ತಾಲೂಕಿನ ಕೊತ್ತಗೆರೆ ಮೂಲದ ಚಲುವ(36) ಕೊಲೆಯಾದ ವ್ಯಕ್ತಿ
ಕಳೆದ 3 ವರ್ಷದಿಂದ ತಮ್ಮ ಸೋದರ ಸಂಬಂಧಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಹುಡುಗಿಗೆ 18 ತುಂಬಿದ ನಂತರ ಓಡಿಹೋಗುವ ಸೂಚನೆಯಿಂದ ಪೋಷಕರು ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು ,
ಈ ಸಂಬಂಧ ಪೇಸ್ ಬುಕ್ ಲೈವ್ ಮಾಡಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆತನನ್ನು ಮಾಗಡಿ ಬಳಿ ಕೊಲೆ ಮಾಡಿ ಬಿಸಾಡಿರುವ ಘಟನೆ ನಡೆದಿದೆ .ಮೃತ ಚಲುವನ ವಯಸ್ಸು36 ಅಪ್ರಾಪ್ತೆ ಬಾಲಕಿ ವಯಸ್ಸು ಕಡಿಮೆ ಇದ್ದ ಕಾರಣ ಹಾಗೂ ಆತನ ಮಧ್ಯವ್ಯಸನ ದುಶ್ಚಟಗಳಿಂದ ಬೇಸತ್ತ ಸಂಬಂಧಿಕರು ಚಲುವನ ಪ್ರೀತಿಗೆ ಅಡ್ಡ ಬಂದು ಆತನಿಗೆ ಬುದ್ದಿ ಹೇಳಿ ದೂರ ಇಟ್ಟಿದ್ದರು ,
ಬಾಲಕಿಗೆ 18 ತುಂಬಿದ ನಂತರ ಓಡಿಹೋಗುವ ಮುನ್ಸೋಚನೆಯಿಂದ ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು , ಪ್ರೇಯಸಿ ಕಾಣೆಯಾಧ ಸಂಬಂದ ಕೋಪಗೊಂಡ ಚಲುವ ತನ್ನ ಫೆಸ್ ಬುಕ್ ಲೈವ್ ನಲ್ಲಿನನ್ನ ಹುಡುಗಿಗೆ ಹೊಡೆದಿದ್ದೀರಾ ಆಕೆಗೆ ಹಿಂಸೆ ಕೊಟ್ಟಿದ್ದೀರಾ ಜೈಲಿನಲ್ಲಿ ನೀಡುವ ರೀತಿ ಹಿಂಸೆ ಕೊಟ್ಟಿದ್ದಿರಾ ನನ್ನ ಹುಡುಗಿಯನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ, ಅವಳಿಗೆ ಪೋನ್ ನೀಡಿ ಎಂದು ಬೆದರಿಕೆ ಹಾಕಿ ಮಾಗಡಿ ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಇದ್ದರೂ ಬಿಡುವುದಿಲ್ಲ ಅವಳಿಗಾಗಿ ನೀವು ಎಷ್ಟು ಖರ್ಚು ಮಾಡಿದರು ಪ್ರಯೋಜನವಿಲ್ಲ ಎಂದು ಲೈವ್ ಮಾಡಿ ಬೆದರಿಕೆ ಹಾಕಿದ್ದಾನೆ

ಇದರಿಂದ ಆಕ್ರೋಶಗೊಂಡಕಾಕೆಯ ಕೆಲವು ಸಂಬಂಧಿಕರು ಮಾಗಡಿ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದು ಸ್ಥಳಲ್ಲೆ ಕುಣಿಗಲ್ ಸಿಪಿಐ ಮಾಧ್ಯನಾಯಕ್ ತಮ್ಮ ಸಿಬ್ಬಂದಿ ಜೊತೆ ಹೋಗಿ ಶವವನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

