Tuesday, February 24, 2026

ಮಂಗಳ ಡ್ಯಾಮ್ ಅಭಿವೃದ್ಧಿ ನಮ್ಮ ಜವಾಬ್ದಾರಿ ಶಾಸಕ ರಂಗನಾಥ್

ಕುಣಿಗಲ್ :-ತಾಲೂಕಿನ ಮಂಗಳ ಜಲಾಶಯದಲ್ಲಿ ಉಂಟಾಗಿದ್ದ ನೀರಿನ ಸೋರಿಕೆ ಅರಿವು ನಿಂತ ಬಳಿಕ ಶಾಸಕ ಡಾಕ್ಟರ್ ರಂಗನಾಥ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಪೂರ್ಣ ಅಭಿವೃದ್ಧಿ ಜವಾಬ್ದಾರಿಯನ್ನು ಮಾಡುತ್ತೇವೆ ಎಂದರು

ಕಳೆದ ಒಂದು ದಿನಗಳಿಂದ ನಿರಂತರವಾಗಿ ಜಲಾಶಯದಿಂದ ಹೊರ ಹೋಗುತ್ತಿದ್ದ ನೀರನ್ನು ಅಧಿಕಾರಿಗಳು ಸಂಪೂರ್ಣ ನಿಲ್ಲಿಸುವಲ್ಲಿ ಯಶಸ್ವಿ ಆಗಿದ್ದಾರೆ

ಮುಂದಿನ ದಿನಗಳಲ್ಲಿ ತಾಂತ್ರಿಕ ಅಧಿಕಾರಿಗಳ ಸಲಹೆ ಮೇರೆಗೆ ನೀರಿನ ಅರಿವು ಹಾಗೂ ತೂಬಿನ ದುರಸ್ತಿ ಮತ್ತು ಉಂಟಾಗಿರುವ ರಂದ್ರವನ್ನು ಮುಚ್ಚುವ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಡ್ಯಾಮ್ ಏರಿಯ ಅಗಲೀಕರಣ ಕ್ರಶ್ ಗೇಟ್ ಗಳ ದುರಸ್ತಿ ವಿದ್ಯುತೀಕರಣ ಹಾಗೂ ಸೇತುವೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಶಾಶ್ವತ ಕಾಮಗಾರಿಗಳನ್ನು ಮಾಡುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಅವರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ ತುರ್ತು ಹಿನ್ನೆಲೆಯಲ್ಲಿ ಕೆರೆಏರಿ ನಿರ್ವಹಣೆ ಮಾಡಲು ಸಂಪೂರ್ಣ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸುತ್ತಿದ್ದೇವೆ ಎಂದರುಈ ಸಂದರ್ಭದಲ್ಲಿ ಹೇಮಾವತಿ ಇಲಾಖೆಯ ಚೀಫ್ ಇಂಜಿನಿಯರ್ ಫಣಿರಾಜು ಸೂಪರ್ ಡೆಂಟ್

ಕೆ ಎಮ್ ಬಿಂದಿ, ಎ ಇ ಇ ರುದ್ರೇಶ್ ಇಂಜಿನಿಯರ್ ವೀಣಾ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles