ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತುಮಕೂರು ಭಾಗಕ್ಕೆ ಬಸ್ ಗಳ ಸಮಸ್ಯೆ ಉಂಟಾಗಿದೆ ಇದರಿಂದ ಕಾಲೇಜು ವಿಳಂಬ ಆಗುತ್ತಿದೆ ಎಂದು ನೂರಾರು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟಿಸಿದರು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕುಣಿಗಲ್ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಗೌಡಗೆರೆ ಕ್ಷೇತ್ರಕ್ಕೆ ಅತಿಯಾದ ಬಸ್ ಗಳನ್ನು ಬಿಡಲಾಗಿದೆ ಮೈಸೂರಿನಿಂದ ತುಮಕೂರಿಗೆ ಹೋಗುವ ಬಸ್ ಗಳು ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ಹಾಗೂ ಅದರಲ್ಲಿ ಕೂರಲು ನಿಲ್ಲಲು ಜಾಗ ಇಲ್ಲದ ಕಾರಣದಿಂದ ಸರಿಯಾದ ಸಮಯಕ್ಕೆ ಕಾಲೇಜು ತಲುಪಲು ಆಗುತ್ತಿಲ್ಲ ಇದರಿಂದ ನಮ್ಮ ಶಿಕ್ಷಣ ಹಾಳಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು

ಪ್ರತಿದಿನ ಬಸ್ ನಲ್ಲಿ ಮಹಿಳೆಯರು ಹೆಚ್ಚಾಗಿ ಪ್ರಯಾಣಿಸುತ್ತಿದ್ದು ವಿದ್ಯಾರ್ಥಿಗಳಿಗೆ ಸೀಟ್ ಸಿಗುವುದಿಲ್ಲ ಸ್ಥಳಾವಕಾಶವು ಕೂಡ ಇರುವುದಿಲ್ಲ ನಿತ್ಯದ ಸಮಸ್ಯೆ ಕೇಳುತ್ತಿಲ್ಲ ಹಲವಾರು ಬಾರಿ ಈ ಸಂಬಂಧ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಅವರು ಗೌಡಗೆರೆ ಅಥವಾ ಇತರ ಕ್ಷೇತ್ರಗಳಿಗೆ ಬಸ್ ಬಿಡುವ ಮನಸ್ಸು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಹಲವಾರು ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಮನವೊಲಿಸುವಲ್ಲಿ ಹರಸಾಹಸ ಪಡಬೇಕಾಯಿತು ನಂತರ ಬಂದ ಬಸ್ ಗಳನ್ನು ವಿದ್ಯಾರ್ಥಿಗಳಿಗೆ ಮೀಸಲಿರಿಸಿ ತುಮಕೂರಿಗೆ ಕಳುಹಿಸಿಕೊಡಲಾಯಿತು.

