Tuesday, February 24, 2026
Home Blog

ವಿಚ್ಛೇದನ ಪಡೆಯದೆ ಎರಡನೇ ಮದುವೆಗೆ ಯತ್ನಿಸಿದ ವರನಿಗೆ ಶಾಕ್ ನೀಡಿದ ಪತ್ನಿ

0

ತಾಲೂಕಿನ ಎಡೆಯೂರು ಶ್ರೀಕ್ಷೇತ್ರದ ಆವರಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯನ್ನು ವರನ ಮೊದಲ ಪತ್ನಿ ಸೇರಿದಂತೆ ಪೊಲೀಸರು ತಡೆದು ಆರೋಪಿ ವರನನ್ನು ಅಮೃತೂರು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ .

ಬೆಂಗಳೂರಿನ ಆರ್ ಆರ್ ನಗರ ಮೂಲದ ಹರಿಪ್ರಸಾದ್ ತನ್ನ ಮೊದಲ ಹೆಂಡತಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪುಣ್ಯ ಎಂಬಾಕೆಯನ್ನು ಎರಡನೇ ಮದುವೆ ಮಾಡಿಕೊಳ್ಳುವಾಗ ಎಡೆಯೂರಿನ ಕಲ್ಯಾಣ ಮಂಟಪದಲ್ಲಿ ಪೊಲೀಸರ ಜೊತೆ ಮದುವೆ ಮಂಟಪಕ್ಕೆ ಎಂಟ್ರಿಕೊಟ್ಟ ಲೇಪಾಕ್ಷಿ ಸಿನಿಮಾ ಮಾದರಿಯಲ್ಲಿ ಮದುವೆ ತಡೆದಿದ್ದಾರೆ.ಮದುಮಗ ಹರಿಪ್ರಸಾದ್ ತನ್ನ ಬಾಲ್ಯ ಸ್ನೇಹಿತೆ ಲೇಪಾಕ್ಷಿಯನ್ನು ಮದುವೆಯಾಗಿದ್ದ ಸಂದರ್ಭದಲ್ಲಿ ಆಕೆ ಅಪ್ರಾಪ್ತೆ ಎಂದು ತಿಳಿದ ನಂತರ ಮದುವೆಯನ್ನು ಗುಟ್ಟಾಗಿ ಇಟ್ಟು ನಂತರ ಪುನಹ ಆಕೆಗೆ 18 ವರ್ಷ ತುಂಬಿದ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಿ 10 ವರ್ಷ ಸಂಸಾರ ನಡೆಸಲಾಗಿತ್ತು .

ದಿನ ಕಳೆದಂತೆ ಲೇಪಾಕ್ಷಿಗೆ ತನ್ನ ಅತ್ತೆ ನಾದಿನಿ ಸೇರಿದಂತೆ ಗಂಡ ಹೆಚ್ಚು ತೊಂದರೆ ನೀಡುತ್ತಿದ್ದರು ಹಾಗೂ ಆಕೆಯ ಸಂಬಳವನ್ನು ಕಸಿದುಕೊಂಡು ಮಾನಸಿಕ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆಕೆ ದೂರಿದ್ದು ಆತನ ಕೆಲ ಅಕ್ರಮ ಸಂಬಂಧಗಳ ವಿಚಾರವಾಗಿ ಕೌಟುಂಬಿಕ ಕಲಹ ನಡೆಯುತ್ತಿತ್ತು ಎಂದು ಲೇಪಾಕ್ಷಿ ತಿಳಿಸಿದ್ದಾರೆ .ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮನನೊಂದ ಲೇಪಾಕ್ಷಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು

ಈ ಸಂಬಂಧ ಮಧ್ಯಸ್ಥಿಕೆ ನ್ಯಾಯದಲ್ಲಿ ಪುನಹ ಲೇಪಾಕ್ಷಿ ಜೊತೆಗೆ ಬಂದು ಬಾಳುವುದಾಗಿ ವಾಟ್ಸಾಪ್ತಿ ಮುಖಾಂತರ ತಿಳಿಸಿದ ಹರಿಪ್ರಸಾದ್ ಇತ್ತ ಮತ್ತೊಂದು ಮದುವೆಯಾಗಲು ಮೊದಲ ಪತ್ನಿಗೆ ತಿಳಿಯದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಪುಣ್ಯಶ್ರೀ ಎಂಬುವರ ಜೊತೆ ಮದುವೆ ನಿಗದಿ ಮಾಡಿಕೊಂಡು ಯಡಿಯೂರಿನ ಕಲ್ಯಾಣಮಂಟಪದಲ್ಲಿ ಈ ದಿನ ಹಸೆಮಣೆ ಏರಿದ್ದ ವಿಚಾರ ತಿಳಿಯುತ್ತಿದ್ದಂತ ಮೊದಲ ಪತ್ನಿ ವಕೀಲರು ಹಾಗೂ ಪೊಲೀಸರ ಜೊತೆಗೂಡಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಂಡನ ಮದುವೆಯನ್ನು ತಡೆದಿದ್ದಾರೆ .

ಎರಡು ಹೆಣ್ಣುಗಳಿಗೆ ಅನ್ಯಾಯಮೊದಲ ಪತ್ನಿ ಲೇಪಾಕ್ಷಿಗೆ ತಿಳಿಯದಂತೆ ಮತ್ತೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸಿದ ಹರಿಪ್ರಸಾದ್ ತನ್ನ ಜಾತಿಯನ್ನು ಮುಚ್ಚಿಟ್ಟು ತಾನು ಕೂಡ ಒಕ್ಕಲಿಗ ಎಂದು ಸುಳ್ಳು ಹೇಳಿ ಆಕೆಯ ತಾಯಿ ಮತ್ತು ಯುವತಿಗೆ ಮನವೊಲಿಸಿ ಮೋಸ ಮಾಡಿದ್ದಾನೆ ಎಂದು ಆಕೆ ಸಂಬಂಧಿಗಳು ದೂರಿದ್ದಾರೆ.

ದಾಖಲಾಗದ ಎರಡು ಪ್ರಕರಣಹರಿಪ್ರಸಾದ್ ವಿಚ್ಛೇದನೆ ಪಡೆಯದೆ ಮತ್ತೊಂದು ಮದುವೆಗೆ ಸಿದ್ಧತೆ ಬಗ್ಗೆ ಅಮೃತೂರ್ ಪೊಲೀಸ್ ಠಾಣೆಗೆ ಮೊದಲ ಪತ್ನಿ ದೂರು ನೀಡಿದ್ದು ಅದೇ ರೀತಿ ಹಣಕಾಸು ಒಡವೆ ಹಾಗೂ ಸುಳ್ಳು ಹೇಳಿ ಮದುವೆಗೆ ಒಪ್ಪಿಸಿದ್ದಾನೆ ಎಂದು ಪುಣ್ಯಶ್ರೀ ದೂರು ನೀಡಿದ್ದು ಎರಡು ಪ್ರಕರಣಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸುತ್ತೇವೆ ಎಂದು ಪೊಲೀಸರು ಕೈಚಲಿದ್ದಾರೆ.

