ಒಂದು ಆಲದ ಮರದ ಕೆಳಗಡೆ ಇದ್ದ ಮೂರು ಕಲ್ಲುಗಳು ಪೂಜಿಸಿದ ಭಕ್ತರಿಗೆ ಸಕಲವನ್ನು ನೀಡುವ ಭಗವಂತನ ರೂಪದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಕ್ತರು ಈ ದಿನ ಈ ರೀತಿ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಎಂದು ಬೆಟ್ಟಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ

ಕೊತ್ಕೆರೆ ಹೋಬಳಿಯ ಕೆ ಹೊಸಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಿರುವ ವಿಶೇಷವಾದ ರಥ ಲೋಕಾರ್ಪಣೆ ಮಾಡಿ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಸಮಾಜದಲ್ಲಿ ಪ್ರತಿದಿನ ನಾನು ನನ್ನದು ಎಂಬ ಸ್ವಾರ್ಥ ವಿಚಾರಗಳಿಗೆ ಬದುಕುವ ಈ ಸಂದರ್ಭದಲ್ಲಿ ಹಲವಾರು ಭಕ್ತರು ದೈವ ಧರ್ಮ ಹೀಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಭರತ ಭೂಮಿಯ ಶಕ್ತಿ ಇನ್ನೂ ಜೀವಂತವಾಗಿದೆ ಎಂದರು,
ಹರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಒಂದು ಕಲ್ಲನ್ನು ಪೂಜಿಸಿದ ಫಲವಾಗಿ ಹಲವರು ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಅವರ ಬೇಡಿಕೆಗಳನ್ನ ಈಡೇರಿಸಿಕೊಂಡಿದ್ದಾರೆ ಇಂತಹ ಘಟನೆಗಳು ಒಂದು ಕಲ್ಲಿನಿಂದ ನಡೆದಿದ್ದ ಕಾರಣಕ್ಕೆ ಇದು ಇಂದು ಪುಣ್ಯಕ್ಷೇತ್ರವಾಗಿ ಬದಲಾಗಿದೆ ಎಂದರು,
ಬಿಜೆಪಿ ಮುಖಂಡ ರಾಜೇಶ್ ಗೌಡ ಮಾತನಾಡಿ ಇಂತಹ ಧರ್ಮಕಾರ್ಯ ಮಾಡುತ್ತಿರುವ ಕುಟುಂಬಗಳಿಗೆ ಭಗವಂತ ಸಕಲ ಒಳಿತುಗಳನ್ನು ಕಾಪಾಡಲಿ ಎಂದು ಆಶಿಸುತ್ತಾ ಇಂತಹ ಉತ್ತಮರಿಂದ ಸಮಾಜಕ್ಕೆ ಒಳಿತಾಗುತ್ತಿದೆ ಎಂದರು,
ಜೆಡಿಎಸ್ ಮುಖಂಡ ಡಾ. ರವಿ ಬಾಬು ಮಾತನಾಡಿ ಇಂತಹ ದೇವರ ಕಾರ್ಯಕ್ರಮಗಳಿಗೆ ಸಾವಿರಾರು ಜನ ಬಂದು ಭಾಗವಹಿಸಿ ತಮ್ಮ ಭಕ್ತಿಯ ಸಮರ್ಪಣೆ ಮಾಡಿದ್ದಾರೆ ಪ್ರತಿ ಗ್ರಾಮದಲ್ಲಿ ಈ ರೀತಿಯ ಆಚರಣೆಗಳಿಂದ ಸಹ ಬಾಳ್ವೆ ಹಾಗೂ ಪ್ರತಿಯೊಬ್ಬರ ಕಷ್ಟ ಸುಖಗಳು ಮುಕ್ತಿ ಕಾಣಲಿವೆ ಎಂದರು.
ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿದ್ದ ಬೃಹ ಕಾಕರದ ರಥದಲ್ಲಿ ಹತ್ತಿಯ ಹಲಗೆಯ ಮೇಲೆ ಕೂರಿಸಿದ್ದ ಪಟ್ಟಲದಮ್ಮ ದೇವಿಯ ರಥವನ್ನು ಹಲವರು ಜಯ ಘೋಷಗಳೊಂದಿಗೆ ಭಕ್ತಿಯ ಬರಕಾಷ್ಟತೆಗೆ ತಲುಪಿದ್ದರು.
ಸಾಂಪ್ರತಾ ವೈಕವಾಗಿ ಹಲವರು ಮಹಿಳೆಯರು ವಿಶೇಷ ಆರತಿಗಳನ್ನ ನೆರವೇರಿಸಲಾಯಿತು ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕುಡಿಯುವ ನೀರು ಸೇರಿದಂತೆ ಸಕಲವನ್ನು ದೇವಾಲಯದ ವತಿಯಿಂದ ಮಾಡಲಾಗಿತ್ತು ಈ ಸಂದರ್ಭದಲ್ಲಿ
ತುರುವೇಕೆರೆ ಮಾಜಿ ಶಾಸಕರಾದ ಮಸಾಲೆ ಜಯರಾಮ ಧ್ವಜಾರೋಹಣ ನಡೆಸಿದರು. ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವದೂತ ಸ್ವಾಮೀಜಿ,
ಓಂಕಾರ ಆಶ್ರಮದ ಶ್ರೀ ಮಧುಸೂದನಂದ ಪುರಿ ಸ್ವಾಮೀಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ ಏನ್ ಜಗದೀಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಂಗಣ್ಣ ಗೌಡ, ಹಾಗೂ ಮಹಾದಾನಿಗಳಾದ ಬಿ ದೇವರಾಜು, ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು ಭಕ್ತಾದಿಗಳು ಇದ್ದರು

