ಕುಣಿಗಲ್ :- ತಾಲೂಕಿನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಪೇಠ 1 ಎಂಬ ಚುಚ್ಚುಮದ್ದು ರಾತ್ರಿ ನೀಡಿದ್ದು ಮಗು ಬೆಳಿಗ್ಗೆ ಮೃತಪಟ್ಟಿದೆ,
ಸಿಂಗೋನಹಳ್ಳಿ ಗ್ರಾಮದ ವಾಸಿಗಳಾದ ಚೈತ್ರ ಹಾಗೂ ಮುರಳಿ ಯ ದಂಪತಿಗಳಿಗೆ ಜನಿಸಿದ್ದ ಎರಡೂವರೆ ತಿಂಗಳ ಗಂಡು ಮಗು ದಕ್ಷಿತ್ ಸಾವು ಕುಟುಂಬದ ಸದಸ್ಯರಿಗೆ ತೀವ್ರ ನೋವು ಉಂಟು ಮಾಡಿದೆ,
ಕಳೆದ ಕೆಲವು ದಿನಗಳಿಂದ ಮಗುವಿಗೆ ಚುಚ್ಚುಮದ್ದು ಹಾಕಿಸಬೇಕು ಎಂದು ಸಿಬ್ಬಂದಿ ಆಸ್ಪತ್ರೆಗೆ ಕರೆಯುತ್ತಿದ್ದರು ಈ ಸಂಬಂಧ ತಾಯಿ ಚೈತ್ರ ಗುರುವಾರ ಮಗುವನ್ನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಮಧ್ಯಾಹ್ನ 12:30 ರಲ್ಲಿ ಹಲವಾರು ಲಸಿಕೆಗಳನ್ನು ಮಗುವಿಗೆ ನೀಡಲಾಗಿದೆ ಎಂದು ತಿಳಿಸಿದ್ದು ರಾತ್ರಿ ಮಗು ಜ್ವರ ಮತ್ತು ವಿಪರೀತ ನೋವಿನಿಂದ ನರಳುತ್ತಿದ್ದು ಬೆಳಗಿನ ಜಾವ ಮೃತ ಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ,
ಮಗುವಿನ ಸಾವು ಪೋಷಕರು ಮತ್ತು ಸಂಬಂಧಿಕರಿಗೆ ತೀವ್ರ ನೋವುಂಟು ಮಾಡಿದ್ದು ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