ಕೆ ಹೊಸಹಳ್ಳಿಯಲ್ಲಿ ಪಟ್ಟಲದಮ್ಮನ ಅದ್ದೂರಿ ಜಾತ್ರೆ

0

ಒಂದು ಆಲದ ಮರದ ಕೆಳಗಡೆ ಇದ್ದ ಮೂರು ಕಲ್ಲುಗಳು ಪೂಜಿಸಿದ ಭಕ್ತರಿಗೆ ಸಕಲವನ್ನು ನೀಡುವ ಭಗವಂತನ ರೂಪದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಕ್ತರು ಈ ದಿನ ಈ ರೀತಿ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಎಂದು ಬೆಟ್ಟಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ

ಕೊತ್ಕೆರೆ ಹೋಬಳಿಯ ಕೆ ಹೊಸಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಿರುವ ವಿಶೇಷವಾದ ರಥ ಲೋಕಾರ್ಪಣೆ ಮಾಡಿ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಸಮಾಜದಲ್ಲಿ ಪ್ರತಿದಿನ ನಾನು ನನ್ನದು ಎಂಬ ಸ್ವಾರ್ಥ ವಿಚಾರಗಳಿಗೆ ಬದುಕುವ ಈ ಸಂದರ್ಭದಲ್ಲಿ ಹಲವಾರು ಭಕ್ತರು ದೈವ ಧರ್ಮ ಹೀಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಭರತ ಭೂಮಿಯ ಶಕ್ತಿ ಇನ್ನೂ ಜೀವಂತವಾಗಿದೆ ಎಂದರು,

ಹರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಒಂದು ಕಲ್ಲನ್ನು ಪೂಜಿಸಿದ ಫಲವಾಗಿ ಹಲವರು ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಅವರ ಬೇಡಿಕೆಗಳನ್ನ ಈಡೇರಿಸಿಕೊಂಡಿದ್ದಾರೆ ಇಂತಹ ಘಟನೆಗಳು ಒಂದು ಕಲ್ಲಿನಿಂದ ನಡೆದಿದ್ದ ಕಾರಣಕ್ಕೆ ಇದು ಇಂದು ಪುಣ್ಯಕ್ಷೇತ್ರವಾಗಿ ಬದಲಾಗಿದೆ ಎಂದರು,

ಬಿಜೆಪಿ ಮುಖಂಡ ರಾಜೇಶ್ ಗೌಡ ಮಾತನಾಡಿ ಇಂತಹ ಧರ್ಮಕಾರ್ಯ ಮಾಡುತ್ತಿರುವ ಕುಟುಂಬಗಳಿಗೆ ಭಗವಂತ ಸಕಲ ಒಳಿತುಗಳನ್ನು ಕಾಪಾಡಲಿ ಎಂದು ಆಶಿಸುತ್ತಾ ಇಂತಹ ಉತ್ತಮರಿಂದ ಸಮಾಜಕ್ಕೆ ಒಳಿತಾಗುತ್ತಿದೆ ಎಂದರು,

ಜೆಡಿಎಸ್ ಮುಖಂಡ ಡಾ. ರವಿ ಬಾಬು ಮಾತನಾಡಿ ಇಂತಹ ದೇವರ ಕಾರ್ಯಕ್ರಮಗಳಿಗೆ ಸಾವಿರಾರು ಜನ ಬಂದು ಭಾಗವಹಿಸಿ ತಮ್ಮ ಭಕ್ತಿಯ ಸಮರ್ಪಣೆ ಮಾಡಿದ್ದಾರೆ ಪ್ರತಿ ಗ್ರಾಮದಲ್ಲಿ ಈ ರೀತಿಯ ಆಚರಣೆಗಳಿಂದ ಸಹ ಬಾಳ್ವೆ ಹಾಗೂ ಪ್ರತಿಯೊಬ್ಬರ ಕಷ್ಟ ಸುಖಗಳು ಮುಕ್ತಿ ಕಾಣಲಿವೆ ಎಂದರು.

ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿದ್ದ ಬೃಹ ಕಾಕರದ ರಥದಲ್ಲಿ ಹತ್ತಿಯ ಹಲಗೆಯ ಮೇಲೆ ಕೂರಿಸಿದ್ದ ಪಟ್ಟಲದಮ್ಮ ದೇವಿಯ ರಥವನ್ನು ಹಲವರು ಜಯ ಘೋಷಗಳೊಂದಿಗೆ ಭಕ್ತಿಯ ಬರಕಾಷ್ಟತೆಗೆ ತಲುಪಿದ್ದರು.

ಸಾಂಪ್ರತಾ ವೈಕವಾಗಿ ಹಲವರು ಮಹಿಳೆಯರು ವಿಶೇಷ ಆರತಿಗಳನ್ನ ನೆರವೇರಿಸಲಾಯಿತು ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕುಡಿಯುವ ನೀರು ಸೇರಿದಂತೆ ಸಕಲವನ್ನು ದೇವಾಲಯದ ವತಿಯಿಂದ ಮಾಡಲಾಗಿತ್ತು ಈ ಸಂದರ್ಭದಲ್ಲಿ
ತುರುವೇಕೆರೆ ಮಾಜಿ ಶಾಸಕರಾದ ಮಸಾಲೆ ಜಯರಾಮ ಧ್ವಜಾರೋಹಣ ನಡೆಸಿದರು. ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವದೂತ ಸ್ವಾಮೀಜಿ,
ಓಂಕಾರ ಆಶ್ರಮದ ಶ್ರೀ ಮಧುಸೂದನಂದ ಪುರಿ ಸ್ವಾಮೀಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ ಏನ್ ಜಗದೀಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಂಗಣ್ಣ ಗೌಡ, ಹಾಗೂ ಮಹಾದಾನಿಗಳಾದ ಬಿ ದೇವರಾಜು, ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು ಭಕ್ತಾದಿಗಳು ಇದ್ದರು

ದೇವರ ಮುಂದೆ ಎಣ್ಣೆ ಕುಡಿದರೆ ದೂರ ಆಗುತ್ತೆ ಕಷ್ಟ ತುಮಕೂರು ಜಿಲ್ಲೆಯ ಎಣ್ಣೆ ಜಾತ್ರೆ

0

ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹೇಮಗಿರಿತಪ್ಪಲಿನಲ್ಲಿ ಇರುವ ಓಡೇಬೈರುವ ಸನ್ನಿಧಿಯಲ್ಲಿ ಸಾಂಪ್ರದಾಯಕವಾಗಿ ಬಾಯಿ ಕವಳ ಅಥವಾ ಭಂಗಿ ಸೇವೆ ನಡೆಯಿತು ಮಂಡ್ಯ ತುಮಕೂರು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ಕುಳಿತು ಮಧ್ಯ ಸೇವನೆ ಮಾಡಿ ತಮ್ಮ ಇಷ್ಟಾರ್ಥವನ್ನು ಈಡೇರಿಸು ಭಗವಂತ ಎಂದು ಬೇಡಿಕೊಂಡರು, ವಡೆಭೈರವನ ಸನ್ನಿಧಿಯಲ್ಲಿ ಮಧ್ಯ ಸೇವನೆ ಮಾಡುವುದು

