ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಒಂದು ಕೋಮಿನ ಯುವಕರ ಗುಂಪು ಪ್ಯಾಲೈ ಸ್ತಾನ್ ಬಾವುಟವನ್ನು ಹಾರಿಸುವ ಪ್ರಯತ್ನ ಮಾಡಿದ್ದಾರೆ,
ಇನ್ನೊಂದು ಕೋಮುವಿನ ಯುವಕರು ಬಾವುಟ ಹಾರಿಸುವ ಪ್ರಯತ್ನಕ್ಕೆ ತಡೆ ಒಡ್ಡಿದ್ದಾರೆ ನಂತರ ಪೊಲೀಸರ ವಶಕ್ಕೆ ನೀಡಿದ್ದು ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ,ವೇದಿಕೆಯ ಮುಂಬಾಗದಲ್ಲಿ ಹಲವಾರು ದೇಶಪರವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು ಮತ್ತೊಂದೆಡೆ ವೇದಿಕೆ ಹಿಂಭಾಗದಲ್ಲಿ ಒಂದು ಕೋಮುವಿನ ಯುವಕರು ಪ್ಯಾಲೈ ಸ್ಥಾನ್ ಬಾವುಟವನ್ನು ಹಾರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು,
ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಕುಣಿಗಲ್ ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಭಾರತ ದೇಶದಲ್ಲಿ ಈ ನೆಲದ ಕಾನೂನು ರಾಷ್ಟ್ರಧ್ವಜ ರಾಷ್ಟ್ರಗೀತೆ ಸೇರಿದಂತೆ ರಾಷ್ಟ್ರಭಕ್ತಿಯ ವಿಚಾರದಲ್ಲಿ ಬಲಿಷ್ಠವಾಗಿದೆ ಇಂತಹ ಸಂದರ್ಭದಲ್ಲಿ ಕುಣಿಗಲ್ ನಂತಹ ನಗರದಲ್ಲಿ ಪ್ಯಾಲೆಸ್ಥಾನ್ ಬಾವುಟವನ್ನು ಹಾರಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸ ಎಂದರು,
ಇಂತಹ ದುಷ್ಟ ಶಕ್ತಿಗಳನ್ನು ದಮನ ಮಾಡುವ ಪ್ರಯತ್ನವನ್ನು ಪೊಲೀಸರು ಮತ್ತು ಸರ್ಕಾರ ತಕ್ಷಣ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಪರಿಷತ್ ಮತ್ತು ಬಜರಂಗದಳದ ಪ್ರಮುಖರಾದ ಗಿರೀಶ್ ಮಾತನಾಡಿ ದೇಶ ಅಭಿಮಾನ ಬಿತ್ತಬೇಕಾದವರು ಧರ್ಮದ ಬೀಜವನ್ನು ಬಿತ್ತುತ್ತಿದ್ದಾರೆ ಇದರಿಂದ ವಿದೇಶದ ಬಾವುಟವನ್ನು ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲಿ ಈ ಕೃತ್ಯ ಮಾಡಿದ ವ್ಯಕ್ತಿಗಳನ್ನ ಯಾವುದೇ ಮುಲಾಜಿಗೆ ಒಳಪಡದೆ ಕಾನೂನಿಗೆ ಗುರಿ ಪಡಿಸಬೇಕೆಂದರು