Saturday, July 5, 2025

ಕುಣಿಗಲ್ ತಟ್ಟೆ ಇಡ್ಲಿ ಮೂಲ ಹೋಟೆಲ್ ಭೇಟಿ ನೀಡಿದ ಸಿಹಿ ಕಹಿ ಚಂದ್ರು

ಕುಣಿಗಲ್ ;- ಪಟ್ಟಣದ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಭೂತಯ್ಯನ ಹೋಟೆಲ್ ಗೆ ಚಿತ್ರನಟ ಸಿಹಿ ಕಹಿ ಚಂದ್ರು ಭೇಟಿ ನೀಡಿ ಅಲ್ಲಿನ ತಿಂಡಿಗಳನ್ನು ತಿಂದು ಮೆಚ್ಚುಗೆ ವ್ಯಕ್ತಪಡಿಸಿ ಪ್ರಮಾಣ ಪತ್ರ ನೀಡಿದ್ದಾರೆ

ಬೆಳಿಗ್ಗೆ 9:30ಕ್ಕೆ ಭೇಟಿ ನೀಡಿದ ಸಿಹಿಕಹಿ ಚಂದ್ರು ಅವರ ತಂಡ ಹೋಟೆಲ್ ನ ಸ್ವಚ್ಛತೆ ಮತ್ತು ಅಲ್ಲಿನ ತಿಂಡಿಗಳ ರುಚಿ ಸ್ವಾದಿಷ್ಟ ಸೇರಿದಂತೆ ಹಲವಾರು ವಿಧಗಳಿಂದ ತಿಂಡಿಯ ವಿಧಾನಗಳನ್ನು ವೀಕ್ಷಿಸಿದರು

ನಂತರ ಕೂಡ ಅವರು ಕುಣಿಗಲ್ ತಟ್ಟೆ ಇಡ್ಲಿ, ಪೂರಿ, ಪಲಾವು ಹಾಗೂ ಕಾಫಿಯನ್ನು ಸವಿದು ಮೆಚ್ಚುಗೆಯ ಮಾತುಗಳನಾಡಿದರು ಹಲವಾರು ದಶಕಗಳ ಹಿಂದೆ ಮಹಾದೇವಪ್ಪ ಪ್ರಾರಂಭ ಮಾಡಿದ ಪೆಟ್ಟಿ ಅಂಗಡಿಯ ಹೋಟೆಲ್ಗೆ ಸಾರ್ವಜನಿಕರು ಭೂತಯ್ಯನ ಅಂಗಡಿಯೆಂದು ಕರೆಯುವ ಮುಖಾಂತರ ಜಾನಪದವಾಗಿ ಬೂತಯ್ಯನ ಹೋಟೆಲ್ ಅಥವಾ ಭೂತಯ್ಯನ ಟೀ ಸ್ಟಾಲ್ ಆಗಿ ಹೋಗಿದ್ದೆ

ಹಾಲಿ ಬೂತಯ್ಯನ ಮಗ ಶಿವಕುಮಾರ್ ಹೋಟೆಲ್ ನಡೆಸುತ್ತಿದ್ದು ಇಲ್ಲಿಗೆ ಕೇಂದ್ರ ಸಚಿವ ವಿ ಸೋಮಣ್ಣ ಸೇರಿದಂತೆ ಹಲವಾರು ರಾಜಕೀಯ ಪ್ರಮುಖರು ಸಿನಿಮಾ ನಟ ನಟಿಯರು ಹಲವಾರು ಬಾರಿ ಭೇಟಿ ನೀಡಿ ಈ ಈ ಹೋಟೆಲ್ನಲ್ಲಿ ತಿಂಡಿ ತಿಂದಿದ್ದಾರೆ ಎಂಬ ಮಾಹಿತಿಯನ್ನು ಕೂಡ ಅವರು ಪಡೆದರು,


ಚಿತ್ರನಟ ಸಿಹಿಕಹಿ ಚಂದ್ರು ಆಗಮನದಿಂದ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು ನಂತರ ಸಾರ್ವಜನಿಕರೊಂದಿಗೆ ಮಾತನಾಡಿ ತಿಂಡಿ ರುಚಿ ವಿಚಾರಗಳನ್ನು ಪಡೆದರು ನಂತರ ಹೋಟೆಲ್ ಮಾಲೀಕರ ಶಿವಕುಮಾರ್ ಅವರಿಗೆ ಪ್ರಮಾಣ ಪತ್ರ ನೀಡುವ ಮೂಲಕ ಶುಭ ಹಾರೈಸಿದರು

About The Author

Related Articles

Stay Connected

0FansLike
0FollowersFollow
22,400SubscribersSubscribe
- Advertisement -spot_img

Latest Articles