ವಿಶೇಷ ಕಾರ್ಯಕ್ರಮವಾಗಿದೆ ಈ ನೆಲೆಯಲ್ಲಿ ಬೆಳಿಗ್ಗೆ ದೇವಾಲಯಕ್ಕೆ ವಿಶೇಷವಾದ ಪೂಜೆ ಹಾಗೂ ದೇವರ ವಿಗ್ರಹಕ್ಕೆ ವಿಶೇಷವಾದ ಅಭಿಷೇಕ ಅಲಂಕಾರ ನಡೆದವು, ನಂತರ ದೇವಾಲಯದ ಕೆಳಭಾಗದಲ್ಲಿ ಇಡಲಾಗಿದ್ದ ಬೃಹತ್ ಡ್ರಂಗಳಲ್ಲಿ ಭಕ್ತರು ತಂದಿದ್ದ ವಿಸ್ಕಿ ಬ್ರಾಂದಿ ಜಿನ್ ಸೇರಿದಂತೆ ಹಲವಾರು ವಿವಿಧ ಸಾವಿರಾರು ಮಧ್ಯದ ಬಾಟಲುಗಳನ್ನು ಸುರಿದು ಎಲ್ಲವನ್ನೂ ಕೂಡ ಮಿಶ್ರಗೊಳಿಸಿ ಭಕ್ತರಿಗೆ ಸರತಿ ಸಾಲಿನಲ್ಲಿ ಕೂರಿಸಿ ಬಿರಿಯಾನಿ ಚಿಕನ್ನು ಮಟನ್ ಜೊತೆ ಕಡ್ಲೆಪುರಿ ಹಾಗೂ ಎಣ್ಣೆಯನ್ನು ನೀಡಲಾಯಿತು,

ಅಣ್ಣ ತಮ್ಮ ಅಕ್ಕ ತಂಗಿ ಅಪ್ಪ ಮಗ ಪುರುಷ ಮಹಿಳೆ ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಕೂಡ ಒಟ್ಟಾಗಿ ಸರತಿ ಸಾಲಿನಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಒಡೆಭೈರವನಾ ಕೃಪೆಗೆ ಪಾತ್ರರಾದರು, ಸ್ಥಳೀಯರು ಹೇಳುವಂತೆ ಹಲವಾರು ದಶಕಗಳ ಹಿಂದೆ ಈ ರೀತಿ ಕಾರ್ಯಕ್ರಮವನ್ನು ಆರಂಭಿಸಿದ್ದು ಈಗಲೂ ಕೂಡ ನಡೆಯುತ್ತಾ ಬಂದಿದೆ ಇದಕ್ಕೆ ಬಾಯಿ ಕವಳ ಅಥವಾ ಭಂಗಿ ಸೇವೆ ಎಂದು ಕರೆಯುತ್ತಾರೆ,+

ಹೇಮಗಿರಿ ಬೆಟ್ಟದ ತಪ್ಪಲಿನ ಸುತ್ತಲೂ 7 ಕಿ.ಮೀ ಸಿದ್ದರ ವಾಸ ಸ್ಥಳವಾಗಿದೆ ಇಲ್ಲಿನ ಹಲವಾರು ಗುಡ್ಡ ಪ್ರದೇಶಗಳಲ್ಲಿ ಸಿದ್ದರು ಇಂದಿಗೂ ಕೂಡ ಜೀವಂತವಾಗಿ ವಾಸಿಸುತ್ತಿದ್ದಾರೆ ಎಂಬ ನಂಬಿಕೆಗಳಿವೆ, ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಸತ್ತ ದೇಹಗಳನ್ನು ಸುಟ್ಟರೆ ತಲೆ ಸಿಡಿಯುವುದಿಲ್ಲ ಎಂದು ಇಲ್ಲಿನ ವಾಸಿಗಳು ಹೇಳುತ್ತಾರೆ, ಈ ಭಾಗದ ಹಲವಾರು ಬೆಟ್ಟ ಗುಡ್ಡಗಳಲ್ಲಿ ಸಿದ್ದರು ವಾಸಿಸುತ್ತಿದ್ದು ಸಂಕ್ರಾಂತಿ ನಂತರ ಹೇಮಗಿರಿ ಜಾತ್ರೆ ಮುಗಿದ ಬಳಿಕ ಒಡೆಬೈರುವನಿಗೆ ನಡೆಯುವ ಭಂಗಿ ಸೇವೆಯ ನಂತರ ರಾತ್ರಿ ಎಲ್ಲರೂ ಕೂಡ ಒಟ್ಟಾಗಿ ಸೇರಿತ್ತಿದ್ದರು ಇಲ್ಲಿ ತಮ್ಮದೇ ಆದ ಔತಣ ಮಾಡುತ್ತಾರೆ ಅದಕ್ಕಾಗಿ ರಾತ್ರಿ ವೇಳೆ ಸಾರ್ವಜನಿಕರ ಪ್ರವೇಶ ನಿಷಿದ್ದ ಎಂದು ಸ್ಥಳೀಯರು ಹೇಳುತ್ತಾರೆ, ಇಂತಹ ನಂಬಿಕೆಯಿಂದನೂ ಕೂಡ ಹಲವಾರು ದಶಕಗಳಿಂದ ಓಡೆಬೈರವನಿಗೆ ಮಧ್ಯದ ಆರಾಧನೆಯನ್ನು ಮಾಡುತ್ತಾ ಬಂದಿರುವುದು ಇಂದಿಗೂ ಕೂಡ ಜೀವಂತವಾಗಿದೆ

ನಾಪತ್ತೆಯಾಗಿದ್ದ ವೃದ್ಧ ಕೆರೆಯಲ್ಲಿ ಶವವಾಗಿ

0

ತಾಲೂಕಿನ ಗಿರಿ ಗೌಡನ ಪಾಳ್ಯದ ಉಮೇಶ್ (60) ಹಲವಾರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೇಗೂರು ಕೆರೆಯ ಬಳಿ ಆತನ ಕೆರೆಯ ಬಳಿ ಕೆಲವು ಬಟ್ಟೆ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು ಕೊಳೆತ ವೃತ್ತ ದೇಹವನ್ನು ಕೆರೆಯಿಂದ ತೆಗೆದಿದ್ದಾರೆ

ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೆ ಪೊಲೀಸರು ಜೊತೆಗೂಡಿ ಆರಂಭಿಸಿದ ಕಾರ್ಯಾಚರಣೆ ಮಧ್ಯಾಹ್ನ 3:00 ವರೆಗೆ ಸತತವಾಗಿ ನಡೆಯಿತು ಕೊಳೆತ ದೇಹವನ್ನು ಪೊಲೀಸರು ಪತ್ತೆ ಹಚ್ಚಿ ಸಂಬಂಧಿಕರಿಗೆ ತಲುಪಿಸುವ ಉದ್ದೇಶದಿಂದ ಕುಣಿಗಲ್ ಸಾರ್ವಜನಿಕ ವೈದ್ಯರ ಸಲಹೆ ಮೇರೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಡಿಎನ್ಎ ಪರೀಕ್ಷೆಗಾಗಿ ಕಳುಹಿಸಿದ್ದಾರೆ

ಭಾನುವಾರ ಬೆಟ್ಟ ಹಳ್ಳಿ ಮಠದಲ್ಲಿ ಹಿತೈಷಿಗಳ ಸಮಾವೇಶ

0

ಬೆಟ್ಟಹಳ್ಳಿ ಮಠದಲ್ಲಿ ಜನವರಿ 4ರ ಭಾನುವಾರ ಸಾಧಕರಿಗೆ ಉರಿಲಿಂಗಶ್ರೀ ಮತ್ತು ನೀಲಕಂಠಶ್ರೀ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಬೆಟ್ಟಹಳ್ಳಿ ಮಠವು ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು ಪ್ರತಿವರ್ಷದಂತೆ ಈ ಮಠದಲ್ಲಿ ನಡೆಯುವ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಮಾವೇಶ ಜನವರಿ 4ರ ಭಾನುವಾರ ಏರ್ಪಡಿಸಲಾಗಿದ್ದು

.ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹಳೆಯ ವಿದ್ಯಾರ್ಥಿಗಳು ಹಾಗೂ ಭಕ್ತರು ಆಗಮಿಸಿದ್ದಲ್ಲಿದ್ದಾರೆ ಈ ಬಾರಿ ಉರಿಲಿಂಗ ಪ್ರಶಸ್ತಿಯನ್ನು ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ಎಮ್ ಸುರೇಶ್ ಅವರಿಗೆ ನೀಲಕಂಠ ಪ್ರಶಸ್ತಿಯನ್ನು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಡಿ ಪಿ ದಾಸ ರವರಿಗೆ ಸೇರಿದಂತೆ ಗುರು ರಕ್ಷೆಯನ್ನು ಯಲಿಯೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗಂಗಾಶಾನಯ್ಯ , ಎಸ್ ಎಲ್ ವಿ ವ್ಯವಸ್ಥಾಪಕರಾದ ಕೋಗಟ್ಟ ರಾಜಣ್ಣ ಕುಣಿಗಲ್ ಪುರಸಭಾ ಮಾಜಿ ಅಧ್ಯಕ್ಷರಾದ ರಂಗಸ್ವಾಮಿ ಬೆಂಗಳೂರಿನ ಉದ್ಯಮಿ ಆರ್ ಕುಮಾರ್ ಹಾಗೂ ಮೂಗನಪುರದ ಬಸವರಾಜು ಸೇರಿದಂತೆ ಹಲವಾರು ಸಾಧಕರಿಗೆ ಗುರು ರಕ್ಷೆ ನೀಡಲಿದ್ದೇವೆ

.ಸಂಜೆ 7:00ಗೆ ನಡೆಯುವ ವೇದಿಕೆ ಕಾರ್ಯ ಕ್ರಮಕ್ಕೆ ಹಲವಾರು ಗಣ್ಯರು ರಾಜಕೀಯ ಪ್ರಮುಖ ವ್ಯಕ್ತಿಗಳು ಸೇರಿದಂತೆ ವಿವಿಧ ಭಾಗದಿಂದ ಭಕ್ತರು ಆಗಮಿಸಲಿದ್ದು ಮಠದಲ್ಲಿ ವಾಹನ ವ್ಯವಸ್ಥೆ ಕುಡಿಯುವ ನೀರು ಪ್ರಸಾದ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನ ಮಠ ನಿರ್ವಹಿಸಲಿದೆ

ಕಾಡು ಗೊಲ್ಲರ ಯುವತಿ ಅಪಹರಣಕ್ಕೆ ಯತ್ನ ಯೂಟೂಬರ್ ಸೇರಿದಂತೆ ಹಲವರ ರ ಬಂಧನ!

0
ಕಾಡು ಗೊಲ್ಲರ ಹುಡುಗಿ ಮುಟ್ಟಿ
The wild goose girl touched


ಮಾಗಡಿ ಪಕ್ಕದಲ್ಲಿ ದೂರದಲ್ಲಿರುವ ತಟವಾಳು ಗೊಲ್ಲರಹಟ್ಟಿ ಗ್ರಾಮ ಅಪ್ರಾಪ್ತ ಯುವತಿಯನ್ನು ಅಪಹರಣ ಕಾರಿನಲ್ಲಿ ಅಪಹರಣ ಮಾಡಿದರೂ ಎನ್ನು ಆರೋಪ ಇದೆ

ರವಿ ಕೆಂಪ ಸೇರಿದಂತೆ ಇತರರನ್ನು ಗ್ರಾಮಸ್ಥರೆ ಹಿಡಿದು ಮಾಗಡಿಯ ಠಾಣೆಗೆ ಒಪ್ಪಸಿ ದೂರು ನೀಡಿದ್ದಾರೆ

ಘಟನೆ ಹಿನ್ನೆಲೆ :-
ಹೊಸ ವರ್ಷ ಆಚರಿಸಲೆಂದು ವೆಂಕಟೇಶ್ ಅವರು ತಮ್ಮ ತೋಟದಲ್ಲಿ ಯೂಟೂಬರ್ ಮತ್ತು INSTAGRAM ರೀಲ್ಸ್ ಮೇಕರ್ ಗಳನ್ನು ಕರೆದು, ಮಧ್ಯ ಹಾಗೂ ಬಾಡೂಟ ಏರ್ಪಡಿಸಲಾಗಿತ್ತು ಇನ್ನಲಾಗಿದೆ

ಕಂಠ ಪೂರ್ತಿ ಮದ್ಯ ಹಾಗೂ ಬಾಡೂಟ ಸೇವನೆ ಮಾಡಿದ್ದ ಯೂಟೂಬರ್ ರವಿ ತೋಟದಿಂದ ತಡರಾತ್ರಿ ಗೊಲ್ಲರಹಟ್ಟಿ ಗ್ರಾಮದ ಒಳಗೆ ಪ್ರವೇಶಿಸಿ ಕುಡಿದ ಮತ್ತಿನಲ್ಲಿ ಅಪ್ರಾಪ್ತ ಯುವತಿಯನ್ನು ಸಲುಗೆಯಿಂದ ಮಾತನಾಡಿ ಪುಸಲಾಯಿಸಿ ಯುವತಿ ಬಾಯಿ ಮುಚ್ಚಿ ತನ್ನ ಕಾರಿನ ಒಳಕ್ಕೆ ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಅಪಹರಿಸಿದ್ದು ಕುಡಿದ ಅಮಲಿನಲ್ಲಿದ್ದ ಆರೋಪಿ ದಾರಿ ತಿಳಿಯದೆ ಗ್ರಾಮದ ಸುತ್ತಮುಲ ಪ್ರದೇಶದಲ್ಲಿಯೇ ಸುತ್ತಾಡಿ ಕೊನೆಗೆ ಮೂತ್ರ ವಿಸರ್ಜನೆಗೆ ಕಾರಿನಿಂದಿಳಿದಾಗ ಯುವತಿ ತನ್ನ ಮನೆಯ ಮೊಬೈಲ್ ಅಲ್ಲೇ ಇದ್ದ ಫೋನಿಂದ ಕರೆಮಾಡಿ ತನ್ನನ್ನು ರಕ್ಷಣೆ ಮಾಡುವಂತೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ

ಗ್ರಾಮಸ್ಥರು,ಗ್ರಾಮದ ಸುತ್ತಾಮುತ್ತಾ ಪ್ರದೇಶಗಳಿಗೆ ತಮ್ಮ ವಾಹನಗಳಲ್ಲಿ ತೆರಳಿದ್ದ ಸಮಯದಲ್ಲಿ,ಹುಲಿಯೂರುದುರ್ಗ, ಮಾಗಡಿ ಮುಖ್ಯರಸ್ತೆಯಲ್ಲಿ ಅನುಮಾನಗೊಂಡು ರವಿಯ ಕಾರನ್ನು

ಅಡ್ಡಗಟ್ಟಿದ ಗ್ರಾಮಸ್ಥರಿಗೆ ರವಿ ತನ್ನ ಕೃತ್ಯ ಬಯಲಾಗುತ್ತದೆ ಎಂದು ಎಚ್ಚರಗೊಂಡು ಕಾರನ್ನು ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಮಾಗಡಿ ಕಡೆಗೆ ಹೊರಟಿದ್ದು ಯುವತಿಯ ಸಂಬಂದಿಕರು ರವಿಯ ಕಾರನ್ನು ಸಿನಿಮೀಯ ರೀತಿಯಲ್ಲಿ ತಡೆದು ಸೋಮೇಶ್ವರ ಕಾಲೋನಿಯ ಬಳಿ ಅಡಗಟ್ಟಿದ್ದರ ಪರಿಣಾಮ ರವಿ ತನ್ನ ಕಾರಿನಿಂದ ತಪ್ಪಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿ ಗ್ರಾಮಸ್ಥರ ಕೈಗೆ ಯುವತಿಯ ಸಹಿತ ಸಿಕ್ಕಿಬಿದ್ದಿದ್ದಾನೆ,


ನಂತರ ಯುವತಿಯನ್ನು ರಕ್ಷಿಸಿ ಅಪಹರಣ ಮಾಡಲೆತ್ನಿಸಿದ ಯೂಟಬ್ ರವಿಯನ್ನು ಪೋಲೀಸರ ವಶಕ್ಕೆ ಒಪ್ಪಿಸಿದ ಘಟನೆ ಸಂಭವಿಸಿದ್ದು, ಈ ಸಂಬಂದ ಮಾಗಡಿ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ,

ಆರೋಪಿ ರವಿ ಜೋತೆಯಲ್ಲಿ ತಡರಾತ್ರಿ ಎಣ್ಣೆ ಪಾರ್ಟಿಯಲ್ಲಿ ತೋಡಗಿದ್ದ ಮಂಡ್ಯ ಮೂಲದ ಸಕ್ಕರೆ ನಾಡು ಕೆಂಪ ಎಂಬಾತನಿಗೆ ಮಾಗಡಿ ಪೊಲೀಸ್ ಠಾಣೆಯ ಬಳಿ ಬರುತ್ತಿದ್ದ ಹಾಗೆ ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದರು

ಕುಣಿಗಲ್ ನಲ್ಲಿ ಇದೆ ಸುತ್ತೂರು ಹಿರಿಯ ಶ್ರೀಗಳ ಗದ್ದುಗೆ

0

ಕುಣಿಗಲ್ ಟೌನ್ ಗೆ ಬಂದ ಜಾತ್ರಾ ರಥ

ಸಂಸ್ಥಾನ ಮಠದ ಹಿರಿಯ ಶ್ರೀಗಳಾದ ಘನಲಿಂಗ ಶಿವಯೋಗಿಗಳ ಗದ್ದಿಗೆ ತಪೋ ಕ್ಷೇತ್ರ ಕಗ್ಗರೆಯಲ್ಲಿ ಇದೆ ಹಾಗಾಗಿ ಸುತ್ತೂರು ಮತ್ತು ಕುಣಿಗಲ್ ಗೆ ಧಾರ್ಮಿಕ ಸಂಬಂಧದ ಸೇತುವೆ ಎಂದು ಕುಣಿಗಲ್ ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಸಂತ ಕುಮಾರ್ ತಿಳಿಸಿದ್ದಾರೆ

ಸುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಕುಣಿಗಲ್ ಟೌನ್ ಗೆ ಬಂದ ಜಾತ್ರಾ ರಥವನ್ನ ಸ್ವಾಗತ ಮಾಡಿ ಪೂಜೆ ಸಲ್ಲಿಸಿ ನಂತರ ಮಾತನಾಡಿದರು

ಸುತ್ತೂರು ಮಠದಲ್ಲಿ ಜನವರಿ 15 ರಿಂದ ಪ್ರಾರಂಭವಾಗುವ ಜಾತ್ರೆ ಧಾರ್ಮಿಕ ಸಾಹಿತ್ಯ ಜಾನಪದ ಕ್ರೀಡೆ ಸಂಗೀತ ಸೇರಿದಂತೆ ವೈವಾಹಿಕ ಜೀವನಗಳ ಸೇತುವೆಯಾಗಿದೆ, ಸುತ್ತೂರು ಮಠದ ಜಾತ್ರೆ ಎಂದರೆ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನಮಾನಗಳನ್ನು ಹೊಂದಿದ್ದು ತನ್ನದೇ ಆದ ವಿಶಿಷ್ಟ ಆಚರಣೆಗಳಿಂದ ಕರ್ನಾಟಕ ರಾಜ್ಯದ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಣೆ ಮಾಡುವ ವಿಶೇಷವಾದ ಒಂದು ಆಚರಣೆ ಪುರಾತನ ಕಾಲದಿಂದಲೂ ಕೂಡ ನಡೆದು ಬರುತ್ತಿದೆ.

