ್ಷೇತ್ರಗಳಿಗೆ ಬಸ್ ಬಿಡುವ ಮನಸ್ಸು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಹಲವಾರು ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಮನವೊಲಿಸುವಲ್ಲಿ ಹರಸಾಹಸ ಪಡಬೇಕಾಯಿತು ನಂತರ ಬಂದ ಬಸ್ ಗಳನ್ನು ವಿದ್ಯಾರ್ಥಿಗಳಿಗೆ ಮೀಸಲಿರಿಸಿ ತುಮಕೂರಿಗೆ ಕಳುಹಿಸಿಕೊಡಲಾಯಿತು.


ಬರ ಹೋರಾಟಕ್ಕೆ ಅಧಿಕಾರಿಗಳು ತಯಾರಾಗಬೇಕು : ಡಾ. ಜಿ ಪರಮೇಶ್ವರ್

0

ರಾಜ್ಯದಲ್ಲಿ ಅತಿಯಾದ ಬರ ಈ ಬಾರಿ ಉಂಟಾಗಲಿದೆ ಎದುರಿಸಲು ಅಧಿಕಾರಿಗಳು ಸಿದ್ದರಾಗಬೇಕು ಎಂದು ಡಿಸಿಎಂ ಡಾ. ಜಿ ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕುಣಿಗಲ್ ತಾಲೂಕಿನಲ್ಲಿ ಬರ ಅಧ್ಯಯನ ಪ್ರವಾಸ ಮುಗಿಸಿ ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರ ಜೊತೆಗೂಡಿ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ನಾನು ಪಾವಗಡ, ಬಾಗಲಕೋಟೆ , ಕೊಪ್ಪಳ ಸೇರಿದಂತೆ ವಿವಿಧ ಭಾಗಗಳಲ್ಲಿ ಬರ ಅಧ್ಯಯನ ಮಾಡಿದ್ದೇನೆ ಇದೀಗ ಕುಣಿಗಲ್ ತಾಲೂಕಿನ ವಿವಿಧ ಭಾಗಗಳಲ್ಲಿ ಬರ ಅಧ್ಯಯನ ನಡೆಸಿದ್ದು ಇಲ್ಲಿನ ಹಲವಾರು ಅಡಿಕೆ ತೆಂಗು ಒಣಗಿವೆ ಮುಂದಿನ ದಿನಗಳಲ್ಲಿ ಅತಿಯಾದ ಬರಗಾಲ ಉಂಟಾಗಲಿದೆ ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳು ಉಂಟಾಗಲಿದ್ದು ಅಧಿಕಾರಿಗಳು ತಮ್ಮ ಕೇಂದ್ರ ಸ್ಥಳದಲ್ಲಿ ಇದ್ದು ಬರವನ್ನು ಎದುರಿಸುವ ಜವಾಬ್ದಾರಿಯನ್ನ ಮಾಡಬೇಕಾಗಿದೆ ಎಂದರು,

ಬರಗಾಲದ ಹಿನ್ನೆಲೆಯಲ್ಲಿ ಜನರು ಗುಳೆ ಹೋಗುವುದು ಸಾಮಾನ್ಯ ಸಂಗತಿ ಯಾಗಿದೆ ಅದಕ್ಕಾಗಿ ಜಿ ರಾಮ್ ಜಿ ಯೋಜನೆಯಲ್ಲಿ ಹಲವಾರು ಮಾನವ ಕೂಲಿಗಳನ್ನು ಸೃಷ್ಟಿ ಮಾಡಲಾಗಿದೆ ಈಗಾಗಲೇ ಸುಮಾರು 50 ಸಾವಿರ ಮಾನವ ದಿನಗಳ ಮಂಜೂರಾತಿ ಮಾಡಲಾಗಿದ್ದು ಸ್ಥಳೀಯವಾಗಿ ಹಲವಾರು ಕಾಮಗಾರಿಗಳು ಕೆರೆ ಹೂಳು ತೆಗೆಯುವ ಕಾರ್ಯಕ್ರಮ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ರೈತರಿಗೆ ನೀಡುವ ಮುಖಾಂತರ ಜನ ಗುಳೆ ಹೋಗುವುದನ್ನು ತಡೆಯಬೇಕೆಂದರು.

ಮುಖ್ಯಮಂತ್ರಿಗಳು ಪ್ರಜಾ ಸೇವೆ ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಅದರಿಂದ ಸಾಮಾಜಿಕ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕೆಲಸ ಸುಲಭ ಆಗಲಿದೆ ಅಧಿಕಾರಿಗಳು ಅದಕ್ಕೆ ಸ್ಪಂದಿಸಬೇಕಾಗಿದೆ ಕ್ರಮ ಜರುಗಿಸಲು ಸರ್ಕಾರ ಸಿದ್ದ ಇದೆ ಎಂದರು,ರಾಜ್ಯದಲ್ಲಿ ಅತಿ ಹೆಚ್ಚು ಬಡತನ ಇದೆ ಬಹುತೇಕ ಬಡವರು ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ ಕುಡಿಯುವ ನೀರಿನ ಸಮಸ್ಯೆ ಇಂದು ಕೂಡ ಜೀವಂತವಾಗಿದೆ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ನೀಡುತ್ತಿದ್ದರು ಕೂಡ ಅದು ಸಮರ್ಪಕ ಆಗುತ್ತಿಲ್ಲ ರಾಜ್ಯದ 164 ತಾಲೂಕುಗಳು ಅತಿಯಾದ ಭರದ ಹಿನ್ನೆಲೆಯಲ್ಲಿ ಕಷ್ಟ ಅನುಭವಿಸುತ್ತಿವೆ ಮುಂದಿನ ದಿನಗಳಲ್ಲಿ ಅಂತಹ ತಾಲೂಕುಗಳಿಗೆ ಸರ್ಕಾರ ಬರಗಾಲ ಘೋಷಣೆ ನಂತರ ವಿವಿಧ ಸವಲತ್ತು ನೀಡುತ್ತದೆ ಎಂದರು,ಜಾನುವಾರುಗಳಿಗೆ ಮೇವಿನ ಸಮಸ್ಯೆಯನ್ನು ಬಗೆಹರಿಸುವ ಹಿನ್ನೆಲೆಯಲ್ಲಿ ಈಗಾಗಲೇ ಕೆಎಂಎಫ್ ಜೊತೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಅವರು ನೀಡುವ ಬಿತ್ತನೆ ಬೀಜಗಳನ್ನು ನೀರು ಇರುವ ರೈತರುಗಳು ಬೆಳೆಸಿ ತಮ್ಮ ಜಾನುವಾರುಗಳಿಗೆ ಮೇವಿನ ಪೂರೈಕೆ ಮಾಡಿ ಎಂದು ಮನವಿ ಮಾಡಿದರು,

ಬರಗಾಲದಲ್ಲಿ ರೈತರು ಬೆಳೆ ನಷ್ಟ ಮಾಡಿಕೊಳ್ಳುತ್ತಾರೆ ಈ ಸಂದರ್ಭದಲ್ಲಿ ರೈತರಿಂದ ವಂತಿಕೆ ಪಡೆದಂತ ವಿಮಾ ಕಂಪನಿಗಳು ಸರಿಯಾದ ರೀತಿಯಲ್ಲಿ ರೈತರಿಗೆ ನೀಡಬೇಕಾದ ಸವಲತ್ತುಗಳನ್ನು ಹಾಗೂ ಮರುಪಾವತಿಯನ್ನು ನೀಡುತ್ತಿಲ್ಲ ಈ ಬಗ್ಗೆ ಕಟ್ಟುನಿಟ್ಟು ಕ್ರಮವನ್ನು ಜರಗಿಸಬೇಕಾದ ಅವಶ್ಯಕತೆ ಇರುವುದರಿಂದ ಮುಂದಿನ ದಿನಗಳಲ್ಲಿ ವಿಮಾ ಕಂಪನಿಗಳ ಜೊತೆ ಸಭೆ ನಡೆಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಇರುವ ಬಹುತೇಕ ಮಳೆಮಾಪನ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ ನಮಗೆ ಮಳೆಯ ಪ್ರಮಾಣ ಪೂರಕ ಪರಿಪೂರ್ಣ ಸತ್ಯಂಶ ತಿಳಿಯುವಲ್ಲಿ ತೊಂದರೆ ಆಗುತ್ತಿದೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಮಾಪನವನ್ನು ದುರಸ್ತಿ ಮಾಡುವ ಕೆಲಸವನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್..ತುಮಕೂರು ಡಿ ಸಿ ಶುಭಕಲ್ಯಾಣ್ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಇದ್ದರು . .

