ಬಹುತೇಕ ಕುಣಿಗಲ್ ವಾಸಿಗಳಿಗೆ ಸೇರಿದಂತೆ ರಾಜ್ಯಕ್ಕೆ ಕುಣಿಗಲ್ ಅಮ್ಮ ಪರಿಚಯ ಇಲ್ಲ
ವಿಶೇಷ ಏನು ಎಂದರೆ ಆ ಜಾಗದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಚಿನ್ನ ಬೆಳ್ಳಿ ವಜ್ರಗಳನ್ನ ಒಂದು ಬಾವಿಯಲ್ಲಿ ಹಾಕಿ ಮುಚ್ಚಿದ್ದರು ಎಂಬ ದಂತಕಥೆ ಇದೆ
ಸಾವಿರಾರು ವರ್ಷಗಳ ಹಿಂದೆ ಮರಾಠಿ ದೊರೆ ಒಬ್ಬ ಒಂದು ಹುಡುಗಿಯನ್ನು ಮೋಹಿಸಿದ ಎಂಬ ಕಾರಣಕ್ಕೆ ಆಕೆ ಮನನೊಂದು ಬೆಂಕಿಗೆ ಅಹುತಿ ಆಗಿ ನಂತರ ಕುಣಿಗಲ್ ಅಮ್ಮ ಆಗಿ ಬದಲಾವಣೆ ಆದ ಕಥೆ ಇದು
ಕುಣಿಗಲ್ ಗೆ ಅಧಿದೇವತೆ ಆಗಿರುವ ಈ ದೇವಾಲಯ ಶಿಥಿಲ ಅವಸ್ಥೆ ತಲುಪಿದೆ ರಾಜಕಾರಣಿಗಳು ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಕುಣಿಗಲ್ ಜನರು ಈ ದೇವಾಲಯವನ್ನು ಕಡೆಗಣಿಸಿದ್ದಾರೆ ಎಂಬ ನೋವಿದೆ
ಕುಣಿಗಲ್ ನಿಂದ ತುಮಕೂರಿಗೆ ಹೋಗುವ ಮಾರ್ಗ ಮಧ್ಯ ಚಿಕ್ಕ ಮಳಲವಾಡಿ ಎಂಬ ಗ್ರಾಮದಲ್ಲಿ ಇರುವ ರೇಷ್ಮೆ ಇಲಾಖೆ ಕಟ್ಟಡದ ಹಿಂಭಾಗದಲ್ಲಿ ಈ ದೇವಾಲಯ ಇದೆ,
ದೇವಾಲಯದ ಸುತ್ತ ಹತ್ತು ಹದಿನೈದು ಹುತ್ತಗಳಿದ್ದು ಈ ದೇವರು ಕೂಡ ಒಂದು ಹುತ್ತದಲ್ಲಿ ನೆಲೆಸಿದ್ದಾರೆ ಎಂಬುದು ವಿಶೇಷ ರಾಜ್ಯ ಸೇರಿದಂತೆ ಹೊರಭಾಗದಿಂದ ಆಯ್ದ ಭಕ್ತರು ಈ ದೇವಿಗೆ ನಡೆದುಕೊಳ್ಳುತ್ತಿದ್ದಾರೆ,
ಬೇಡಿ ಬರುವ ಭಕ್ತರಿಗೆ ಆಶೀರ್ವಾದ ಮಾಡುವ ಈ ಕುಣಿಗಲ್ ಅಮ್ಮ ನೇಮ ನಿಯಮಗಳು ಬಹಳ ಕಟ್ಟುನಿಟ್ಟಾಗಿವೆ,
ನೀವು ಕೂಡ ಈ ಭಾಗಕ್ಕೆ ಹೋದಾಗ ತಪ್ಪದೆ ಕುಣಿಗಲ್ ಅಮ್ಮ ದೇವಾಲಯಕ್ಕೆ ಭೇಟಿ ನೀಡಿ