ಸುತ್ತೂರು ಮಠದ ಆಚರಣೆಗಳ ಜೊತೆಗೆ ಯಡಿಯೂರು ಕ್ಷೇತ್ರದಲ್ಲಿ ಜೀವ ಸಮಾಧಿಯಾಗಿ ಕಗ್ಗೆರೆ ಕ್ಷೇತ್ರದಲ್ಲಿ ತಪಸ್ಸನ್ನು ಆಚರಿಸಿ ತಪೋ ಕ್ಷೇತ್ರವಾಗಿ ಪರಿವರ್ತನೆ ಮಾಡಿದ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ಸುತ್ತೂರು ಸಂಸ್ಥಾನದ ಹಿರಿಯ ಗುರುಗಳಾದ ಶ್ರೀ ಘನಲಿಂಗ ಶಿವಯೋಗಿಗಳ ಗದ್ದಿಗೆ ಇರುವುದರಿಂದ ಕುಣಿಗಲ್ ತಾಲೂಕು ಮತ್ತು ಸುತ್ತೂರಿನ ಉತ್ತಮವಾದ ಧಾರ್ಮಿಕ ಸೇತುವೆ ಇದೆ ಎಂದರು

ಅಂತಹ ಜಾತ್ರೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ತಮ್ಮ ಬದುಕನ್ನ ಸಾರ್ಥಕ ಗೊಳಿಸಬೇಕೆಂದರು ಸಿದ್ದಗಂಗಾ ಮಠದಿಂದ ಆಗಮಿಸಿದ ಸುತ್ತೂರು ರಥಕ್ಕೆ ಕುಣಿಗಲ್ ಪಟ್ಟಣದ ವೀರಶೈವ ಸಮಾಜದ ಹಲವಾರು ಪದಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿ ಅಟವಿ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಸ್ವಾಗತ ಮಾಡಿದರು.ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜಪ್ಪ, ಟೌನ್ ವೀರಶೈವ ಸಮಾಜದ ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಕಗ್ಗೆರೆ ಪ್ರಸಾದ್, ಟೌನ್ ವೀರಶೈವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಚೇತನ್, ನಿರ್ದೇಶಕ ಹೋಟೆಲ್ ಆರಾಧ್ಯ, ನಟರಾಜು,ತಾಲೂಕು ವೀರಶೈವ ಸಮಾಜದ ಕಾರ್ಯದರ್ಶಿ ಇಪ್ಪಾಡಿ ಪರಮಶಿವಯ್ಯ, ಜಾತ್ರಾ ಸಮಿತಿಯ ಸಂಚಾಲಕ ಪಂಚಾಕ್ಷರಿ, ಸೇರಿದಂತೆ ಸಮಾಜದ ಮುಖಂಡರಾದ ಜಗದೀಶ್,ವಿಶ್ವನಾಥ, ಗಂಗಾಧರ ಸೇರಿದಂತೆ ಅರ್ಚಕ ಗಂಗಾಧರಪ್ಪ ಇದ್ದರು

ಪ್ರೀತಿಗಾಗಿ ಲೈವ್ ಮಾಡಿ ಕೊಲೆಯಾದ ಮಾವ

0
ಪ್ರೀತಿಗಾಗಿ ಲೈವ್ ಮಾಡಿ ಕೊಲೆಯಾದ ಮಾವ
ಪ್ರೀತಿಗಾಗಿ ಲೈವ್ ಮಾಡಿ ಕೊಲೆಯಾದ ಮಾವ

ತಾಲೂಕಿನ ಕೊತ್ತಗೆರೆ ಮೂಲದ ಚಲುವ(36) ಕೊಲೆಯಾದ ವ್ಯಕ್ತಿ

ಕಳೆದ 3 ವರ್ಷದಿಂದ ತಮ್ಮ ಸೋದರ ಸಂಬಂಧಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಹುಡುಗಿಗೆ 18 ತುಂಬಿದ ನಂತರ ಓಡಿಹೋಗುವ ಸೂಚನೆಯಿಂದ ಪೋಷಕರು ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು ,

ಈ ಸಂಬಂಧ ಪೇಸ್ ಬುಕ್ ಲೈವ್ ಮಾಡಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆತನನ್ನು ಮಾಗಡಿ ಬಳಿ ಕೊಲೆ ಮಾಡಿ ಬಿಸಾಡಿರುವ ಘಟನೆ ನಡೆದಿದೆ .ಮೃತ ಚಲುವನ ವಯಸ್ಸು36 ಅಪ್ರಾಪ್ತೆ ಬಾಲಕಿ ವಯಸ್ಸು ಕಡಿಮೆ ಇದ್ದ ಕಾರಣ ಹಾಗೂ ಆತನ ಮಧ್ಯವ್ಯಸನ ದುಶ್ಚಟಗಳಿಂದ ಬೇಸತ್ತ ಸಂಬಂಧಿಕರು ಚಲುವನ ಪ್ರೀತಿಗೆ ಅಡ್ಡ ಬಂದು ಆತನಿಗೆ ಬುದ್ದಿ ಹೇಳಿ ದೂರ ಇಟ್ಟಿದ್ದರು ,

ಬಾಲಕಿಗೆ 18 ತುಂಬಿದ ನಂತರ ಓಡಿಹೋಗುವ ಮುನ್ಸೋಚನೆಯಿಂದ ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು , ಪ್ರೇಯಸಿ ಕಾಣೆಯಾಧ ಸಂಬಂದ ಕೋಪಗೊಂಡ ಚಲುವ ತನ್ನ ಫೆಸ್ ಬುಕ್ ಲೈವ್ ನಲ್ಲಿನನ್ನ ಹುಡುಗಿಗೆ ಹೊಡೆದಿದ್ದೀರಾ ಆಕೆಗೆ ಹಿಂಸೆ ಕೊಟ್ಟಿದ್ದೀರಾ ಜೈಲಿನಲ್ಲಿ ನೀಡುವ ರೀತಿ ಹಿಂಸೆ ಕೊಟ್ಟಿದ್ದಿರಾ ನನ್ನ ಹುಡುಗಿಯನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ, ಅವಳಿಗೆ ಪೋನ್ ನೀಡಿ ಎಂದು ಬೆದರಿಕೆ ಹಾಕಿ ಮಾಗಡಿ ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಇದ್ದರೂ ಬಿಡುವುದಿಲ್ಲ ಅವಳಿಗಾಗಿ ನೀವು ಎಷ್ಟು ಖರ್ಚು ಮಾಡಿದರು ಪ್ರಯೋಜನವಿಲ್ಲ ಎಂದು ಲೈವ್ ಮಾಡಿ ಬೆದರಿಕೆ ಹಾಕಿದ್ದಾನೆ

ಇದರಿಂದ ಆಕ್ರೋಶಗೊಂಡಕಾಕೆಯ ಕೆಲವು ಸಂಬಂಧಿಕರು ಮಾಗಡಿ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದು ಸ್ಥಳಲ್ಲೆ ಕುಣಿಗಲ್ ಸಿಪಿಐ ಮಾಧ್ಯನಾಯಕ್ ತಮ್ಮ ಸಿಬ್ಬಂದಿ ಜೊತೆ ಹೋಗಿ ಶವವನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