ಕೆಂಕೆರೆ ಶೇಖರಪ್ಪ ನೇತೃತ್ವದಲ್ಲಿ ಕರುನಾಡು ರೈತ ಸಂರಕ್ಷಣಾ ಸೇನೆ

0

ತಾಲೂಕಿನ ರೈತರ ಏಳಿಗೆಗಾಗಿ ಕರುನಾಡ ರೈತ ಸಂರಕ್ಷಣಾ ಸೇನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ರೈತರ ಸಮಸ್ಯೆ ಹಾಗೂ ಅವರಿಗೆ ಬೇಕಾದ ಸವಲತ್ತುಗಳ ಬಗ್ಗೆ ಹೋರಾಟ ನಡೆಸುವುದಾಗಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಂಜಯ್ ಕುಮಾರ್ ಎಂಕೆ ತಿಳಿಸಿದ್ದಾರೆ.

ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದರು

ರೈತ ನಿರಂತರವಾಗಿ ತನ್ನ ಹೊಲಗದ್ದೆಗಳಲ್ಲಿ ಸಮಾಜಕ್ಕೆ ಬೇಕಾಗಿರುವ ಆಹಾರ ಉತ್ಪಾದನೆ ಮಾಡುವ ಉದ್ದೇಶದಿಂದ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾನೆ ಅಂತಹ ಸಂದರ್ಭದಲ್ಲಿ ರೈತನೆ ಮೇಲೆ ಕ್ರಿಮಿಕೀಟ ಕಾಡು ಪ್ರಾಣಿಗಳು ಸೇರಿದಂತೆ ವಿದ್ಯುತ್ ಅವಗಡಗಳು ಪ್ರತಿನಿತ್ಯ ಸಂಭವಿಸುತ್ತಿರುತ್ತದೆ ಇಂತಹ ವಿಪತ್ತಿನ ಸಮಯದಲ್ಲೂ ಕೂಡ ಈ ಜೀವಕ್ಕೆ ಬೇಕಾದ ಆಹಾರವನ್ನು ಉತ್ಪಾದನೆ ಮಾಡಿ ಕೊನೆಗೆ ತಾನು ಉತ್ಪಾದನೆಗೆ ಅವಶ್ಯಕತೆ ಇರುವಂತಹ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಸರ್ಕಾರದಿಂದ ಪಡೆಯುವ ಸವಲತ್ತುಗಳಿಗಾಗಿ ದಿನಗಟ್ಟಲೆ ಪರಿತಪಿಸಬೇಕಾದ ಪರಿಣಾಮವಿದೆ ಅದಕ್ಕೆ ರೈತರಿಗಾಗಿ ಸಂಘಟನೆ ಪ್ರಾರಂಭ ಮಾಡಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡುತ್ತೇವೆ ಎಂದರು

ಜಿಲ್ಲಾ ಅಧ್ಯಕ್ಷರಾದ ಆಲೆಮನೆ ರಂಗಸ್ವಾಮಿ ಮಾತನಾಡಿ ಹೊಸದಾಗಿ ಸಂಘ ಪ್ರಾರಂಭ ಮಾಡಿದ್ದೇವೆ ಹೆಚ್ಚು ಸದಸ್ಯರನ್ನು ತುಮಕೂರು ಜಿಲ್ಲೆಯ ಆದ್ಯಂತ ನೇಮಿಸಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ನಾವು ತಯಾರಿ ಮಾಡುತ್ತೇವೆ ಎಂದರು

ಕುಣಿಗಲ್ ತಾಲೂಕು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಂಕೆರೆ ಶೇಖರಪ್ಪ ಪ್ರತಿನಿತ್ಯ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಸಂಘಟನೆಯಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾವು ಸಂಘಟನೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕುಣಿಗಲ್ ಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮಕ್ಕೆ ತಯಾರಿ ಮಾಡುತ್ತೇವೆ ಎಂದರು

ಈ ಸಂದರ್ಭದಲ್ಲಿ ಚಿಕ್ಕಬಳ್ಲಾಪುರ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರೇಶ್ , ಉಪಾಧ್ಯಕ್ಷ ಮಂಜುನಾಥ್ , ರಾಮಪ್ಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ , ನಅಗರಾಜು ಗೌರೀಬಿದನೂರು ತಾಲ್ಲೂಕು ಅಧ್ಯಕ್ಷ , ಅಶೊಖ್ ಕುಮಾರ್ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಪ್ರದಾನ ಕಾಯರ್ದರ್ಶಿ ಸುರೇಶ್ , ಯುವ ರಾಜ್ಯಾಧ್ಯಕ್ಷ ಹೆಬ್ಬರಿ ಮುನಿಯಪ್ಪ , ರಾಜ್ಯ ವರಿಷ್ಠ ಕೋದಂಡರಾಮು ಸೇರಿದಂತೆ ಪದಾಧಿಕಾರಿಗಳು ಇದ್ದರು .

ಕುಡಿಯುವ ನೀರಿಗಾಗಿ ಭಕ್ತರಹಳ್ಳಿ ಗ್ರಾಪಂ ಗೆ ಬೀಗ

0

ಸಮರ್ಪಕ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ನೂರಾರು ಮಹಿಳೆಯರು ಖಾಲಿ ಕೊಡದೊಂದಿಗೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಬೀಗ ಜಡಿದ ಘಟನೆ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಮುಖಂಡ ವೆಂಕಟೇಶ್ ರಾಜು ನೇತೃತ್ವದಲ್ಲಿ ಹಲವಾರು ಮಹಿಳೆಯರು ಖಾಲಿ ಕೊಡಗಳ ಸಮೇತ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತು ಹೋರಾಟಕ್ಕೆ ಮುಂದಾದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು ಹಲವಾರು ತಿಂಗಳುಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ನೋಡೆಲ್ ಅಧಿಕಾರಿಗಳು ಸೇರಿದಂತೆ ಪಿಡಿಒ ಹಾಗೂ ಇತರರು ಕೇವಲ ಹಾರಿಕೆ ಉತ್ತರ ನೀಡುತ್ತಾರೆ ನಮಗೆ ಬೇಕಾದ ಕುಡಿಯುವ ನೀರನ್ನು ನೀಡುವ ಬದಲು ಉದಾಸೀನತೆ ಎಷ್ಟು ಸರಿ ಎಂದು ಪ್ರಶ್ನಿಸಿದರು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿಲ್ಲ ಬೇರೆ ಭಾಗದಿಂದ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿವೆ ಎಂದು ವಾರಕ್ಕೆ ಒಮ್ಮೆ ಒಂದು ಎರಡು ಬಿಂದಿಗೆ ನೀರು ಕೊಟ್ಟು ಸುಮ್ಮನಾಗುತ್ತಾರೆ .

ಜನಪ್ರತಿನಿಧಿಗಳಿಗೆ ಅಧಿಕಾರ ಇಲ್ಲ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆ ಸರಿ ಇಲ್ಲ ಎಂದರು .

ಈ ಸಂದರ್ಭದಲ್ಲಿ ಚಂದ್ರಮ್ಮ, ಸಂಗೀತಮ್ಮ,ಪ್ರೇಮ,ಪದ್ಮ ,ವಸಂತ,ನಾಗರಾಜು,ಅನ್ನಪೂರ್ಣಮ್ಮ ಸೇರಿದಂತೆ ಹಲವಾರು ಮಹಿಳೆಯರು ಇದ್ದರು .

ಫೋಟೋ ಇದೆ : 18 ಕೆಜಿಎಲ್ 3 : – ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನಾ ನಿರತ ಮಹಿಳೆಯರು