ನವದಹೆಲಿ: ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಕೇಂದ್ರದ ದೂರಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾಧಿತ್ಯ ಸಿಂಧ್ಯಾ ಇವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಬಿಎಸ್ಎಸನ್ಎಿಲ್ ನೆಟ್ವರ್ಕ ಸಮಸ್ಯೆಯಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈಗಾಗಲೇ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್ ಮತ್ತು ಮಧುಗಿರಿಯಲ್ಲಿ 4ಜಿ ನೆಟ್ವ.ರ್ಕ್ ಸಂಪರ್ಕ ಕೊಡಿಸುವಂತೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅತಿ ಜರೂರಾಗಿ ಅವುಗಳಿಗೆ ಮಂಜೂರಾತಿ ನೀಡುವಂತೆ ಕೇಂದ್ರ ದೂರಸಂಪರ್ಕ ಸಚಿವರಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ಸೋಮಣ್ಣ ಮನವಿ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿಯ ಮದನಮಾಡು, ಪಂಕಜನಹಳ್ಳಿ, ತಿಪಟೂರು ತಾಲ್ಲೂಕಿನ ಮಾಯಗೊಂಡನಹಳ್ಳಿ, ತುರುವೆಕೆರೆ ತಾಲ್ಲೂಕಿನ ಕೋಲಾಳ, ಕಂಕೂರು ಮತ್ತು ಕುಣಿಗಲ್ ತಾಲ್ಲೂಕಿನ ಕಿತ್ನಮಂಗಲ ಹಳ್ಳಿಗಳಲ್ಲಿ 4ಜಿ ಸಂಪರ್ಕ ಸಾಧನದ ಕುರಿತಾದ ಪ್ರಸ್ತಾವನೆಗಳ ಕುರಿತಾಗಿಯೂ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಸೋಮಣ್ಣ ಚರ್ಚೆ ಮಾಡಿದ್ದಾರೆ.
ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂದ್ಯಾ ಈ ಬಗ್ಗೆ ಅತೀ ಜರೂರಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
Dung paint Abhishek to the temple of Siddalingeshwar
ತಪೋ ಕ್ಷೇತ್ರ ಕಗ್ಗೆರೆ ದೇವಾಲಯಕ್ಕೆ ಸಗಣಿ ಬಣ್ಣದ ಅಭಿಷೇಕ ಏನಿದು ಸಗಣಿ ಬಣ್ಣದ ಅಭಿಷೇಕ ಎಂಬ ವಿಚಾರ ನಿಮ್ಮನ್ನು ಗೊಂದಲಕ್ಕೆ ಉಂಟು ಮಾಡಿರಬಹುದು
ಹೌದು ಶ್ರೀ ಸಿದ್ದಲಿಂಗೇಶ್ವರನ ಹುತ್ತದ ಮೇಲೆ ಹಾಲು ಕರೆಯುವ ಹಸುವಿನಿಂದ ಸಂಗ್ರಹಿಸಿದ ಸಗಣಿಯಿಂದ ಬಣ್ಣವನ್ನು ತಯಾರಿಸಿ ಸಿದ್ದಲಿಂಗೇಶ್ವರನ ದೇವಾಲಯಕ್ಕೆ ಪೇಂಟಿಂಗ್ ಮಾಡಲಾಗಿದೆ.
ತಪೋ ಕ್ಷೇತ್ರ ಕಗ್ಗೆರೆಯ ಗ್ರಾಮದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ನೆಲಮಂಗಲದ ಬಸವಣ್ಣ ದೇವರ ಮಠದ ವತಿಯಿಂದ ನಡೆಸಲಾಗುತ್ತಿತ್ತು ಈ ಸಂದರ್ಭದಲ್ಲಿ ದೇವಾಲಯಕ್ಕೆ ಬಣ್ಣ ಬಳಿಯುವ ಅನಿವಾರ್ಯತೆ ಇದ್ದ ಕಾರಣ ಸಿದ್ದಲಿಂಗೇಶ್ವರರು ಗೋಪ್ರಿಯರಾಗಿದ್ದರು ಎಂಬ ಕಾರಣಕ್ಕೆ ಗೋ ಉತ್ಪನ್ನವಾದ ಗೋಮಯ ಪೇಂಟಿಂಗ್ ಬಣ್ಣ ಮಾಡಿದ್ದಾರೆ ದೇವಾಲಯದ ಕಾಮಗಾರಿ ಸಂಪೂರ್ಣ ಮುಕ್ತಾಯ ಹಂತ ತಲುಪಿದ್ದು ಫೆಬ್ರವರಿ 23ರ ಭಾನುವಾರ ಗುರುಗಳ ಪಾದಪೂಜೆ ಮತ್ತು ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ
ತಾಲೂಕಿನ ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ದಲಿತ ಬಾಲಕಿಯನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಮುಸಲ್ಮಾನ್ ಯುವಕನ್ನನ ಉಪಟಳದಿಂದ ಬೇಸತ್ತು ನೇಣಿಗೆ ಶರಣಾದ ಘಟನೆ ಅಮೃತವರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ
ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ಬಾಲಕಿ ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು, ಕಳೆದ ಕೆಲವು ದಿನಗಳಿಂದ ಮುಸಲ್ಮಾನ್ ಯುವಕನೊಬ್ಬ ಆಕೆಯನ್ನು ಪ್ರೀತಿಸು ಎಂದು ಪ್ರೀತಿಸುತ್ತಾ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ಮಾಡಿದ ಎನ್ನಲಾಗಿದೆ, ಕಳೆದ ಕೆಲವು ದಿನಗಳ ಹಿಂದೆ ಕುಣಿಗಲ್ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮತ್ತು ಮಹಾತ್ಮ ಗಾಂಧಿ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದ ಈ ಘಟನೆಯಿಂದ ಮನನೊಂದ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,
ಮಗಳ ಸಾವಿನ ನಂತರ ಘಟನೆ ಪೋಷಕರಿಗೆ ತಿಳಿದು ನಂತರ ಅಮೃತೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ
ತಾಲೂಕಿನ ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ದಲಿತ ಬಾಲಕಿ ಸುಮಾ (16)ಳನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಮುಸಲ್ಮಾನ್ ಯುವಕನನ್ನ ಉಪಟಳದಿಂದ ಬೇಸತ್ತು ನೇಣಿಗೆ ಶರಣಾದ ಘಟನೆ ಅಮೃತೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ .
ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ಬಾಲಕಿ ಸುಮಾ(16) ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು,
ಕಳೆದ ಕೆಲವು ದಿನಗಳಿಂದ ಮುಸಲ್ಮಾನ್ ಯುವಕನೊಬ್ಬ ಆಕೆಯನ್ನು ಪ್ರೀತಿಸು ಎಂದು ಪೀಡಿಸುತ್ತಾ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ಮಾಡಿದ ಎನ್ನಲಾಗಿದೆ,