ರಾಜಕೀಯ ಹತಾಶಗೊಂಡ ಕುಣಿಗಲ್ ಶಾಸಕ – ಶಿವಣ್ಣ ಆರೋಪ

0
Kunigal MLA frustrated with politic
Kunigal MLA frustrated with politic

ಕುಣಿಗಲ್ :-ಸಹಕಾರಿ ಕ್ಷೇತ್ರಕ್ಕೆ ಅಧಿಕಾರ ಹಿಡಿಯಬೇಕೆಂಬ ಆಸೆ ವಿಫಲದ ಹಿನ್ನೆಲೆಯಲ್ಲಿ ಶಾಸಕರು ಹತಾಶರಾಗಿದ್ದಾರೆ ಎಂದು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಆರೋಪಿಸಿದ್ದಾರೆ

ವಿಧಾನಸಭೆಯಲ್ಲಿ ಕುಣಿಗಲ್ ನ ಪಿ ಎಲ್ ಡಿ ಬ್ಯಾಂಕ್ ಬಗ್ಗೆ ಮಾತನಾಡಿದ ಕುಣಿಗಲ್ ಶಾಸಕರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಮಾತನಾಡಿದರು

ತಾಲೂಕಿನಲ್ಲಿ 4 ಲಕ್ಷ ಪಾಣಿ ಇದೆ ಎಂದು ಹಾಗೂ 1 ಲಕ್ಷ ರೈತರಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿರುತ್ತಾರೆ ಅದರಲಿ. ಒಬ್ಬರ ಹೆಸರಲ್ಲಿ ಮೂರು ಅಥವಾ ನಾಲ್ಕು ಪಾಣಿ ಇರುತ್ತದೆ ಉದಾಹರಣೆಗೆ 10 ಕುಂಟೆ 20 ಕುಂಟೆ 5 ಗುಂಟೆ 3 ಕುಂಟೆ ಹೀಗೆಲ್ಲ ಇರುತ್ತದೆ

ಬೆಳೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕು, ಗ್ರಾಮೀಣ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕುಗಳು ಉದಾಹರಣೆಗೆ ಕೆನರಾ ಬ್ಯಾಂಕು ಐಡಿಬಿಐ ಬ್ಯಾಂಕು ಕರ್ನಾಟಕ ಬ್ಯಾಂಕ್ ಕಾವೇರಿ ಗ್ರಾಮೀಣ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಹೀಗೆ ಹಲವಾರು ಬ್ಯಾಂಕ್ ಗಳು ಸಾಲ ರೈತರಿಗೆ ನೀಡುತ್ತಿದ್ದು ಎರಡು ಮೂರು ಬ್ಯಾಂಕ್ ಗಳಲ್ಲಿ ನೀಡಲು ಸಾಧ್ಯವಿಲ್ಲ ಎಂಬುದು ಶಾಸಕರಿಗೆ ತಿಳಿದಿಲ್ಲವೇ ಎಂದರು,

ಯಾವುದಾದರೂ ಒಂದು ಬ್ಯಾಂಕಲ್ಲಿ ರೈತ ಸಾಲ ತೆಗೆದುಕೊಂಡರೆ ಮತ್ತೊಂದು ಬ್ಯಾಂಕಿನಲಿ.. ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಇದಲ್ಲದೆ ತಂದೆ ತಾಯಿ ತಾತಂದಿರ ಹೆಸರಲ್ಲಿ ಪಾಣಿ ಇದ್ದು ಮರಣ ಹೊಂದಿದ್ದರು ಪಾಣಿಗಳು ಬದಲಾಯಿಸಿಕೊಂಡಿರಲ್ಲ ಇದರಿಂದ ಪಾಣಿದಾರರ ಸಂಖ್ಯೆ ಒಂದು ಮನೆಯಲ್ಲಿ ಹೆಚ್ಚು ಕಾಣುತ್ತವೆ

ನಮ್ಮ ತಾಲೂಕಿನಲ್ಲಿ ಬ್ಯಾಂಕಿನಿಂದ ಪ್ಯಾಕ್ಸ್ ಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ 10843 ರೈತರಿಗೆ 37.98 ಕೋಟಿಗಳ ಸಾಲ ನೀಡಲಾಗಿದೆ,

ನಮ್ಮ ತಾಲೂಕಿನಿಂದ 79 ರೈತರಿಗೆ ಕೃಷಿ ಅಭಿವೃದ್ಧಿಗಾಗಿ ವಾರ್ಷಿಕ 3% ಬಡ್ಡಿ ದರದಲ್ಲಿ, 4.91 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ.

ಬ್ಯಾಂಕಿಂಗ್ ನಲ್ಲಿ, ಆರ್ಥಿಕ ವರ್ಷ ಏಪ್ರಿಲ್ ನಿಂದ ಮಾರ್ಚ್ ವರೆಗೂ ಇರುತ್ತದೆ 9 ತಿಂಗಳಲ್ಲಿ. ಇಷ್ಟು ರೈತರಿಗೆ ಸಾಲ ನೀಡುತ್ತೇವೆ ಮುಂದಿನ 3 ತಿಂಗಳಲ್ಲಿ ಇನ್ನಷ್ಟು ರೈತರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂಬುದುನಮ್ಮ ತಾಲೂಕಿನಿಂದ 729 ರೈತರಿಗೆ ಪಹಣಿ ಪಡೆದು ಕಡಿಮೆ ಬಡ್ಡಿ ದರದಲ್ಲಿ.. 16 ಕೋಟಿ 59 ಲಕ್ಷ ಚಿನ್ನಾಭರಣ ಸಾಲ ನೀಡಲಾಗಿರುತ್ತದೆ.

ನಮ್ಮ ಬ್ಯಾಂಕಿನಿಂದ ಒಟ್ಟು 12,000 ರೈತರಿಗೆ ಅನುಕೂಲವಾಗಿದೆ 107 ಕೋಟಿ 17 ಲಕ್ಷ ಸಾಲ ರೈತರಲ್ಲದೆ ಬೇರೆ ಗ್ರಾಹಕರಿಗೆ ಗೃಹ ನಿರ್ಮಾಣ ವಾಹನ ಸಾಲ ಹಾಗೂ ಇನ್ನಿತರೆ ಸಾಲಗಳು ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುತ್ತೇವೆ.

