ಕುಣಿಗಲ್ :-
ರಾಗಿ ಖರೀದಿಯ ನೋಂದಣಿ ದಿನಾಂಕ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ನೋಂದಣಿ ಸಿಬ್ಬಂದಿಯನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸಿದರು .
ಡಿಸೆಂಬರ್ 15ರ ಸೋಮವಾರ ರಾಗಿ ಖರೀದಿ ಕೇಂದ್ರದ ನೊಂದಣಿ ಪ್ರಕ್ರಿಯೆ ಅಂತ್ಯವಾಗುತ್ತದೆ ಎಂದು ಖರೀದಿ ಕೇಂದ್ರದ ಮುಂದೆ ನಾಮಫಲಕವನ್ನು ಹಾಕಲಾಗಿತ್ತು ಆದರೆ ಖರೀದಿ ಪ್ರಕ್ರಿಯೆ ಮಧ್ಯಾಹ್ನದ ಅಂತ್ಯಕ್ಕೆ ಬಂದ ಆದ ಹಿನ್ನೆಲೆಯಲ್ಲಿ ನೂರಾರು ರೈತರು ಅಧಿಕಾರಿಗಳ ಮೇಲೆ ಮಾತಿನ ಸಮರಕ್ಕೆ ಹೇಳಿದರು ಈ ಸಂದರ್ಭದಲ್ಲಿ ಖರೀದಿ ಕೇಂದ್ರದ ಅಧಿಕಾರಿಗಳು ಸಂಬಂಧಪಟ್ಟ ರೈತರಿಂದ ಪಹಣಿ ಅಥವಾ ಆಧಾರ್ ಕಾರ್ಡ್ ನಕಲು ಪಡೆದು ರೈತರನ್ನು ವಾಪಸ್ ಕಳಿಸುವ ಕೆಲಸ ಆರಂಭಿಸಿದರು ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ಗೋಡೌನ್ ಒಳಗೆ ಕೂಡಿಹಾಕಿ ಬಾಗಿಲು ಮುಚ್ಚಿ ಪ್ರತಿಭಟನೆಗೆ ಮುಂದಾದರು.

ವಿಷಯ ತಿಳಿದ ತಹಸೀಲ್ದಾರ್ ರಶ್ಮಿ ಯು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಯನ್ನು ಆಲಿಸಿದರು ಈ ಸಂದರ್ಭದಲ್ಲಿ ರೈತರು ಅಕ್ರಮವಾಗಿ ರಾಗಿ ಸಂಗ್ರಹ ಮಾಡಿರುವ ದಳ್ಳಾಳಿಗಳು ಹೆಚ್ಚು ನೋಂದಣಿ ಮಾಡಿಸಿಕೊಂಡಿದ್ದಾರೆ ಆದರೆ ನಾವು ರೈತರು ಇದುವರೆಗೂ ಕೂಡ ರಾಗಿ ಖರೀದಿ ಕೇಂದ್ರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ನಮ್ಮ ಹೊಲಗಳಲ್ಲಿ ರಾಗಿ ಕಟಾವು ಮಾಡುವ ಒಕ್ಕಣೆ ಮಾಡುವ ಕೆಲಸದಲ್ಲಿ ತಲ್ಲೀನರಾಗಿದ್ದೇವೆ ಇಂತಹ ಸಂದರ್ಭದಲ್ಲಿ ಈ ಕೆಲಸ ಮಾಡಿದರೆ ಎಷ್ಟು ಸುರಕ್ಷತೆ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಕದ ಬೆಂಗಳೂರಿನಲ್ಲಿ ರಾಗಿ ಉಳಿಕೆಯನ್ನು ಹಲವರು ಕಾಳಸಂತೆಕೋರರು ನಕಲಿ ಕಾರ್ಡ್ ಗಳು ಅಥವಾ ನ್ಯಾಯ ಬೆಲೆ ಅಂಗಡಿಗಳಿಂದ ಖರೀದಿಸಿ ಪುನಃ ನಕಲಿ ರೈತರು ಅಥವಾ ರಾಗಿ ಬೆಳೆದಿರದ ತೆಂಗು ಅಥವಾ ಅಡಿಕೆ ಹೊಂದಿರುವ ರೈತರ ದಾಖಲಾತಿಗಳನ್ನು ರಾಗಿ ಎಂದು ತಿದ್ದುಪಡಿ ಮಾಡುವ ಮುಖಾಂತರ ಸರ್ಕಾರಕ್ಕೆ ದ್ರೋಹ ಮಾಡುತ್ತಿದ್ದಾರೆ ಅಂತಹ ದೊಡ್ಡ ಜಾಲವನ್ನು ತಕ್ಷಣ ಪತ್ತೆ ಹಚ್ಚಿ ತನಿಖೆ ನಡೆಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಸಿಲ್ದಾರ್ ರಶ್ಮಿ ಯು ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಮತ್ತು ರಾಗಿ ಖರೀದಿ ಕೇಂದ್ರದ ಸಮಯವನ್ನು ವಿಸ್ತಾರ ಮಾಡಲು ಅವಕಾಶ ಕೋರುವಂತೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿ ರೈತರಿಗೆ ಅನುಕೂಲ ಮಾಡುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಹಲವಾರು ರೈತರು ಹಾಜರಿದ್ದರು