ಕಳೆದ ಕೆಲವು ದಿನಗಳ ಹಿಂದೆ ಕುಣಿಗಲ್ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮತ್ತು ಮಹಾತ್ಮ ಗಾಂಧಿ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದ ಈ ಘಟನೆಯಿಂದ ಮನನೊಂದ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,
ಮಗಳ ಸಾವಿನ ನಂತರ ಘಟನೆ ಪೋಷಕರಿಗೆ ತಿಳಿದು ನಂತರ ಅಮೃತೂರ್ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿದ್ದು ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕುಣಿಗಲ್ ಪಟ್ಟಣದ ಸ್ಟೇಲ್ಲಾ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಮುಗಿಸಿ ಹೊರಟ 10 ನೇ ತರಗತಿ ವಿದ್ಯಾರ್ಥಿನಿ ಇಂದುಶ್ರೀ (16) ರಸ್ತೆಯ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ
ಮೃತ ವಿದ್ಯಾರ್ಥಿ, ಕುಣಿಗಲ್ ತಾಲೂಕಿನ ಕೊತ್ತಕೆರೆ ಹೋಬಳಿಯ ಬಾಗೇನಹಳ್ಳಿ ಗ್ರಾಮದ ವಾಸಿಯಾಗಿದ್ದು ಕುಣಿಗಲ್ ಪಟ್ಟಣದ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು,
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 9ನೇ ತರಗತಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ತನ್ನ ಸ್ವಗ್ರಾಮಕ್ಕೆ ತೆರಳುವಾಗ ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯ ಶನಿ ದೇವಾಲಯದ ಮುಂಭಾಗದಲ್ಲಿ ಬರುತ್ತಿದ್ದ ಟ್ಯಾಕ್ಟರ್ ಮತ್ತು ಬೈಕ್ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ,
ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವವನ್ನು ಇರಿಸಲಾಗಿತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ
ಕುಣಿಗಲ್ :- ತಾಲೂಕಿನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಪೇಠ 1 ಎಂಬ ಚುಚ್ಚುಮದ್ದು ರಾತ್ರಿ ನೀಡಿದ್ದು ಮಗು ಬೆಳಿಗ್ಗೆ ಮೃತಪಟ್ಟಿದೆ,
ಸಿಂಗೋನಹಳ್ಳಿ ಗ್ರಾಮದ ವಾಸಿಗಳಾದ ಚೈತ್ರ ಹಾಗೂ ಮುರಳಿ ಯ ದಂಪತಿಗಳಿಗೆ ಜನಿಸಿದ್ದ ಎರಡೂವರೆ ತಿಂಗಳ ಗಂಡು ಮಗು ದಕ್ಷಿತ್ ಸಾವು ಕುಟುಂಬದ ಸದಸ್ಯರಿಗೆ ತೀವ್ರ ನೋವು ಉಂಟು ಮಾಡಿದೆ,
ಕಳೆದ ಕೆಲವು ದಿನಗಳಿಂದ ಮಗುವಿಗೆ ಚುಚ್ಚುಮದ್ದು ಹಾಕಿಸಬೇಕು ಎಂದು ಸಿಬ್ಬಂದಿ ಆಸ್ಪತ್ರೆಗೆ ಕರೆಯುತ್ತಿದ್ದರು ಈ ಸಂಬಂಧ ತಾಯಿ ಚೈತ್ರ ಗುರುವಾರ ಮಗುವನ್ನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಮಧ್ಯಾಹ್ನ 12:30 ರಲ್ಲಿ ಹಲವಾರು ಲಸಿಕೆಗಳನ್ನು ಮಗುವಿಗೆ ನೀಡಲಾಗಿದೆ ಎಂದು ತಿಳಿಸಿದ್ದು ರಾತ್ರಿ ಮಗು ಜ್ವರ ಮತ್ತು ವಿಪರೀತ ನೋವಿನಿಂದ ನರಳುತ್ತಿದ್ದು ಬೆಳಗಿನ ಜಾವ ಮೃತ ಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ,
ಮಗುವಿನ ಸಾವು ಪೋಷಕರು ಮತ್ತು ಸಂಬಂಧಿಕರಿಗೆ ತೀವ್ರ ನೋವುಂಟು ಮಾಡಿದ್ದು ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ತಾಲೂಕಿನ ಕೊತ್ತಗೆರೆ ಹೋಬಳಿಯ ವಡ್ಡರ ಕುಪ್ಪೆ ಬಳಿ ಡಿಸೆಂಬರ್ 31ರ ರಾತ್ರಿ ತನ್ನ ಸ್ವಗ್ರಾಮಕ್ಕೆ ಹೊಸ ವರ್ಷ ಆಚರಣೆಗೆ ಕುಟುಂಬದ ಸದಸ್ಯರಿಗಾಗಿ ಬಿರಿಯಾನಿ ಸಮೇತ ತೆರಳುವಾಗ ಅಪರಿಚಿತ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ,
ಮೃತ ವ್ಯಕ್ತಿ ಮಧು 28 ಹೆಬ್ಬೂರು ಹೋಬಳಿಯ ಮಣಿಕುಪ್ಪೆ ವಾಸಿ ಆಗಿದ್ದು ಸ್ನೇಹಿತ ಹಾಗೂ ಕುಟುಂಬಸ್ಥರ ಜೊತೆ ಹೊಸ ವರ್ಷ ಆಚರಣೆ ಮಾಡುವ ಸಲುವಾಗಿ ಬಿರಿಯಾನಿ ಹಾಗೂ ಬೇಕರಿ ತಿನಿಸುಗಳನ್ನು ಖರೀದಿ ಮಾಡಿ ಮನೆಗೆ ತೆರಳುವ ಸಮಯದಲ್ಲಿ ರಾತ್ರಿ 8 ರ ಸಮಯದಲ್ಲಿ ಕುಣಿಗಲ್ ತುಮಕೂರು ರಸ್ತೆಯ ವಡ್ಡರ ಕುಪ್ಪೆ ಬಳಿ ಹಿಂಬದಿಯ ಅಪರಿಚಿತ ವಾಹನ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ,
ತುಮಕೂರಿನಿಂದ ಕುಣಿಗಲ್ಗೆ ಬರುತ್ತಿದ್ದ ಮಾಜಿ ಪುರಸಭಾ ಅಧ್ಯಕ್ಷ ಕೆ ಎಲ್ ಹರೀಶ್ ಘಟನೆಯನ್ನು ಕುಣಿಗಲ್ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಸಿಪಿಐ ನವೀನ್ ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಶವವನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಇರಿಸಿದ್ದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ
ಮೂಲೆಯಲ್ಲಿ ಬಿದ್ದು ಜಿರಲೆ ಸೇರಿದಂತೆ ಹಲವಾರು ಕ್ರಿಮಿಗಳಿಗೆ ವಾಸಸ್ಥಾನ ಆಗಿರುವ ಹಳೆಯ ಸೀರೆಗಳನ್ನು ಮಾರಾಟ ಮಾಡಿ ಸಾವಿರಾರು ಹಣ ಸಂಪಾದಿಸುವ ಅವಕಾಶ ಇಲ್ಲಿದೆ, ಕುಣಿಗಲ್ ನ ದೊಡ್ಡಪೇಟೆಯಲ್ಲಿ
ಕನ್ನಿಕಾ ಪರಮೇಶ್ವರಿ ಎಂಬ ತಾತ್ಕಾಲಿಕ ಅಂಗಡಿ ಪ್ರಾರಂಭವಾಗಿದ್ದು ಈ ಅಂಗಡಿಯಲ್ಲಿ ಹಳೆಯ ರೇಷ್ಮೆ ಸೀರೆಗಳನ್ನು ಖರೀದಿ ಮಾಡಿ ಸ್ಥಳದಲ್ಲೇ ಹಣ ನೀಡುತ್ತಾರೆ
ನಿಮ್ಮ ಮನೆಯಲ್ಲೂ ಕೂಡ ಹಳೆಯ ರೇಷ್ಮೆ ಸೀರೆಗಳಿದ್ದರೆ ತಕ್ಷಣ ಮಾರಾಟ ಮಾಡಿ ಕೈ ತುಂಬಾ ಹಣ ಸಂಪಾದಿಸಬಹುದು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ +917899285242
ಕುಣಿಗಲ್ :-ಅತೀ ಶೀಘ್ರದಲ್ಲೇ ಹುಲಿಯೂರುದುರ್ಗ ಭಾಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗುತ್ತದೆ ಎಂದು ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ತಿಳಿಸಿದ್ದಾರೆ
ಕುಣಿಗಲ್ ಪಟ್ಟಣದ ಜ್ಞಾನಭಾರತಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ ಸಮಿತಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,
ಆಧುನಿಕತೆ ಬೆಳೆದಂತೆ ಗ್ರಾಮೀಣ ಮಕ್ಕಳು ಕೂಡ ಅಂತರಾಷ್ಟ್ರೀಯ ಮಟ್ಟಕ್ಕೆ ಪೈಪೋಟಿ ಕೊಡುವ ಅನಿವಾರ್ಯತೆ ಉಂಟಾಗಿದೆ, ಅದಕ್ಕಾಗಿ ಪ್ರತಿ ಮಗು ತನ್ನದೇ ಆದ ತಂತ್ರಜ್ಞಾನವನ್ನ ಬಳಸಿಕೊಂಡು ಬೆಳೆಯುವ ಅನಿವಾರ್ಯತೆ ಇದೆ ಕಂಪ್ಯೂಟರು ಸಾಮಾನ್ಯ ಜ್ಞಾನ ಸಾಮಾಜಿಕ ಜಾಲತಾಣ ಇವುಗಳ ಪ್ರಭಾವ ಹೆಚ್ಚಾಗಿದ್ದು ಮನುಷ್ಯನ ಸಭಾವ ಗುಣದ ಜೊತೆಗೆ ಕೃತಕ ಬುದ್ಧಿಮತ್ತೆ ಬಳಕೆಯಿಂದ ಸ್ಪರ್ಧೆ ಬಹು ಕಷ್ಟವಾಗುತ್ತಿದೆ ಆದ್ದರಿಂದ ಪ್ರತಿ ಮಗುವಿಗೆ ಗರಿಷ್ಟ ತರಗತಿ ಮತ್ತು ಶಿಕ್ಷಣವನ್ನು ನೀಡುವ ಅನಿವಾರ್ಯತೆ ಇದೆ ಎಂದರು
,ಸಿನಿಮಾ ಗೀತ ರಚನೆಕಾರರಾದ ವಿ ನಾಗೇಂದ್ರ ಪ್ರಸಾದ್ ಮಾತನಾಡಿ ಶಿಕ್ಷಣ ಕೇವಲ ವಿಜ್ಞಾನಿಗಳು ತಂತ್ರಜ್ಞರು ವೈದ್ಯರು ಇಂಜಿನಿಯರ್ ಶಿಕ್ಷಕರು ವಕೀಲರು ಗಳಂತಹ ಹುದ್ದೆಗಳನ್ನ ನಿರ್ಮಾಣ ಮಾಡುವ ಕೆಲಸದತ್ತ ಸಾಗುತ್ತಿದೆ ಇದರ ಜೊತೆ ಜೊತೆಗೆ ವಿವಿಧ ಕ್ಷೇತ್ರಗಳಲ್ಲೂ ಕೂಡ ಆಸಕ್ತಿ ಉಳ್ಳವರನ್ನು ಬೆಳೆಸುವ ಕೆಲಸ ಶಿಕ್ಷಣದಲ್ಲಿ ಜೊತೆಜೊತೆಗೆ ನಡೆಯಬೇಕಿದೆ ಕಲೆ ಸಾಹಿತ್ಯ ಸಂಗೀತ ಇವುಗಳು ಅಂತರಾಷ್ಟ್ರೀಯ ಮಠದಲ್ಲಿ ಗುರುತಿಸಿಕೊಂಡಾಗ ದೇಶದ ಗೌರವ ಹೆಚ್ಚಾಗುತ್ತದೆ ಎಂದರು,
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರಮೂರ್ತಿ, ಕುಣಿಗಲ್ ಮಾಜಿ ಶಾಸಕ ಬಿಬಿ ರಾಮಸ್ವಾಮಿಗೌಡ, ಸಹಾಯಕ ನಿರ್ದೇಶಕರು ಗುಬ್ಬಿಗೂಡು ರಮೇಶ್, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ, ತಾಲೂಕು ಅಧ್ಯಕ್ಷ ಕಪನಿಪಾಳ್ಯ ರಮೇಶ್ , ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಾಲ ಗುರುಮೂರ್ತಿ ಸೇರಿದಂತೆ ಹಲವಾರು ಜಿಲ್ಲೆಯ ವಿವಿಧಡೆಗಳಿಂದ ಬಂದಿದ್ದ ಹಲವಾರು ಅಧಿಕಾರಿಗಳು ಇದ್ದರು
ಆಕರ್ಷಣೆ ಮೆರವಣಿಗೆ :-
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಸಾರ್ವಜನಿಕರನ್ನು ಆಕರ್ಷಣೆ ಮಾಡಿತು, ಹಳ್ಳಿ ಸೊಗಡನ್ನು ಬಿಂಬಿಸುವ ಮೂಲಕ ಎತ್ತಿನ ಗಾಡಿಯಲ್ಲಿ ಗಣ್ಯರನ್ನು ಕಾರ್ಯಕ್ರಮಕ್ಕೆ ಕರೆತರಲಾಯಿತು ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡದ ಬಾವುಟವನ್ನು ಹಿಡಿದು ಮೆರವಣಿಗೆಗೆ ಕನ್ನಡದ ಕಂಪು ತಂದರು,
ತಾಲೂಕಿನ ಹಲವಾರು ಕ್ಷೇತ್ರದ ಪರಿಚಯ ಮಾಡುವ ವಿವಿಧ ಶಬ್ದ ಚಿತ್ರಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಬಂದಿದ್ದ ಎಲ್ಲರಿಗೂ ರಾಗಿ ಮುದ್ದೆ ಅವರೆಕಾಳು ಸಾರು ನೀಡುವ ಮುಖಾಂತರ ಹಳ್ಳಿ ಸೊಬಗಿನ ಕಾರ್ಯಕ್ರಮ ನಡೆಯಿತು
ಕುಣಿಗಲ್ :- ಪಟ್ಟಣದ ಪುರಸಭಾ ಸದಸ್ಯ ಹಾಗೂ ಅಂಬರೀಶ್ ಅಭಿಮಾನಿಗಳ ಬಳಗದ ಅಧ್ಯಕ್ಷ ಕೋಟೆ ನಾಗಣ್ಣ ಗುರುವಾರ ರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ,
ಗುರುವಾರ ರಾತ್ರಿ 10.30 ರ ಸಂದರ್ಭದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕುಣಿಗಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವನ್ನು ಕುಟುಂಬ ಸದಸ್ಯರು ಮಾಡಿದ್ದರೂ ಕೂಡ ಪ್ರಯೋಜನವಾಗಿಲ್ಲ,
ಕುಣಿಗಲ್ ನ ಕೋಟೆ ನಾಗಣ್ಣ ಹಲವಾರು ಸಂಘ ಸಂಸ್ಥೆಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಬಡವರ ಪರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರು,
ನಾಗಣ್ಣ ಅವರ ಸಾವು ಕುಣಿಗಲ್ ನ ಬಹುತೇಕ ಸಾರ್ವಜನಿಕರು ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ರಾಜಕೀಯ ಮುಖಂಡರಲ್ಲಿ ನೋವು ಉಂಟು ಮಾಡಿದೆ