ಡಿಸಿಸಿ ಬ್ಯಾಂಕ್ ನಿಂದ ಕೆಸಿಸಿ ಸಾಲ ನೀಡುವಾಗ ನಬಾರ್ಡ್ ಹಾಗೂ ಅಪೇಕ್ಸ್ ಬ್ಯಾಂಕ್ ಹೊರತುಪಡಿಸಿ ಯಾವುದೇ ಅನುದಾನ ಸರ್ಕಾರದಿಂದ ಇರುವುದಿಲ್ಲ.. ನಾವು ಡಿಪೋಸಿಟ‌ರ್ ಹಣದಿಂದಲೇ ಸಾಲ ನೀಡಬೇಕು

ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್ ಬೇಕು ಬೇರೆ ವ್ಯವಹಾರ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌, ತೆರಳುತ್ತಾರೆ ಆದ್ದರಿಂದ ಎಲ್ಲರೂ ಡಿಸಿಸಿ ಬ್ಯಾಂಕ್ ನಲ್ಲಿ.. ವ್ಯವಹಾರ ನಡೆಸಿ ಮುಂದಿನ ದಿನಗಳಲ್ಲಿ.. ಇನ್ನೂ ಹೆಚ್ಚು ರೈತರಿಗೆ ಸಾಲ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ

ಸಹಕಾರ ಸಂಘಗಳಲ್ಲಿ ಮರಣ ಹೊಂದಿ ಸುಸ್ತಿಯಾಗಿರುವ ರೈತರ ಪರವಾಗಿ ಮೃತ ರೈತರ ಸಾಲ ಮನ್ನಾವನ್ನು ನಮ್ಮ ಬ್ಯಾಂಕಿನ ಸ್ವಂತ ಬಂಡವಾಳದಿಂದ ಮನ್ನಾ ಮಾಡಲಾಗುತ್ತಿದೆ ಈ ಯೋಜನೆಗಳು ತುಮಕೂರು ಡಿಸಿಸಿ ಬ್ಯಾಂಕ್ನಿಂದ ಮಾತ್ರ ಮಾಡುತ್ತಿರುತ್ತೇವೆ ಎಂದರು.ಸಂಘ ಸೂಕ್ತ ಸಮಯದಲ್ಲಿ ಚುನಾವಣಾ ನಡೆಸದೇ ಇರುವ ಕಾರಣ ಆ ಸಂಘಕ್ಕೆ ಆಡಳಿತ ಅಧಿಕಾರಿ ಹಾಕಿರುತ್ತಾರೆ.ನಮ್ಮ ಜನರು ಹಾಗೂ ರೈತರುಗಳು ಸಹಕಾರ ಸಂಘಗಳ ಮುಂದೆ ಬಿಸಿಲಿನಲ್ಲಿ ಮಳೆಯಲ್ಲಿ ಪರದಾಡಿಕೊಂಡು ರೇಷನ್‌ ತೆಗೆದುಕೊಳ್ಳುವುದನ್ನು ಗಮನಿಸಿ ನಿರ್ದೇಶಕರ ಮೂಲಕ ಇವರಿಗೆ ತೊಂದರೆಯಾಗದಂತೆ ಶೀಟ್ ಗಳನ್ನು ಈಗಾಗಲೇ 12 ಸಹಕಾರ ಸಂಘಗಳಿಗೆ ಅಳವಡಿಸಿ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತಿದ್ದೇವೆ ಸಹಕಾರ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಬೇಕೆಂದು ಆಸೆಯಿಂದ ಬಂದಂತ ಶಾಸಕರು ಸೋಲು ಅನುಭವಿಸಿದರು ಇದರಿಂದ ಆತಾಶಗೊಂಡು ವಿಧಾನಸಭೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿವೆ, ಯಾವ ರೀತಿ ಕಾರ್ಯನಿರ್ವಹಿಸುತ್ತೇವೆ ಆ ಸಮಸ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ ವ್ಯಾಪ್ತಿ ಮತ್ತು ಚಟುವಟಿಕೆ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯಲಿ ಎಂದು ಸಲಹೆ ನೀಡಿದರುಈ ಸಂದರ್ಭದಲ್ಲಿಟಿಎಪಿಎಂಎಸ್ ಉಪಾಧ್ಯಕ್ಷರಾದ ಕೆಜಿ ಶ್ರೀನಿವಾಸ್ ಹಾಗೂ ನಿರ್ದೇಶಕರಾದ ರಂಗಸ್ವಾಮಿ ಕೃಷ್ಣೇಗೌಡ , ಜೆಡಿಎಸ್ ವಕ್ತಾರ ಪ್ರಕಾಶ್ , ಗ್ರಾ.ಪಂ ಮಾಜಿ ಸದಸಯ ಮಂಜುನಾಥ್ ಸೇರಿದಂತೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು

ಮಂಗಳ ಡ್ಯಾಮ್ ಅಭಿವೃದ್ಧಿ ನಮ್ಮ ಜವಾಬ್ದಾರಿ ಶಾಸಕ ರಂಗನಾಥ್

0
ಕೆರೆಏರಿ ನಿರ್ವಹಣೆ
ಕೆರೆಏರಿ ನಿರ್ವಹಣೆ

ಕುಣಿಗಲ್ :-ತಾಲೂಕಿನ ಮಂಗಳ ಜಲಾಶಯದಲ್ಲಿ ಉಂಟಾಗಿದ್ದ ನೀರಿನ ಸೋರಿಕೆ ಅರಿವು ನಿಂತ ಬಳಿಕ ಶಾಸಕ ಡಾಕ್ಟರ್ ರಂಗನಾಥ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಪೂರ್ಣ ಅಭಿವೃದ್ಧಿ ಜವಾಬ್ದಾರಿಯನ್ನು ಮಾಡುತ್ತೇವೆ ಎಂದರು

ಕಳೆದ ಒಂದು ದಿನಗಳಿಂದ ನಿರಂತರವಾಗಿ ಜಲಾಶಯದಿಂದ ಹೊರ ಹೋಗುತ್ತಿದ್ದ ನೀರನ್ನು ಅಧಿಕಾರಿಗಳು ಸಂಪೂರ್ಣ ನಿಲ್ಲಿಸುವಲ್ಲಿ ಯಶಸ್ವಿ ಆಗಿದ್ದಾರೆ

ಮುಂದಿನ ದಿನಗಳಲ್ಲಿ ತಾಂತ್ರಿಕ ಅಧಿಕಾರಿಗಳ ಸಲಹೆ ಮೇರೆಗೆ ನೀರಿನ ಅರಿವು ಹಾಗೂ ತೂಬಿನ ದುರಸ್ತಿ ಮತ್ತು ಉಂಟಾಗಿರುವ ರಂದ್ರವನ್ನು ಮುಚ್ಚುವ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಡ್ಯಾಮ್ ಏರಿಯ ಅಗಲೀಕರಣ ಕ್ರಶ್ ಗೇಟ್ ಗಳ ದುರಸ್ತಿ ವಿದ್ಯುತೀಕರಣ ಹಾಗೂ ಸೇತುವೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಶಾಶ್ವತ ಕಾಮಗಾರಿಗಳನ್ನು ಮಾಡುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಅವರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ ತುರ್ತು ಹಿನ್ನೆಲೆಯಲ್ಲಿ ಕೆರೆಏರಿ ನಿರ್ವಹಣೆ ಮಾಡಲು ಸಂಪೂರ್ಣ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸುತ್ತಿದ್ದೇವೆ ಎಂದರುಈ ಸಂದರ್ಭದಲ್ಲಿ ಹೇಮಾವತಿ ಇಲಾಖೆಯ ಚೀಫ್ ಇಂಜಿನಿಯರ್ ಫಣಿರಾಜು ಸೂಪರ್ ಡೆಂಟ್

ಕೆ ಎಮ್ ಬಿಂದಿ, ಎ ಇ ಇ ರುದ್ರೇಶ್ ಇಂಜಿನಿಯರ್ ವೀಣಾ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು