ಕುಣಿಗಲ್ –
ರಾಜ್ಯದ ಎಲ್ಲಾ ಮಕ್ಕಳನ್ನು ಒಟ್ಟಾಗಿ ಸೇರಿಸಿ ರಾಜ್ಯಮಟ್ಟದ ಕಲರವ ಆಚರಿಸುವ ಕಾರ್ಯಕ್ರಮ ಆಗಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಚೇತನ್ ತಿಳಿಸಿದ್ದಾರ,
ತಾಲೂಕಿನ ದಯ ಭವನ ಶಿಕ್ಷಣ ಸಮೂಹ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಸರ್ಕಾರ ಮಕ್ಕಳಿಗಾಗಿ ಹಲವಾರು ರೀತಿಯ ಸೌಲಭ್ಯಗಳು ಅನುದಾನವನ್ನು ನೀಡುತ್ತಿದೆ ಸರಿಯಾದ ರೀತಿ ಬಳಸಿಕೊಂಡು ಸಮಾಜದ ಮುಖ್ಯ ವಾಣಿಗೆ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕೆಂದರು,
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀ ದಿನೇಶ್ ಮಾತನಾಡಿ ಮಕ್ಕಳಲ್ಲಿರುವ ಹಲವಾರು ಪ್ರತಿಭಗಳನ್ನು ಹೊರ ತರುವ ಕೆಲಸ ಇಂತಹ ಕಾರ್ಯಕ್ರಮಗಳಲ್ಲೇ ನಡೆಯುತ್ತವೆ ಅದಕ್ಕಾಗಿ ಅವರಿಗಾಗಿ ಮಹರಂಜನೆ ಕಾರ್ಯಕ್ರಮ ರೂಪಿಸಿ ಎಂದರು,
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಧರ್ಮಗುರು ಅಬ್ರಹಾಮ್ ರಂಭಾನ್ ಮಕ್ಕಳು ದೇವರಂತೆ ಅವರಿಂದ ಉತ್ತಮವಾದ ಪ್ರತಿಫಲ ನಾವು ನಿರೀಕ್ಷೆ ಮಾಡದೆ ಉತ್ತಮ ಸೇವೆ ಸಲ್ಲಿಸಬೇಕೆಂದರು,
ಶಿಶು ಅಭಿವೃದ್ಧಿಗಳಾದ ನಾಗರಾಜು, ವೆಂಕಟರಮಣಪ್ಪ Shak ದಯಬಾರ ಸಂಸ್ಥೆಯ ವೈದ್ಯರಾದ ಡಾ.ಲಿಶಿ, ಸಂಸ್ಥೆಯ ಖಜಾಂಚಿಯಾದ ಸತ್ಯಂ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು