ಕುಣಿಗಲ್ :- ಚಿತ್ರನಟ ದಿಗಂತ್ ಕುಣಿಗಲ್ ಹೈವೆ ಯಲ್ಲಿ ರೈಲ್ವೆ ಮಾದರಿ ಯ ಉಗಿಬಂಡಿ ಹೋಟೆಲ್ ಉದ್ಘಾಟಿಸಲಿದ್ದಾರೆ
ಇತ್ತೀಚಿಗೆ ಹೋಟೆಲ್ ಉದ್ಯಮದಲ್ಲಿ ಬಹು ದೊಡ್ಡ ಬದಲಾವಣೆ ಆಗುತ್ತಿದೆ,
ನದಿಯ ಒಳಭಾಗದಲ್ಲಿ ಸಮುದ್ರದ ಮೇಲ್ಭಾಗದಲ್ಲಿ, ಬೆಟ್ಟದ ಮೇಲೆ,ಮರದ ಮೇಲೆ ,ರಸ್ತೆ ಬೆಟ್ಟ -ಗುಡ್ಡ ಸೇರಿದಂತೆ ವಿವಿಧತೆಗಳಲ್ಲಿ ವಿಶೇಷವಾದ ಹೋಟೆಲ್ ಗಳನ್ನು ನಿರ್ಮಾಣ ಮಾಡುವ ಮತ್ತು ಗ್ರಾಹಕರಿಗೆ ಬೇಕಾದ ವಿಶೇಷ ರೀತಿಯಲ್ಲಿ ತಿನಿಸು ಮತ್ತು ಊಟ ಹಾಗೂ ಪಾನೀಯಗಳನ್ನು ನೀಡುವ ವ್ಯಾಪಾರೀಕರಣ ಉತ್ತಮವಾಗಿ ಅಭಿವೃದ್ಧಿ ಆಗುತ್ತಿದೆ,
ಬೆಂಗಳೂರು ಮಂಗಳೂರು ಹೆದ್ದಾರಿಯ ಗೊಟ್ಟಿಕೆರೆ ಬಳಿ ವಿಶೇಷವಾದ ರೈಲು ಮಾದರಿಯಲ್ಲಿ ಹೋಟೆಲ್ ಒಂದನ್ನು ಧನಂಜಯ ಎಂಬ ಯುವಕ ಸ್ಥಾಪಿಸಿದ್ದಾರೆ,
ಹೋಟೆಲ್ ಮುಂಬಾಗದಲ್ಲಿ ರೈಲು ಇಂಜಿನ್ ಮಾದರಿಯಲ್ಲಿ ಇದ್ದು ಪ್ರತಿಯೊಬ್ಬರೂ ಕೂಡ ಇದರ ಒಳಗೆ ಪ್ರವೇಶ ಮಾಡಬೇಕಿದೆ,
ಈ ಹೋಟೆಲ್ ನಲ್ಲಿ ಎಸಿ ಕೋಚ್, ಜನರಲ್ ಕೋಚ್ ಹಳ್ಳಿ ವಾತಾವರಣ ಸೇರಿದಂತೆ ವಿಶೇಷ ಆಕರ್ಷಣೆಯ ಕಲಾಕೃತಿ ಮತ್ತು ಹೊರಾಂಗಣ ಮತ್ತು ಒಳಾಂಗಣವನ್ನ ನಿರ್ಮಾಣ ಮಾಡಿದ್ದಾರೆ,
ಸೆಪ್ಟೆಂಬರ್ 8 ರ ಭಾನುವಾರ ಚಲನಚಿತ್ರ ನಟ ದಿಗಂತ್, ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್, ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿ ಎನ್ ಮಂಜುನಾಥ್, ಬಿದನಗೆರೆ ಸತ್ಯ ಶನೇಶ್ವರ ದೇವಾಲಯದ ಧರ್ಮದರ್ಶಿ ಧನಂಜಯ ಗುರೂಜಿ ಸೇರಿದಂತೆ ಹಲವಾರು ಗಣ್ಯರು ಅಧಿಕಾರಿಗಳು ರಾಜಕೀಯ ಮುಖಂಡರು ಮತ್ತು ವಿವಿಧ ಚಲನಚಿತ್ರ ನಟರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಇಲ್ಲಿಗೆ ಬರುವ ಎಲ್ಲಾ ಗ್ರಾಹಕರಿಗೆ ಚಲನ ಚಿತ್ರ ಅಭಿಮಾನಿಗಳಿಗೆ ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆಯನ್ನು ಕೂಡ ಏರ್ಪಡಿಸಲಾಗಿದೆ
ನೀವು ಕೂಡ ಬಿಡುವಿನಲ್ಲಿ ಮತ್ತು ಹೆದ್ದಾರಿಯಲ್ಲಿ ಪ್ರವೇಶ ಮಾಡುವಾಗ ಅವಶ್ಯಕತೆ ಇದ್ದಾಗ ವಿಶೇಷವಾದ ಹೋಟೆಲ್ ಗೆ ಭೇಟಿ ನೀಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